ಕಾರೇಬೈಲು: ರಸ್ತೆಯ ಒಂದು ಪಾರ್ಶ್ವ ಕುಸಿತ
Team Udayavani, Aug 18, 2018, 6:40 AM IST
ಕುಂದಾಪುರ: ಶಂಕರನಾರಾಯಣ – ಸಿದ್ದಾಪುರ ಜಿಲ್ಲಾ ಮುಖ್ಯ ರಸ್ತೆಯ ಕಾರೇಬೈಲುವಿನ ಗಾಡಿಜೆಡ್ಡು ಎನ್ನುವಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರಸ್ತೆಯ ಒಂದು ಬದಿಯ ಪಾಶ್ವ ಕುಸಿದಿದ್ದು, ವಾಹನಗಳ ಸಂಚಾರಕ್ಕೆ ಆತಂಕ ಎದುರಾಗಿದೆ.
ಈ ರಸ್ತೆಯು ಕುಂದಾಪುರ – ಶಿವಮೊಗ್ಗ ರಸ್ತೆಗೂ ಸಂಪರ್ಕ ಕಲ್ಪಿಸುತ್ತಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ಮುನ್ನೆಚ್ಚರಿಕೆ ಕ್ರಮ ರಸ್ತೆಯ ಒಂದು ಪಾರ್ಶ್ವ ಕುಸಿದ ಬಗ್ಗೆ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಅವರು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಕಡೆ ಬ್ಯಾರಿಕೇಡ್ ಇಡಲಾಗಿದೆ. ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.