ಕರಾವಳಿ ಕಾವಲು ಪಡೆಯಲಿಲ್ಲ ರಕ್ಷಣಾ ಬೋಟು


Team Udayavani, Aug 23, 2018, 6:00 AM IST

costguard.jpg

ಕುಂದಾಪುರ: ಕಡಲ ತೀರದ ರಕ್ಷಣೆ ಮತ್ತು ಕಡಲಿನಲ್ಲಿ ಬೋಟುಗಳು ಅವಘಡಕ್ಕೆ ತುತ್ತಾದರೆ  ತುರ್ತು ಕಾರ್ಯಾಚರಣೆ ನಡೆಸಬೇಕಾಗಿರುವುದು ಕರಾವಳಿ ಕಾವಲು ಪಡೆ. ಆದರೆ ಉಡುಪಿ ಜಿಲ್ಲೆಯಲ್ಲಿ ಈ ಪಡೆಗೆ ಒಂದೇ ಒಂದು ಬೋಟಿನ ವ್ಯವಸ್ಥೆ ಇಲ್ಲ. ಇದ್ದ ಬೋಟು ಕೂಡ ಕೆಟ್ಟು ನಿಂತಿದೆ.
  
ಜಿಲ್ಲೆಯಲ್ಲಿ ವ್ಯಾಪಕ ಮೀನುಗಾರಿಕಾ ಬೋಟುಗಳಿವೆ. ಸಾವಿರಾರು ಮಂದಿ ಮೀನುಗಾರರೂ ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ. ಆದರೆ ಕರಾವಳಿ ಕಾವಲುಪಡೆ ಸೂಕ್ತ ವ್ಯವಸ್ಥೆ ಹೊಂದಿಲ್ಲ.  

ಕೆಲ ದಿನಗಳ ಹಿಂದೆ ಮಲ್ಪೆಯಲ್ಲಿ 2 ಹಾಗೂ ಗಂಗೊಳ್ಳಿಯಲ್ಲಿ 1 ಬೋಟು ನೆರೆಗೆ ತುತ್ತಾಗಿ ಸಮುದ್ರದ ಮಧ್ಯೆ ಅಪಾಯದಲ್ಲಿ ಸಿಲುಕಿದ್ದಾಗ ಅಲ್ಲಿಗೆ ತೆರಳಿ ರಕ್ಷಣೆ ಮಾಡಬೇಕಾದ ಕರಾವಳಿ ಕಾವಲು ಪಡೆಯಲ್ಲಿ ಬೋಟೇ ಇರಲಿಲ್ಲ. ಆ ಬಳಿಕ ಮಲ್ಪೆಯಲ್ಲಿ ದಡದಲ್ಲಿ ನಿಲ್ಲಿಸಿದ್ದ ಬೊಟುಗಳು ಅಲೆಗಳ ಅಬ್ಬರಕ್ಕೆ ಸಿಕ್ಕಾಗಲೂ ಸೂಕ್ತ ಕಾರ್ಯಾಚರಣೆಗೆ ಅನುಕೂಲತೆ ಇರಲಿಲ್ಲ. ಮಲ್ಪೆಯು ಉಡುಪಿ ಜಿಲ್ಲೆಯ ಕರಾವಳಿ ಪಡೆಯ ಹೆಡ್‌ ಕ್ವಾರ್ಟರ್ಸ್‌ ಆಗಿದ್ದು, ಇಲ್ಲಿಯೇ ಇದ್ದ 3 ಬೋಟುಗಳು ದುರಸ್ತಿಗಾಗಿ ಕಳುಹಿಸಲಾಗಿದೆ.

3 ಜಿಲ್ಲೆಯಲ್ಲಿ 2 ಕಡೆ ಮಾತ್ರ
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ರಾಜ್ಯದ 3 ಕರಾವಳಿ ಜಿಲ್ಲೆಗಳಾಗಿದ್ದು, ಈ ಪೈಕಿ ಕೇವಲ ಮಂಗಳೂರು ಹಾಗೂ ಕಾರವಾರದಲ್ಲಿ ಮಾತ್ರ ಕಾವಲು ಪಡೆಯಲ್ಲಿ ಸರಿಯಾದ ಬೋಟಿನ ವ್ಯವಸ್ಥೆಯಿದೆ. ಮಲ್ಪೆಯಲ್ಲಿ 3 ಬೋಟುಗಳಿದ್ದರೂ, ಅದನ್ನು ರಿಪೇರಿಗೆ ನೀಡಲಾಗಿದೆ. ಪ್ರಮುಖ ಬಂದರುಗಳಾದ ಹೆಜಮಾಡಿ, ಗಂಗೊಳ್ಳಿ, ಭಟ್ಕಳದಲ್ಲಿ ಮಾತ್ರ ಒಂದೇ ಒಂದು ಬೋಟಿಲ್ಲ. 

ಪ್ರಸ್ತಾವನೆ ಕಳುಹಿಸಲಾಗಿದೆ
ಗಂಗೊಳ್ಳಿ ಹಾಗೂ ಹೆಜಮಾಡಿಯಲ್ಲಿ ಬೇಡಿಕೆಯಿದ್ದು, ಈಗಾಗಲೇ ಕಾವಲು ಪಡೆಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಅದು ಕೇಂದ್ರದಿಂದ ಮಂಜೂರಾಗಿ ಬರಬೇಕಿದೆ. ಮಲ್ಪೆಯಲ್ಲಿ 3 ಬೋಟುಗಳಿದ್ದು, ಮಳೆಗಾಲವಾದ್ದರಿಂದ ದುರಸ್ತಿಗೆ ಕಳುಹಿಸಲಾಗಿದೆ. 
– ಜೈಶಾಂತ್‌,ಡಿವೈಎಸ್‌ಪಿ,ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆ

ಮೀನುಗಾರರಿಗೆ ರಕ್ಷಣೆಯಿಲ್ಲ
ದಿನ ಬೆಳಗಾದರೆ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕಡಲಿನಲ್ಲಿ ಎಲ್ಲ ದಿನಗಳು ಒಂದೇ ರೀತಿಯ ವಾತಾವರಣ ಇರುವುದಿಲ್ಲ. ಆದರೆ ನಮ್ಮ ಉಡುಪಿ ಜಿಲ್ಲೆಯ ಕರಾವಳಿ ಕಾವಲು ಪಡೆಯಲ್ಲಿ ಮಾತ್ರ ಒಂದೇ ಒಂದು ಬೋಟು ಇಲ್ಲದಿರುವುದು ಮಾತ್ರ ನಮ್ಮ ದುರಂತ. ಹಿಂದೊಮ್ಮೆ ಶಾಸಕರಾಗಿದ್ದ ಗೋಪಾಲ ಪೂಜಾರಿಯವರು ಕಾವಲು ಪಡೆಗೆ ಹೆಲಿಕಾಪ್ಟರ್‌ ಕೊಡಲಾಗುವುದು ಎಂದಿದ್ದರು. 
– ಸಂಜೀವ ಖಾರ್ವಿ, 
ಮೀನುಗಾರರು ಮರವಂತೆ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.