ಬಗೆಹರಿಯದ ತಾತ್ಕಾಲಿಕ ತ್ಯಾಜ್ಯ ಘಟಕ ಸಮಸ್ಯೆ


Team Udayavani, Aug 23, 2018, 6:00 AM IST

2208kota6e.jpg

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಭಗವತಿ ವಾರ್ಡ್‌ ಪ್ರಮುಖ ಬೇಡಿಕೆ ತ್ಯಾಜ್ಯ ಘಟಕದ ಸ್ಥಳಾಂತರ. ಇಲ್ಲಿ ಹಲವೊಂದು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ, ಬೇಡಿಕೆಗಳ ಪಟ್ಟಿ ಪೂರ್ಣಗೊಂಡಿಲ್ಲ.

ಕೋಟ: ಭಗವತಿ ವಾರ್ಡ್‌  ಗುಂಡ್ಮಿ ಗ್ರಾಮಕ್ಕೆ ಒಳಪಟ್ಟ ಸಾಲಿಗ್ರಾಮ ಪ.ಪಂ.ನ 12ನೇ ವಾರ್ಡ್‌. ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮದ ಸುಹಾಸ ಮನೆಯಿಂದ ಚೇಂಪಿ ದೇವಸ್ಥಾನದ ಮಗ್ಗೊàಡು ತನಕ ಪಶ್ಚಿಮಕ್ಕೆ  ಹೊಳೆಯ ವರೆಗೆ. ಉತ್ತರಕ್ಕೆ ಸುಹಾಸ ಮನೆಯಿಂದ ಪಶ್ಚಿಮಕ್ಕೆ ಗುಂಡ್ಮಿ-ಪಾರಂಪಳ್ಳಿ ಗಡಿಯ ನೀರು ತೋಡಿನ ವರೆಗೆ, ದಕ್ಷಿಣಕ್ಕೆ ಮಗ್ಗೊàಡು ರಸ್ತೆಯಿಂದ ನೀರು ತೋಡು ವರಗೆ ತನ್ನ ವ್ಯಾಪ್ತಿಯನ್ನು ಹೊಂದಿದೆ.

ಆಶೋತ್ತರ ಈಡೇರಿಕೆಯ ಜವಾಬ್ದಾರಿ
ಹಿಂದೆ  ತಗ್ಗಿನ್‌ಬೈಲು ವಾರ್ಡ್‌ ಇರುವಾಗ  2002ರಲ್ಲಿ  ಜಯಪ್ರಕಾಶ್‌ ಹೆಗ್ಡೆ ಬೆಂಬಲಿತ ವಿನಯ್‌ ಕಬ್ಯಾಡಿ ಜಯಗಳಿಸಿದ್ದರು  ಹಾಗೂ 2008 ಮತ್ತು  2013 ಎರಡು ಅವಧಿಗೆ ಬಿಜೆಪಿಯ ಉದಯ ಪೂಜಾರಿ ಸದಸ್ಯರಾಗಿ ಆಯ್ಕೆಗೊಂಡಿದ್ದರು.   

ಈ ಬಾರಿ ವಾರ್ಡ್‌ ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದು   ಬಿಜೆಪಿಯಿಂದ ಆನಂದ ಹಾಗೂ  ಕಾಂಗ್ರೆಸ್‌ನಿಂದ  ಸುನೀತಾ ಕಣದಲ್ಲಿದ್ದಾರೆ. ಎರಡು ಪಕ್ಷಗಳ ನಡುವೆ ಇಲ್ಲಿ ನೇರ ಹಣಾ-ಹಣಿ ನಡೆಯಲಿದೆ. ಸದ್ಯ ಈ ವಾರ್ಡ್‌ನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ತಾತ್ಕಾಲಿಕ ತ್ಯಾಜ್ಯ ಸಂಗ್ರಹಣಾ ಘಟಕ. ಹಳೇಕೋಟೆ ಮೈದಾನದ ಜಾಗದಲ್ಲೇ ಇಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದರಿಂದ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ಇನ್ನಿಲ್ಲದ ಸಮಸ್ಯೆಯಾಗಿ ಪರಿಣಮಿಸಿದೆ. ಹೊಸ ಸದಸ್ಯರು ಮೊದಲಾಗಿ ಇದರ ಬಗ್ಗೆ ದನಿ ಎತ್ತಬೇಕು ಮತ್ತು ಘಟಕದ ಸ್ಥಳಾಂತರಕ್ಕೆ ಯತ್ನಿಸಬೇಕು ಎಂಬ ಆಗ್ರಹ ಇಲ್ಲಿನ ಜನರದ್ದಾಗಿದೆ. 

ಆದ ಕೆಲಸ
ಕಾಂಕ್ರೀಟ್‌ 

ಮೊಗವೀರ ಸಭಾಭವನದ ಎದುರು ರಸ್ತೆಗೆ ಕಾಂಕ್ರೇಟ್‌, ಹಳೇಕೋಟೆ ಶ್ಮಶಾನದ ಎದುರು ರಸ್ತೆ ಕಾಂಕ್ರೇಟ್‌, ಕಲಾಕೇಂದ್ರದ ನಾಗಿ ಮರಕಾಲ್ತಿ ಮನೆಯ ವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ.

ರಸ್ತೆ ನಿರ್ಮಾಣ
ಇಲ್ಲಿನ ಎಸ್‌.ಸಿ. ಕಾಲನಿಗೆ ರಸ್ತೆ ಸಂಪರ್ಕ ಇರಲಿಲ್ಲ. ಇದೀಗ ಎಸ್‌.ಸಿ. ಕಾಲನಿಗೆ ರಸ್ತೆ ನಿರ್ಮಾಣ ಮಾಡಲಾಗಿದ್ದು ಸಂಪರ್ಕದ ನಿಟ್ಟಿನಲ್ಲಿ ಅನುಕೂಲವಾಗಿದೆ.

ಚರಂಡಿ 
ಗುಂಡ್ಮಿ ಕುಕ್ಕಿನಬೈಲು ರಸ್ತೆಯಲ್ಲಿ ಚರಂಡಿ  ನಿರ್ಮಾಣ. ಎಸ್‌.ಸಿ. ಕಾಲನಿಗೆ ಚರಂಡಿ ನಿರ್ಮಾಣ ಮಾಡಲಾಗಿದ್ದು ಮಳೆ ನೀರು ಹರಿದು ಹೋಗಲು ಅನುಕೂಲವಾಗಿದೆ.

ಹೊಸ ರಸ್ತೆ
ಪಾರಂಪಳ್ಳಿ, ಗುಂಡ್ಮಿ, ಹೆಗ್ಗಡ್ತಿಮಕ್ಕಿ ಮುಂತಾದ ಕಡೆಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಇಲ್ಲಿನ ಹಳೆಕೋಟೆ ಮೈದಾನದಲ್ಲಿ ಬಾವಿಯೊಂದನ್ನು ರಚಿಸಲಾಗಿದ್ದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ತಾತ್ಕಾಲಿಕ ಡಂಪಿಂಗ್‌ ಯಾರ್ಡ್‌ನಿಂದಾಗಿ ಬಾವಿಯ ನೀರು ಕಲುಷಿತವಾಗುತ್ತಿದೆ.

ಆಗದ ಕೆಲಸ
ಸ್ಥಳಾಂತರ

ಡಂಪಿಂಗ್‌ ಯಾರ್ಡ್‌ ಇಲ್ಲದಿರುವುದರಿಂದ ಹಳೆಕೋಟೆ ಮೈದಾನದಲ್ಲಿ ಕಸವಿಲೇವಾರಿ ಮಾಡುತ್ತಿದ್ದು ಇದು ಜನವಸತಿ ಪ್ರದೇಶವಾದ್ದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಇದನ್ನು ಸ್ಥಳಾಂತರಿಸಬೇಕಿದೆ.

ಕಾಂಕ್ರೀಟ್‌
ಭಗವತಿ ರಸ್ತೆಯಲ್ಲಿ ಕೆಲವು ಭಾಗ ಕಾಂಕ್ರೀಟೀಕರಣ ಆಗಬೇಕಿದೆ. ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ಉಳಿದ ಕಡೆಗಳಲ್ಲೂ ರಸ್ತೆಗೆ ಕಾಂಕ್ರೀಟೀಕರಣದ ಅಗತ್ಯವಿದೆ.

ಚರಂಡಿ ನಿರ್ಮಾಣ
ಪ.ಪಂ.ನ ಎಲ್ಲಾ ವಾರ್ಡಗಳಂತೆ ಈ ವಾರ್ಡ್‌ನಲ್ಲೂ ಕೂಡ ಚರಂಡಿ ಸಮಸ್ಯೆ ಇದೆ. ಮಳೆಗಾಲದಲ್ಲಿ ನàಇರು ಹರಿಯಲು ಸಮಸ್ಯೆಯಾಗುತ್ತದೆ. ಆದ್ದರಿಂದ ಅಗತ್ಯ ಕಡೆಗಳಲಇ ಚರಂಡಿ ಮತ್ತು ವಾಲ್‌ ನಿರ್ಮಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ.

ಕ್ರೀಡಾಂಗಣ
ಹಳೆಕೋಟೆ ಮೈದಾನದಲ್ಲಿ ಕ್ರೀಡಾಂಗಣವಾಗಿ ಬಳಕೆಯಲ್ಲಿರುವ ಸರಕಾರಿ ಜಾಗ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಆದ್ದರಿಂದ ಇಲ್ಲಿ ಸೂಕ್ತವಾದ ಕ್ರೀಡಾಂಗಣ, ಕ್ರೀಡಾಪಟುಗಳ ತರಬೇತಿಗೆ ಸೂಕ್ತ ವ್ಯವಸ್ಥೆಗಳು ಆಗಬೇಕಿವೆ.

ಪುರುಷರು: 442
ಮಹಿಳೆಯರು: 472
ಒಟ್ಟು  ಮತದಾರರು:914

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.