ಹಲ್ಲೆಗೊಳಗಾದವರನ್ನು ಭೇಟಿ ಮಾಡಿದ ಕೋಟ
Team Udayavani, Aug 29, 2018, 1:05 AM IST
ಕುಂದಾಪುರ: ಕಾಲ್ತೋಡಿನಲ್ಲಿ ಹಲ್ಲೆಗೊಳಗಾದವರನ್ನು ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಘಟನೆ ಕುರಿತು ಮಾಹಿತಿ ಪಡೆದರು. ನಾವು ಈ ಹಿಂದೆ ತಾ.ಪಂ. ಸದಸ್ಯ ವಿಜಯ್ ಶೆಟ್ಟಿ ಅವರ ವಿರುದ್ಧ ಎಸಿಬಿಗೆ ಕೊಟ್ಟ ದೂರಿಗೆ ಸಾಕ್ಷಿದಾರರಾಗಿದ್ದೇವೆ. ಆದ್ದರಿಂದ ನಮ್ಮ ಮೇಲೆ ಹಲ್ಲೆ ನಡೆದಿದೆ. ಅದಕ್ಕೂ ಮುನ್ನ ಅವರ ಮೇಲೆ 34 ಪ್ರಕರಣಗಳು ದಾಖಲಾಗಿದ್ದಾಗ ರೌಡಿ ಶೀಟ್ ದಾಖಲಾಗದಂತೆ ಅವನ್ನೆಲ್ಲ ತೆಗೆಯಲು ನಮಗೆ ವಿನಂತಿ ಮಾಡಿದಂತೆ ನಿಶ್ಶರ್ತವಾಗಿ ದೂರು ವಾಪಸ್ ತೆಗೆದಿದ್ದೆ. ಈಗ ಕೊಲೆ ಯತ್ನ ನಡೆದಿದೆ. ನಾನು ಅಂಚೆ ಇಲಾಖೆ ನೌಕರನಾಗಿದ್ದು ಇಂತಹ ಹಲ್ಲೆಯಿಂದ ಕರ್ತವ್ಯ ಮಾಡಲು ಭಯ ಉಂಟಾಗಿದೆ ಎಂದು ಹಲ್ಲೆಗೊಳಗಾದ ಜನಾರ್ದನ ನಾಯಕ್ ಹೇಳಿದರು. ನಾನು ಪಂಚಾಯತ್ ಸದಸ್ಯೆಯಾಗಿದ್ದು ಸಾಮಾನ್ಯ ಸಭೆಗೆ ನುಗ್ಗಿ ರಾಜೀನಾಮೆಗೆ ಒತ್ತಡ ಹೇರಿದ್ದರು. ನಾವು ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕಾಗಿ ಇಂತಹ ಹಲ್ಲೆ ನಡೆದಿದೆ ಎಂದು ಅವರ ಪತ್ನಿ ಹೇಳಿದರು. ನಮಗೆ ಬದುಕಲು ಭೀತಿಯ ವಾತಾವರಣ ಉಂಟಾಗಿದೆ ಎಂದರು. ಬಳಿಕ ಕೋಟ ಅವರು ವೈದ್ಯಾಧಿಕಾರಿ ಜತೆ ಮಾತನಾಡಿದರು. ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದರು.
ಅನಂತರ ಸುದ್ದಿಗಾರರ ಜತೆ ಮಾತನಾಡಿದ ಕೋಟ, ಜಿಲ್ಲಾ ಎಸ್ಪಿ ಅವರಿಗೆ ಕಾಲಾವಕಾಶ ನೀಡುತ್ತಿದ್ದೇನೆ. ರಾಜಕಾರಣ ಬದಿಗಿಟ್ಟು ತತ್ಕ್ಷಣ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಗೃಹಸಚಿವರನ್ನು ಭೇಟಿಯಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇನೆ. ಗೃಹಮಂತ್ರಿಗಳಿಗೆ ದೂರು ಕೊಡಲು ಅವಕಾಶ ಕೊಡದೇ ಅದಕ್ಕೂ ಮುನ್ನ ಕ್ರಮ ಕೈಗೊಳ್ಳಿ. ಗಾಯಾಳುಗಳನ್ನು ಖುದ್ದು ಭೇಟಿ ಮಾಡಲಿ. ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ನವರ ಅಟಾಟೋಪ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ತಾ. ಪಂ. ಸದಸ್ಯ ಮಹೇಂದ್ರ ಪೂಜಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಭದ್ರ ಶೆಟ್ಟಿ, ವಿಜಯ ಕುಮಾರ್ ಕಂಚಿಕಾನ ಮೊದಲಾದವರಿದ್ದರು.
ಘಟನೆ ವಿವರ
ಕಂಬದಕೋಣೆಯಿಂದ ಎಂ.ಒ. ಹಣವನ್ನು ತರಲು ಕಂಬದಕೋಣೆಗೆ ರಿಕ್ಷಾದಲ್ಲಿ ಬಡಿಯ ಹಾಂಡ ಹಾಗೂ ಜನಾರ್ದನ ನಾಯಕ್ ಹೋಗುತ್ತಿದ್ದಾಗ ಹೆರಂಜಾಲು ಗ್ರಾಮದ ಹೆರಂಜಾಲು ಮೊಬೈಲ್ ಟವರ್ ಎದುರು ಆರೋಪಿ ಎಚ್.ವಿಜಯ ಶೆಟ್ಟಿ ಮತ್ತು ಇತರ ಮೂವರು ಕಾರನ್ನು ರಿಕ್ಷಾಗೆ ಅಡ್ಡವಾಗಿಟ್ಟು ಜನಾರ್ಧನ ನಾಯಕ್ ಅವರಿಗೆ ಕೈ ತುಂಡಾಗುವ ರೀತಿಯಲ್ಲಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದು ಜತೆಗಿದ್ದ ಬಡಿಯ ಹಾಂಡ ಅವರಿಗೆ ಹೊಡೆದು ತಲೆಗೆ ಗಂಭೀರ ಗಾಯವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಸೋಮವಾರ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ