“ದೃಷ್ಟಿದೋಷ ಸಮಸ್ಯೆಯಿಂದ ಪಾರಾಗಲು ಆಕ್ಯುಪೇಶನಲ್ ತೆರಪಿ ಅಗತ್ಯ’
Team Udayavani, Sep 8, 2018, 7:00 AM IST
ಉಡುಪಿ: ಆಕ್ಯುಪೇಶನಲ್ ತೆರಪಿಯೆನ್ನುವುದು ದೃಷ್ಟಿದೋಷ ಸಮಸ್ಯೆಯಿಂದ ಪಾರಾಗಲು ಅಗತ್ಯ ವಾಗಿದೆ. ಬೇರೆಯವರಿಗೆ ತೊಂದರೆ ನೀಡದೆ ಸ್ವಂತ್ರವಾಗಿ ಬದುಕಬೇಕಾದರೆ ಈ ತೆರಪಿಯ ಆವಶ್ಯಕತೆ ಇದೆ ಎಂದು ಕೆಎಂಸಿ ಮಣಿಪಾಲದ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಸುಲತಾ ಭಂಡಾರಿ ಹೇಳಿದರು.
ಮಾಹೆಯ ಆಕ್ಯುಪೇಶನಲ್ ತೆರಪಿ ವಿಭಾಗ, ಎಸ್ಓಎಎಚ್ಎಸ್ ವಿಭಾಗ ಆಯೋಜಿಸಿದ್ದ ದೃಷ್ಟಿದೋಷ ನಿವಾರಣೆಗೆ ಆಕ್ಯುಪೇಶನಲ್ ತೆರಪಿ ಕುರಿತ ಎರಡು ದಿನಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಈ ಸಮಸ್ಯೆ ನಿವಾರಣೆಗೆ ನೇತ್ರತಜ್ಞರ, ಮತ್ತು ತಂತ್ರಜ್ಞರ ಕಾರ್ಯಗಳ ಕುರಿತು ವಿವರಿಸಿದರು.
ಡಾ| ಅರುಣ್ ಜಿ.ಮಯ್ಯಸ್ವಾಗತಿಸಿ, ಇದು ವಯಸ್ಸಾದಂತೆ ಎಲ್ಲರಲ್ಲಿಯೂ ಕಾಣುವ ಸಾಮಾನ್ಯ ಸಮಸ್ಯೆಗಳೇ, ಆದರೆ ಅನಾರೋಗ್ಯಕಾರಿ ಜೀವನ ಶೈಲಿಯಿಂದ ಇದರ ಸಮಸ್ಯೆಗಳು ಇನ್ನೂ ಹೆಚ್ಚು ಕಾಡುತ್ತದೆ ಎಂದರು.
ಬೋಸ್ಟನ್ ಯುಎಸ್ಎಯ ಎಮ್ಜಿಎಚ್ ಇನ್ಸಿಟಿಟ್ಯೂಟ್ನ ಸಹಾಯಕ ಪ್ರಾಧ್ಯಾಪಕ ಕಿಂಬರ್ಲಿ ಆನ್ ಶಾಸ್ಕೋಯಿಸ್, ಆಕ್ಯೂಪೇಶನಲ್ ತೆರಪಿ ಕುರಿತು ಮತ್ತು ನಿರ್ವಹಿಸುವ ಕುರಿತು ವಿವರಿಸಿದರು.
ಆಕ್ಯುಪೇಶನಲ್ ತೆರಪಿ ವಿಭಾಗ ಮುಖ್ಯಸ್ಥೆ ಡಾ| ಸೆಬಿಸ್ತಿನಾ ಅನಿಟಾ ಡಿ’ಸೋಜಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶದ ಹಲವು ಆಕ್ಯುಪೇಶನಲ್ ತೆರಪಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ