ಕದ್ದ ಚಿನ್ನದ ಟಿಫಿನ್ ಬಾಕ್ಸ್ನಲ್ಲೇ ಊಟ!
Team Udayavani, Sep 12, 2018, 4:02 PM IST
ಹೈದರಾಬಾದ್: ನಿಜಾಮರ ಕಾಲದ ಬಹುಕೋಟಿ ಮೊತ್ತದ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಹಲವು ಅಮೂಲ್ಯ ವಸ್ತುಗಳನ್ನು ಕದ್ದೊಯ್ದಿದ್ದ ಕಳ್ಳರನ್ನು ಹೈದರಾಬಾದ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅಚ್ಚರಿ ಏನೆಂದರೆ, ದರೋಡೆ ಮಾಡಿದಂದಿ ನಿಂದಲೂ ಕಳ್ಳರಲ್ಲೊಬ್ಬ ಈ ದುಬಾರಿ ಬೆಲೆಯ ಬಾಕ್ಸ್ನಲ್ಲೇ ಆಹಾರ ಸೇವಿಸು ತ್ತಿದ್ದನಂತೆ!
ಹಾಲಿವುಡ್ ಸಿನಿಮಾ ಮಾದರಿಯಲ್ಲಿ ನಿಜಾಮ್ ಮ್ಯೂಜಿಯಂಗೆ ಲಗ್ಗೆಯಿಟ್ಟಿದ್ದ ಇಬ್ಬರು ದರೋಡೆಕೋರರು, ಅಲ್ಲಿಂದ ಅಮೂಲ್ಯ ವಸ್ತುಗಳನ್ನು ಹೊತ್ತುಕೊಂಡು ಮುಂಬೈಗೆ ಪರಾರಿಯಾಗಿದ್ದರು. ಅನಂತರ ಅಲ್ಲಿನ ಐಷಾರಾಮಿ ಹೋಟೆಲ್ ಒಂದರಲ್ಲಿ ವಸತಿ ಹೂಡಿದ್ದರು.
ಇವರು ಕದ್ದೊಯ್ದ ವಸ್ತುಗಳಲ್ಲಿ ನಿಜಾಮರ ಕಾಲದ ಟಿಫಿನ್ ಬಾಕ್ಸ್ ಕೂಡ ಒಂದು. ನಾಲ್ಕು ಕೆ.ಜಿ. ತೂಕದ ಈ ಟಿಫನ್ ಬಾಕ್ಸ್ ಮೂರು ಹಂತಗಳನ್ನು ಹೊಂದಿದ್ದು, ವಜ್ರ, ಮಾಣಿಕ್ಯ ಮತ್ತು ಪಚ್ಚೆಗಳನ್ನು ಉಪಯೋಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಸ್ವತಃ ನಿಜಾಮನೇ ಈ ಟಿಫನ್ ಬಾಕ್ಸ್ ಬಳಕೆ ಮಾಡಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಕಳ್ಳರಲ್ಲೊಬ್ಬ ಇದನ್ನು ಪ್ರತಿದಿನದ ಆಹಾರ ಸೇವನೆಗೆ ಬಳಸುತ್ತಿದ್ದ ಎಂಬ ಅಂಶವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಸೆ.2ರಂದು ಗ್ರಿಲ್ ಕಿತ್ತು, ಒಳ ನುಗ್ಗಿದ್ದ ಕಳ್ಳರು, ಮೊದಲು ಚಿನ್ನದ ಕವಚದೊಳಗೆ ಇರಿಸಲಾಗಿದ್ದ ಕುರಾನ್ ಅನ್ನು ಕದಿಯಲು ಹೊರಟಿದ್ದರು. ಅದನ್ನು ಸ್ಪರ್ಶಿಸಲು ಮುಂದಾಗುತ್ತಿದ್ದಂತೆ, ಸಮೀಪದ ಮಸೀದಿಯಿಂದ ಆಜಾನ್(ಪ್ರಾರ್ಥನೆಯ ಕರೆ) ಕೇಳಿಬಂದಿತ್ತಂತೆ. ಇದರಿಂದ ಭಯ ಭೀತರಾದ ಕಳ್ಳರು, ಕುರಾನ್ ಅನ್ನು ಬಿಟ್ಟು ಇತರೆ ವಸ್ತುಗಳನ್ನು ಕದ್ದೊಯ್ದಿದ್ದರು ಎಂದಿದ್ದಾರೆ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್. ಕಳ್ಳರ ಪತ್ತೆಗಾಗಿ 22 ತಂಡಗಳನ್ನು ರಚಿಸಿ, 300ಕ್ಕೂ ಹೆಚ್ಚು ಟವರ್ಗಳ ಡೇಟಾ ಪರಿಶೀಲಿಸಿ, ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾದೆವು ಎಂದಿದ್ದಾರೆ. ಕದ್ದ ವಸ್ತುಗಳಿಗೆ ದುಬೈ ಮಾರುಕಟ್ಟೆಯಲ್ಲಿ 30-40 ಕೋಟಿ ರೂ.ಸಿಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ