ಮನೆಗಳಿಗೆ ತಿರುಗಿ ಹಾಡು ಹೇಳುವ ಕಿನ್ನರಿ ಜೋಗಿಗಳು 


Team Udayavani, Oct 6, 2018, 6:30 AM IST

0510kota1e.jpg

ಕೋಟ: ತಲೆಗೆ ರುಮಾಲು ಸುತ್ತಿ,ಬಣ್ಣದ ನಿಲುವಂಗಿ ತೊಟ್ಟು, ಕೊರಳಿಗೆ ಮಣಿ ಸರ ಧರಿಸಿ, ಹಣೆಗೆ ವಿಭೂತಿ-ಹೆಗಲಿಗೊಂದು ಜೋಳಿಗೆ, ಕೈಯಲ್ಲಿ ಕೋಲು ಕಿನ್ನರಿ ಹಿಡಿದು ಹಾಡುಗಳನ್ನ ಹಾಡುತ್ತ  ಮನೆಗೆ ಭೇಟಿಕೊಡುವ ಕಿನ್ನರಿ ಜೋಗಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಇವರ ಈ ಆಚರಣೆಯ ಹಿಂದೆ ಒಂದಷ್ಟು ವಿಶೇಷತೆ ಇದ್ದು, ಕರಾವಳಿಗೂ ಇವರಿಗೂ ಅವಿನಾಭಾವ ನಂಟಿದೆ.ಕಿನ್ನರಿ ಬಾರಿಸುವುದರಿಂದ ಕಿನ್ನರಿ ಜೋಗಿ ಕಿನ್ನರಿ ಜೋಗಿಗಳಲ್ಲಿ  ಹೆಚ್ಚಿನವರು ಮಲೆನಾಡು, ಬಯಲುಸೀಮೆಯವರು. ಕಿನ್ನರಿ ಬಾರಿಸುವುದರಿಂದ ಇವರಿಗೆ ಈ ಹೆಸರು ಬಂತು ಎನ್ನುವ ಐತಿಹ್ಯವಿದೆ. 

ಇವರ ಕೈಯಲ್ಲಿರುವ ಸೋರೆ ಬುರುಡೆಯಿಂದ ಮಾಡಿದ ಸಂಗೀತವಿದ್ದು ಇದನ್ನು ಬಿದಿರಿನ ಕೋಲು, ಚೆಕ್ಕೆ, ಜೇನುಮೇಣ, ತಂತಿ ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದರ ತಂತಿಯನ್ನು ಹೆಬ್ಬರಳಿಗೆ ಸಿಕ್ಕಿಸಿಕೊಂಡ ಗಗ್ಗರದಿಂದ ಮೀಟಿ, ಶ್ರುತಿಗೆ ಸರಿಹೊಂದುವಂತೆ ಹಾಡು ಹೇಳುತ್ತಾರೆ. 

ಹಿಂದೆ ಇವರು ವರ್ಷ 
ಪೂರ್ತಿ ಊರೂರು ತಿರುಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದರು. ಆದರೆ ಇದೀಗ ವರ್ಷದಲ್ಲಿ ಒಂದೆರಡು ತಿಂಗಳು ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತಾರೆ. ಮಿಕ್ಕುಳಿದ ದಿನದಲ್ಲಿ ಊರಿನಲ್ಲಿ ಬೇರೆ-ಬೇರೆ ಕೆಲಸ ನಿರ್ವಹಿಸುತ್ತಾರೆ.

ಮಹಾಭಾರತದ ಸನ್ನಿವೇಶಗಳ ವರ್ಣನೆ
ಪಾಂಡವರ ವಂಶಸ್ಥರು ಎಂದು ಕರೆದು ಕೊಳ್ಳುವ ಇವರು ಮಹಾಭಾರತದ  ವನವಾಸ, ಜೂಜಾಟ, ವಸ್ತ್ರಾಪಹರಣ ಸನ್ನಿವೇಶಗಳನ್ನು ಹಾಡಿನ ರೂಪದಲ್ಲಿ ಕಟ್ಟಿಕೊಡುತ್ತಾರೆ. ಇವರಲ್ಲಿ  ಕೆಲವರು ಮಹಾಭಾರತದ ಹತ್ತು- ಹದಿಮೂರು ಪರ್ವ ಗಳನ್ನು ಬಾಯಿಪಾಠ ಮಾಡಿ ಹಾಡುವ ಗಟ್ಟಿಗರಿದ್ದಾರೆ.

ಕಟ್ಟುಕಟ್ಟಲೆ ಸೇವೆ
ವರ್ಷಕ್ಕೊಮ್ಮೆ ಬೇರೆ-ಬೇರೆ ಊರಿಗೆ ತೆರಳಿ ಹಾಡು ಹಾಡಿ ಹಣ, ಧವಸ ಧಾನ್ಯಗಳನ್ನು ಸಂಗ್ರಹಿಸಿ ಕುಲದೇವ ಭೆ„ರವ ಸ್ವಾಮಿ ಮತ್ತು ಗುರು ಪೀಠಕ್ಕೆ ಕಾಣಿಕೆ ಸಲ್ಲಿಸಿ ಊರಿಗೆ ತೆರಳಬೇಕು ಎನ್ನುವುದು ಇವರಲ್ಲಿ ತಲೆತಲಾಂತರದಿಂದ ಬಂದ ಸಂಪ್ರದಾಯವಾಗಿದ್ದು ಇದನ್ನು ಪಾಲಿಸದಿದ್ದರೆ ದೇವರ ಕೋಪಕ್ಕೆ ತುತ್ತಾಗಬೇಕು ಎನ್ನುವ ಭಯವಿದೆ. ಮಕ್ಕಳು ವಿದ್ಯಾವಂತರಾಗಿರುವುದರಿಂದ ಕೆಲವರು ಆರ್ಥಿಕವಾಗಿಯೂ ಸದೃಢರಾಗಿದ್ದಾರೆ. ಆದರೆ ಧಾರ್ಮಿಕ ನಂಬಿಕೆ ಗಟ್ಟಿಯಾಗಿರುವುದರಿಂದ ಮನೆಯಲ್ಲೊಬ್ಬರು ಅಥವಾ ಕುಟುಂಬದಲ್ಲೊಬ್ಬರು  ವರ್ಷದಲ್ಲಿ ಒಂದು ತಿಂಗಳು ಊರೂರು ತಿರುಗಾಟ ನಡೆಸುತ್ತಾರೆ. 

ಕರಾವಳಿಯ ಜತೆ ವಿಶೇಷ ನಂಟು
ಕಿನ್ನರಿ ಜೋಗಿಗಳಿಗೆ ಕರಾವಳಿಯ ವಿಶೇಷ ನಂಟಿದೆ.  ಇವರ  ಗುರು ಪೀಠವಿರುವುದು ಕರಾವಳಿಯಲ್ಲಿ ಹಾಗೂ  ಕೃಷ್ಣ ಜನ್ಮಾಷ್ಠಮಿಯಿಂದ  ನವರಾತ್ರಿ ಕೊನೆಯ ತನಕ  ಮಂಗಳೂರಿನಿಂದ ಭಟ್ಕಳ ತನಕ ಇವರು ತಿರುಗಾಟ ನಡೆಸುತ್ತಾರೆ. ಕರಾವಳಿಗರ ಆತಿಥ್ಯ ಇವರಿಗೆ ಅಚ್ಚುಮೆಚ್ಚು.  ಹೀಗಾಗಿ ಇವರ  ಬಹುತೇಕ ತಿರುಗಾಟ ಕರಾವಳಿಗೆ ಸೀಮಿತಗೊಂಡಿದೆ.

ಕುಲದೇವರಿಗೆ ಕಾಣಿಕೆ
ನಾನು ಸುಮಾರು 40ವರ್ಷದಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ವರ್ಷದಲ್ಲಿ ಒಂದು ಬಾರಿ ನಾವು  ಇದನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕು. ಹಿಂದೆ ನಮ್ಮೂರಿನಲ್ಲಿ ಸುಮಾರು 500ಮಂದಿ ಈ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇದೀಗ 50 ಮಂದಿ ಕಾಣಸಿಗುತ್ತಾರೆ. ಹಾಡು ಹೇಳಿ ಮನೆಯವರು ಕೊಟ್ಟ ಹಣವನ್ನು ಸ್ವೀಕರಿಸಿ ಒಳ್ಳೆದಾಗಲಿ ಎಂದು ಹರಸಿ ಕುಲದೇವರಿಗೆ ಕಾಣಿಕೆ ಸಲ್ಲಿಸುತ್ತೇವೆ.
– ಸಿದ್ದಪ್ಪ  ದಾವಣಗೆರೆ, 
ಕಿನ್ನರಿ ಜೋಗಿ

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.