Gadag; ಮತದಾನದ ಮುನ್ನಾ ದಿನ ಬಸ್ಗಳು ಫುಲ್ ರಶ್: ಜನರ ಪರದಾಟ
Team Udayavani, May 6, 2024, 9:28 PM IST
ಗದಗ: ನಗರದ ಹೊಸ್ ಬಸ್ ನಿಲ್ದಾಣದಲ್ಲಿ ದೂರದೂರಿಗೆ ತೆರಳುವ ಪ್ರಯಾಣಿಕರು ಬಸ್ಗಾಗಿ ಕಾದು ಕಾದು ಸುಸ್ತಾದರು. ಬಸ್ಗಳಿಲ್ಲದ ಕಾರಣ ಪ್ರಯಾಣಿಕರು ಪರದಾಟ ನಡೆಸಬೇಕಾಯಿತು.
ಮೇ 7ರಂದು(ಮಂಗಳವಾರ) ಲೋಕಸಭಾ ಚುನಾವಣೆ ಮತದಾನವಿರುವುದರಿಂದ ಬಹುತೇಕ ಸಾರಿಗೆ ಬಸ್ಗಳು ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಬಸ್ಗಳ ಸಂಚಾರ ವಿರಳವಾಗಿತ್ತು. ಹುಬ್ಬಳ್ಳಿ, ಇಲಕಲ್, ಬಾಗಲಕೋಟೆ, ಯಲಬುರ್ಗಾ, ಕೊಪ್ಪಳ ಸೇರಿದಂತೆ ಇತರೆ ಗ್ರಾಮಗಳಿಗೂ ತೆರಳುವ ಬಸ್ಗಳ ಸಂಖ್ಯೆ ಕಡಿಮೆಯಾಗಿದ್ದವು. ಮಹಿಳೆಯರು, ಮಕ್ಕಳು, ವಯೋವೃದ್ಧರು ತೀವ್ರ ತೊಂದರೆ ಅನುಭವಿಸಿದರು.
ಬಸ್ ಕಿಟಕಿಯಲ್ಲಿ ನುಸುಳಿದ ಪ್ರಯಾಣಿಕರು
ಕಡಿಮೆ ಸಂಖ್ಯೆಯಲ್ಲಿ ಬಸ್ಗಳು ಸಂಚರಿಸುತ್ತಿರುವುದರಿಂದ ದೂರದೂರಿಗೆ ತೆರಳಬೇಕಾದ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಬಸ್ಗಳಲ್ಲಿ ಸೀಟುಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ ಕೆಲ ಪ್ರಯಾಣಿಕರು ಕಿಟಕಿಯಲ್ಲಿ ನುಸುಳಿಕೊಂಡು ಸೀಟು ಹಿಡಿದ ದೃಶ್ಯ ಸಮಾನ್ಯವಾಗಿತ್ತು. ಇನ್ನು ಕೆಲವು ಬಸ್ಗಳಲ್ಲಿ ಪ್ರಯಾಣಿಕರು ಬಾಗಿಲ ಬಳಿ ನೇತಾಡಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದುಬಾರಿ ದರಕ್ಕೆ ವಿದ್ಯುತ್ ಖರೀದಿ; ಅಗ್ಗದ ದರಕ್ಕೆ ಮಾರಾಟ; 10 ರೂ.ಗೆ ಖರೀದಿ,3 ರೂ.ಗೆ ಮಾರಾಟ
Hassan ಕ್ಯಾನ್ಸರ್ ಸೋಲಿಸಿ ಮಿಸ್ ಇಂಡಿಯಾ ಸ್ಪರ್ಧೆ ಗೆದ್ದ ಪಲ್ಲವಿ ಭೂಷಣ್
Karnataka Legislative Council; ಕಾಂಗ್ರೆಸ್ ಅಭ್ಯರ್ಥಿ 2 ದಿನದಲ್ಲಿ ಅಂತಿಮ?
ಇನ್ನೂ ಬಾರದ ಪ್ರಜ್ವಲ್ ನಡೆ ನಿಗೂಢ; ಸಂತ್ರಸ್ತೆಯರ ಹೇಳಿಕೆ ದಾಖಲಿಸಿ ಎಸ್ಐಟಿ ತನಿಖೆ
ಇಂದು ರಾಜ್ಯಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ