![1-sdsddsa](https://www.udayavani.com/wp-content/uploads/2024/06/1-sdsddsa-415x276.jpg)
ಮಳೆಗಾಲಕ್ಕೆ ಸಜ್ಜುಗೊಂಡಿಲ್ಲ ನಾಗೋಡಿ ಘಾಟಿ
ಅಲ್ಲಲ್ಲಿ ಕುಸಿಯುವ, ಮರಗಳು ರಸ್ತೆಗೆ ಉರುಳುವ ಆತಂಕ
Team Udayavani, May 27, 2024, 7:40 AM IST
![ಮಳೆಗಾಲಕ್ಕೆ ಸಜ್ಜುಗೊಂಡಿಲ್ಲ ನಾಗೋಡಿ ಘಾಟಿಮಳೆಗಾಲಕ್ಕೆ ಸಜ್ಜುಗೊಂಡಿಲ್ಲ ನಾಗೋಡಿ ಘಾಟಿ](https://www.udayavani.com/wp-content/uploads/2024/05/road-s-620x465.jpg)
ಕುಂದಾಪುರ:ಮುಂಗಾರು ಮಳೆ ಆರಂಭಕ್ಕೆ ಕೆಲವೇ ದಿನ ಬಾಕಿ. ಆದರೆ ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 ಸಿ ಹಾದುಹೋಗುವ ಕೊಲ್ಲೂರು ಸಮೀಪದ ನಾಗೋಡಿ ಘಾಟಿ ಮಾತ್ರ ಇನ್ನೂ ಮಳೆಗಾಲವನ್ನು ಸ್ವಾಗತಿಸಲು ಸಜ್ಜುಗೊಂಡಿಲ್ಲ. ಅಲ್ಲಲ್ಲಿ 2-3 ಕಡೆಗಳಲ್ಲಿ ಕುಸಿಯುವ ಭೀತಿಯಿದ್ದರೆ ಕೆಲವು ಕಡೆಗಳಲ್ಲಿ ಮರಗಳು ರಸ್ತೆಗೆ ಉರುಳುವ ಆತಂಕವೂ ಇದೆ.
ಕರಾವಳಿಯಿಂದ ಮಲೆನಾಡು ಮಾತ್ರವಲ್ಲದೆ, ರಾಜಧಾನಿ ಬೆಂಗಳೂರು ಮತ್ತಿತರ ಊರುಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಗಳಲ್ಲಿ ನಾಗೋಡಿ ಘಾಟಿಯೂ ಒಂದು. ಹಲವು ಕಡೆಗಳಲ್ಲಿ ರಸ್ತೆಗೆ ಬಾಗಿರುವ ಅಪಾಯಕಾರಿ ಮರಗಳ ಕಟಾವು ಅಥವಾ ಮರಗಳ ಗೆಲ್ಲು ಕಡಿದು ರಸ್ತೆಗೆ ಬೀಳದಂತೆ ಎಚ್ಚರ ವಹಿಸುವ ಯಾವುದೇ ಕಾರ್ಯ ಆಗಿಲ್ಲ. ಕಳೆದ ಬಾರಿ ಉರುಳಿದ ಮರಗಳ ಗೆಲ್ಲುಗಳನ್ನೇ ಪೂರ್ಣ ಪ್ರಮಾಣದಲ್ಲಿ ರಸ್ತೆ ಬದಿಯಿಂದ ತೆರವುಗೊಳಿಸಿಲ್ಲ!
ಮರ ಬಿದ್ದರೂ ಕೇಳುವವರೇ ಇಲ್ಲ
ಈ ಘಾಟಿಯಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದರೂ ಯಾರೂ ಬಾರದಿರುವ ಪರಿಸ್ಥಿತಿಯಿದೆ. ಒಂದೋ ಕೊಲ್ಲೂರಿನಿಂದ ಅಥವಾ ಶಿವಮೊಗ್ಗದಿಂದ ಬರಬೇಕಿದೆ. ಗಾಳಿ – ಮಳೆಗೆ ಮರ ಬಿದ್ದರಂತೂ ಘಾಟಿ ದಿನಪೂರ್ತಿ ಅಥವಾ ಕೆಲವು ಗಂಟೆಗಳ ಕಾಲ ಬಂದ್ ಆಗುವುದಂತೂ ನಿಶ್ಚಿತ.
14 ಕಿ.ಮೀ. ಘಾಟಿ ಪ್ರದೇಶ
ಉಡುಪಿ ಹಾಗೂ ಶಿವಮೊಗ್ಗ ಎರಡೂ ಜಿಲ್ಲೆಯನ್ನು ಬೆಸೆಯುವ ಈ ಘಾಟಿಯು ಒಟ್ಟು 14 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಎರಡು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು ಹಾಗೂ ಸಿಗಂದೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮೂಲಕ ಸಂಚರಿಸುತ್ತವೆ. ಬೆಂಗಳೂರಿನಿಂದ ಸಾಗರ ಮೂಲಕವಾಗಿ ಕೊಲ್ಲೂರು, ಕುಂದಾಪುರಕ್ಕೆ ಈ ಘಾಟಿ ಮೂಲಕ ಬಸ್ ಸಂಚರಿಸುತ್ತವೆ. ಶಿವಮೊಗ್ಗ, ಹೊಸನಗರ ಕಡೆಯಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳಕ್ಕೆ ತೆರಳಬೇಕಾದರೂ ಇದೇ ಮಾರ್ಗವಾಗಿ ಸಂಚರಿಸಬೇಕು.
ಒಂದೆರಡು ಕಡೆ ಕುಸಿಯುವ ಭೀತಿ
ನಾಗೋಡಿ ಘಾಟಿಯ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 7 ಕಿ.ಮೀ.ನ ಬಹುಭಾಗ ಕಾಂಕ್ರೀಟಿಕರಣಗೊಂಡಿದ್ದು, ಒಂದು ಬದಿಯಿಂದ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ. ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ 7 ಕಿ.ಮೀ. ಡಾಮರೀಕರಣ ಮಾತ್ರ ಮಾಡಲಾಗಿದೆ. ಒಂದೆರಡು ಕಡೆಗಳಲ್ಲಿ ಜರ್ಜರಿತಗೊಂಡು ಗುಡ್ಡ ಕುಸಿದು, ಮಣ್ಣು ಹೆದ್ದಾರಿಗೆ ಬರುವ ಅಪಾಯವೂ ಇದೆ.
ಮಳೆಗಾಲದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಘಾಟಿಯಲ್ಲಿ ಸುಗಮ ಸಂಚಾರಕ್ಕೆ ಸಕಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
– ಮಂಜುನಾಥ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಶೃಂಗೇರಿ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
![1-sdsddsa](https://www.udayavani.com/wp-content/uploads/2024/06/1-sdsddsa-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು](https://www.udayavani.com/wp-content/uploads/2024/06/mulur-150x83.jpg)
Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು
![Dendoor Katte: 2 cows, 1 calf found illegally transported in separate cases](https://www.udayavani.com/wp-content/uploads/2024/06/dendur-150x83.jpg)
Dendoor Katte: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಹಸು, 1 ಕರು ಪತ್ತೆ
![ಉಡುಪಿ: ಸಂತೆಕಟ್ಟೆ-“ಟ್ರಕ್ ಬೇ’ ಅವ್ಯವಸ್ಥೆ ಕೇಳೋರಿಲ್ಲ](https://www.udayavani.com/wp-content/uploads/2024/06/Bay-150x102.jpg)
ಉಡುಪಿ: ಸಂತೆಕಟ್ಟೆ-“ಟ್ರಕ್ ಬೇ’ ಅವ್ಯವಸ್ಥೆ ಕೇಳೋರಿಲ್ಲ
![Innanje Railway Station; A gold chain was stolen from a woman who was traveling from Madurai to Mumbai](https://www.udayavani.com/wp-content/uploads/2024/06/chain-150x83.jpg)
Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು
![ಕಾಪು: ಪ್ರವಾಸಿ ಮಿತ್ರ, ನೆರೆ ನಿರ್ವಹಣೆ ಸಿಬಂದಿ ಪಹರೆಗೆ ಕೊನೆಗೂ ಅಸ್ತು](https://www.udayavani.com/wp-content/uploads/2024/06/Kaupu-150x61.jpg)
ಕಾಪು: ಪ್ರವಾಸಿ ಮಿತ್ರ, ನೆರೆ ನಿರ್ವಹಣೆ ಸಿಬಂದಿ ಪಹರೆಗೆ ಕೊನೆಗೂ ಅಸ್ತು
MUST WATCH
ಹೊಸ ಸೇರ್ಪಡೆ
![1-sdsddsa](https://www.udayavani.com/wp-content/uploads/2024/06/1-sdsddsa-150x100.jpg)
Allu Arjun ‘ಪುಷ್ಪ 2 ದಿ ರೂಲ್’ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ
![1-aasdsadsa-dad](https://www.udayavani.com/wp-content/uploads/2024/06/1-aasdsadsa-dad-150x87.jpg)
Bihar; ಮುಸ್ಲಿಂ ಮತ್ತು ಯಾದವರ ಕೆಲಸ ಮಾಡುವುದಿಲ್ಲ: ಜೆಡಿಯು ಸಂಸದ
![1-asdsdsad](https://www.udayavani.com/wp-content/uploads/2024/06/1-asdsdsad-150x98.jpg)
Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ
![Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….](https://www.udayavani.com/wp-content/uploads/2024/06/BIKE-BANTWAL-150x104.jpg)
Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್ ಭಸ್ಮ
![1-dharwad](https://www.udayavani.com/wp-content/uploads/2024/06/1-dharwad-150x84.jpg)
Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.