ಆಂಧ್ರ ಪ್ರದೇಶಕ್ಕೆ 700 ಕೋಟಿ ರೂ. ಕೇಂದ್ರ ನೆರವು ಇನ್ನೂ ಬಂದಿಲ್ಲ
Team Udayavani, Oct 10, 2018, 4:08 PM IST
ಹೊಸದಿಲ್ಲಿ : ಕೇಂದ್ರದಲ್ಲಿನ ಎನ್ಡಿಎ ಸರಕಾರದಿಂದ ತೆಲುಗು ದೇಶಂ ಪಕ್ಷ ಹೊರಬಿದ್ದಿರುವ ಕಾರಣ ಆಂಧ್ರ ಪ್ರದೇಶದ ಏಳು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ 2017-18ರ ಸಾಲಿನಲ್ಲಿ ನೀಡಬೇಕಿದ್ದ 700 ಕೋಟಿ ರೂ. ನೆರವನ್ನು ಕೇಂದ್ರ ಸರಕಾರ ಇನ್ನೂ ನೀಡಿಲ್ಲ ಎಂದು ಆಂಧ್ರ ಪ್ರದೇಶದ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ ಕುಟುಂಬ ರಾವ್ ಹೇಳಿದ್ದಾರೆ.
ಆದರೆ ತೆಲಂಗಾಣಕ್ಕೆ ನೀಡಬೇಕಿದ್ದ ಇದೇ ರೀತಿಯ ನೆರವನ್ನು (700 ಕೋಟಿ ರೂ.) ಕೇಂದ್ರ ಸರಕಾರ ಈಗಾಗಲೇ ನೀಡಿದ್ದು ಕೇಂದ್ರದ ತಾರತಮ್ಯ ನೀತಿಗೆ ಇದು ಪ್ರಬಲ ಸಾಕ್ಷಿಯಾಗಿದೆ ಎಂದು ರಾವ್ ಆರೋಪಿಸಿದ್ದಾರೆ.
ವಿಭಜಿತ ಆಂಧ್ರ ಪ್ರದೇಶಕ್ಕೆ 700 ಕೋಟಿ ನೆರವನ್ನು ನೀತಿ ಆಯೋಗ ಶಿಫಾರಸು ಮಾಡಿತ್ತು. ಆದರೆ ಈ ಕಡತ ಪ್ರಧಾನಿಯವರ ಕಾರ್ಯಾಲಯದಲ್ಲಿ ಕಳೆದ ಕೆಲವು ತಿಂಗಳಿಂದ ಬಾಕಿ ಉಳಿದಿದೆ ಎಂದು ರಾವ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್