ಮೀನು ಹಿಡಿಯಲು ಥರ್ಮಾಕೋಲ್‌ ಬೋಟ್‌!


Team Udayavani, Oct 13, 2018, 3:58 PM IST

13-october-18.gif

ಬಾಗಲಕೋಟೆ: ಪ್ರತಿಯೊಬ್ಬರ ಬಳಿಯೂ ಒಂದೊಂದು ಕಲೆ ಕರಗತವಾಗಿರುತ್ತದೆ. ಉಳ್ಳವರು ಕಲಿತು ಕಲೆ ಕರಗತ ಮಾಡಿಕೊಂಡರೆ, ಗ್ರಾಮೀಣ ಜನರು ಪರಂಪರೆಯ ಕಲೆ ಮುಂದುವರೆಸುತ್ತಾರೆ. ಅಂತಹವೊಂದು ವಿಶಿಷ್ಟ ಪ್ರಯತ್ನ ಜಿಲ್ಲೆಯ ಮೀನುಗಾರರು ಮಾಡಿದ್ದಾರೆ.

ಮೀನುಗಾರರು ದುಬಾರಿ ವೆಚ್ಚದ ಬೋಟ್‌ ಖರೀದಿಸಿ ಮೀನು ಹಿಡಿಯಲು ಬಳಸುವ ಬದಲು ಮೀನಿನ ಬಾಕ್ಸ್‌ಗಳಲ್ಲಿ ಬಂದಿದ್ದ ಥರ್ಮಾಕೋಲ್‌ ಬಳಸಿ, ಬೋಟ್‌ ಮಾಡಿದ್ದಾರೆ. ತಮ್ಮದೇ ಹೊಲದಲ್ಲಿದ್ದ ತೆಂಗಿನ ಪೊರಕೆಯನ್ನೇ ನೀರು ಸರಿಸುವ ಹುಟ್‌ ಅನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಪ್ರಯತ್ನ ನಡೆದಿರುವುದು ತಾಲೂಕಿನ ಹೊದ್ಲೂರ ಬಳಿ. ಹೊದ್ಲೂರ ಮತ್ತು ಆಲಮಟ್ಟಿಯ ಮೀನುಗಾರರು ಈ ವಿನೂತನ ಬೋಟ್‌ ತಯಾರಿಸಿದ್ದಾರೆ. ಇದಕ್ಕೆ ಇಂಧನ ಬೇಕಿಲ್ಲ. ಆದರೆ, ಇದನ್ನು ಎಲ್ಲಾ ಕಡೆಯೂ ಮೀನು ಹಿಡಿಯಲು ಬಳಸಲ್ಲ. ಅದು ಅಪಾಯಕಾರಿ ಎಂಬುದು ಮೀನುಗಾರರಿಗೂ ಗೊತ್ತು. ಹೀಗಾಗಿ ಹಿನ್ನೀರು ಪ್ರಮಾಣ ಕಡಿಮೆ ಇರುವ ಪ್ರದೇಶದಲ್ಲಿ ಮಾತ್ರ ಇದನ್ನು ಬಳಸುತ್ತಾರೆ.

ನಿರ್ಮಾಣ ಹೇಗೆ?: ಆಲಮಟ್ಟಿ ಸುತ್ತಮುತ್ತ ಹಿನ್ನೀರ ಪ್ರದೇಶದಲ್ಲಿ ಮೀನುಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇಲ್ಲಿ ಬಾಂಗಡಾ ಮೀನು, ದೂರದ ಕೋಲ್ಕತಾವರೆಗೂ ಪೂರೈಕೆಯಾತ್ತದೆ. ಮೀನುಗಳನ್ನು ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೆ ಪೂರೈಕೆ ಮಾಡಲು ದೊಡ್ಡ ದೊಡ್ಡ ಬಾಕ್ಸ್‌ ಬಳಸುತ್ತಿದ್ದು, ಅದಕ್ಕೆ ಕಡ್ಡಾಯವಾಗಿ ಥರ್ಮಾಕೋಲ್‌ ಬಳಸುವುದು ವಾಡಿಕೆ. ಅಂತಹ ಬಾಕ್ಸ್‌ಗಳಲ್ಲಿ ಅಳವಡಿಸಲು ಬಂದಿದ್ದ ನಿರುಪಯುಕ್ತ ಥರ್ಮಾಕೋಲ್‌ ಅನ್ನೇ ಮಿನಿ ಬೋಟ್‌ ನಿರ್ಮಾಣಕ್ಕಾಗಿ ಬಳಸಲಾಗಿದೆ. ಥರ್ಮಾಕೋಲ್‌ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ತೆಂಗಿನ ಪೊರಕೆಯ ಕಟ್ಟಿಗೆ ಕಟ್ಟಲಾಗಿದೆ. ಇದರಿಂದ ಥರ್ಮಾಕೋಲ್‌ ಮುರಿಯುವ ಅಥವಾ ಒಡೆಯುವುದನ್ನು ತಡೆಯಲಾಗಿದೆ. ಬಳಿಕ ಅದೇ ತೆಂಗಿನ ಪೊರಕೆ ಮತ್ತು ನೀರು ಸರಿಸಲು ಹುಟ್‌ ಮಾಡಲಾಗಿದೆ. ಮೀನುಗಾರರು ನಿತ್ಯವೂ ಇದೇ ಕೃತಕ ಬೋಟ್‌ನಲ್ಲಿ ಸಾಗಿ, ಹಿನ್ನೀರ ವ್ಯಾಪ್ತಿ ಬಲೆ ಎಸೆದು ಮೀನು ಹಿಡಿಯುತ್ತಾರೆ. ಇದನ್ನು ನಿರ್ಮಾಣ ಮಾಡಿದವರು ಒಬ್ಬರೇ ಅಲ್ಲ. ಸುಮಾರು ನಾಲ್ಕೈದು ಜನ ಮೀನುಗಾರರು ಕೂಡಿ ಅದರನ್ನು ರೂಪಿಸಿದ್ದಾರೆ.

ಮೂವರು ಸಾಗಬಹುದು: ಈ ಥರ್ಮಾಕೋಲ್‌ ಕೃತಕ ಬೋಟ್‌ನಲ್ಲಿ ಗರಿಷ್ಠ ಮೂವರು (45ರಿಂದ 55 ಕೆಜಿ ಒಳಗಿನವರು) ಸಾಗಬಹುದು. ಹೆಚ್ಚಿನ ತೂಕದವರು ಕುಳಿತರೆ ಥರ್ಮಾಕೋಲ್‌ ಬೋಟ್‌ ಮುರಿಯುತ್ತದೆ ಎಂದು ಅದರಲ್ಲಿ ಹತ್ತುವುದಿಲ್ಲ. ಒಬ್ಬರು ಇಲ್ಲವೇ ಇಬ್ಬರು ಕೂಡಿಕೊಂಡು ಹಿನ್ನೀರ ವ್ಯಾಪ್ತಿಗೆ ಬಲೆ ಎಸೆಯಲು ಇದೇ ಬೋಟ್‌ ಬಳಕೆ ಮಾಡುತ್ತಿರುವುದು ವಿಶೇಷ. ಅಲ್ಲದೇ ತುರ್ತು ಸಂದರ್ಭದಲ್ಲಿ ಚಿಕ್ಕಹೊದ್ಲೂರದಿಂದ ಹೊಸ ಹೊದ್ಲೂರ ಗ್ರಾಮಕ್ಕೆ (ಸುಮಾರು 200 ಮೀಟರ್‌ ದೂರವಿದೆ. ಹಿನ್ನೀರಿನ ಆಳವೂ ಕಡಿಮೆ) ತೆರಳಲು ಇದೇ ಥರ್ಮಾಕೋಲ್‌ ಕೃತಕ ಬೋಟ್‌ ಬಳಕೆಯಾಗುತ್ತದೆ.

ಮೀನು ಹಿಡಿಯಲು ಕಡ್ಡಾಯವಾಗಿ ತೆಪ್ಪ ಇಲ್ಲವೇ ಬುಟ್ಟಿ ಬೇಕು. ಎಲ್ಲಾ ಮೀನುಗಾರರ ಬಳಿ ತೆಪ್ಪ ಇಲ್ಲ. ಹೀಗಾಗಿ ಮೀನಿನ ಬಾಕ್ಸ್‌ನಲ್ಲಿ ಬಂದಿದ್ದ ಈ ರಟ್ಟಿನಿಂದ ತೆಪ್ಪ ಮಾಡಿದ್ದೇವೆ. ಇದಕ್ಕೆ ಥರ್ಮಾಕೋಲ್‌ ಅಂತಾರೆ ಎಂಬುದು ನಮಗೆ ಗೊತ್ತಿಲ್ಲ. ಇದು ನೀರಿನಲ್ಲಿ ಮುಳುಗಲ್ಲ. ಹೀಗಾಗಿ, ಸುತ್ತಲೂ ತೆಂಗಿನ ಪೊರಕೆ ಕಟ್ಟಿ, ಅದನ್ನೇ ತೆಪ್ಪ ಮಾಡಿಕೊಂಡಿದ್ದೇವೆ.
 ಮೀನುಗಾರರು, ಹೊದ್ಲೂರ  

ಟಾಪ್ ನ್ಯೂಸ್

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

18-

UV Fusion: ತೇರು ಬೀದಿಗೆ ಬಂದಿದೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.