ಅಪರಾಧ ನಿರೂಪಿಸುವಲ್ಲಿ ಬೆರಳು ಮುದ್ರಣ ಮುಖ್ಯ
Team Udayavani, Oct 20, 2018, 5:22 PM IST
ಹುಬ್ಬಳ್ಳಿ: ಅಪರಾಧಿಯ ಅಪರಾಧ ನಿರೂಪಿಸುವಲ್ಲಿ ಬೆರಳು ಮುದ್ರಣ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಎಂದು ಮಧ್ಯಪ್ರದೇಶದ ಭೂಪಾಲ್ನ ಬೆರಳು ಮುದ್ರಣ, ನ್ಯಾಯ ವಿಜ್ಞಾನ ಪ್ರಯೋಗಾಲಯದ ನಿರೀಕ್ಷಕಿ ನಿಧಿ ಶ್ರೀವಾತ್ಸವ ಹೇಳಿದರು.
ಇಲ್ಲಿನ ಹಳೇಹುಬ್ಬಳ್ಳಿ ಹೆಗ್ಗೇರಿಯ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ನ್ಯಾಯ ವಿಜ್ಞಾನ ಹಾಗೂ ಬೆರಳು ಮುದ್ರಣ ಪರೀಕ್ಷೆಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಅಪರಾಧ ಪ್ರಕರಣಗಳಲ್ಲಿ ಬೆರಳು ಮುದ್ರಣವನ್ನು ಹಲವು ಪ್ರಕಾರಗಳಲ್ಲಿ ಪರಿಶೀಲಿಸಬೇಕು ಹಾಗೂ ಹಲವು ವಿಧಾನಗಳ ಮೂಲಕ ಪರೀಕ್ಷಿಸಬೇಕು. ಅಲ್ಲದೇ ಅವುಗಳನ್ನು ಹೋಲಿಸುವ ವಿಷಯದ ಕುರಿತು ವಿವರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪ್ರೊ| ಶರತ ಫಡ್ನಿಸ್ ಮಾತನಾಡಿ, ಬೆರಳು ಮುದ್ರಣದ ಮಹತ್ವ ಹಾಗೂ ಅಪರಾಧಿಯ ವಿಚಾರಣೆಯಲ್ಲಿ ನ್ಯಾಯವಾದಿಗಳಿಗೆ ಬೆರಳು ಮುದ್ರಣದ ಮಾಹಿತಿಯ ಜ್ಞಾನದ ಅವಶ್ಯಕತೆ ಬಗ್ಗೆ ವಿವರಿಸಿದರು. ಜೊತೆಗೆ ಪಾಟಿ ಸವಾಲಿನಲ್ಲಿ ತಜ್ಞರ ಅಭಿಪ್ರಾಯ ನಿರೂಪಿಸಲು. ಇಲ್ಲವೆ ಅಲ್ಲಗಳೆಯಲು ತುಂಬಾ ಸಹಾಯವಾಗುತ್ತದೆ ಎಂದರು. ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ರೂಪಾ ಇಂಗಳಹಳ್ಳಿ ಮಾತನಾಡಿ, ವಕೀಲ ವೃತ್ತಿಯ ಪದವಿಯ ಅಧ್ಯಯನದಲ್ಲಿ ವಿಶ್ವವಿದ್ಯಾಲಯದ ಪಠ್ಯಗಳೊಂದಿಗೆ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ವೃತ್ತಿ ಕೌಶಲತೆ ವೃದ್ಧಿಸಲು ತುಂಬಾ ಸಹಾಯವಾಗುತ್ತವೆ ಎಂದರು.
ಪ್ರೊ| ಬಾಬುಲಾಲ ದರ್ಗದ, ಪ್ರೊ| ದೀಪಾ ಪಾಟೀಲ, ಪ್ರೊ| ಸುರೇಶ ಲಿಂಬಿಕಾಯಿ, ಪ್ರೊ| ಪೂರ್ಣಿಮಾ ಮುರಗೋಡ, ಪ್ರೊ| ವಿಶ್ವನಾಥ ಬಿಚಗತ್ತಿ ಮೊದಲಾದವರಿದ್ದರು. ಪ್ರೊ| ಶ್ರೀಶೈಲ ಮುಧೋಳ ನಿರೂಪಿಸಿದರು. 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
MUST WATCH
ಹೊಸ ಸೇರ್ಪಡೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!