ಬೀರಬಲ್ ಫಸ್ಟ್ಲುಕ್ ಬಂತು
Team Udayavani, Oct 24, 2018, 11:33 AM IST
“ಚಮಕ್’, “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಟಿ.ಆರ್.ಚಂದ್ರಶೇಖರ್ “ಬೀರಬಲ್’ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಹಿಂದೆ “ಟೋಪಿವಾಲಾ’, “ಶ್ರೀನಿವಾಸ ಕಲ್ಯಾಣ’ ಚಿತ್ರಗಳನ್ನು ನಿರ್ದೇಶಿಸಿದ್ದ ಎಂ.ಜೆ.ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರು. ಕೇವಲ ನಿರ್ದೇಶನವಷ್ಟೇ ಅಲ್ಲ, ನಾಯಕರಾಗಿಯೂ ನಟಿಸಿದ್ದಾರೆ.
ಇತ್ತೀಚೆಗೆ ಚಿತ್ರದ ಫಸ್ಟ್ಲುಕ್ ಟೀಸರ್ ಅನ್ನು ನಟ ಶಿವರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸಿರುವ ಶಿವರಾಜಕುಮಾರ್, ಶ್ರೀನಿ ಹಾಗೂ ನಿರ್ಮಾಪಕ ಚಂದ್ರಶೇಖರ್ ಮಾಡಿರುವ ಸಿನಿಮಾಗಳನ್ನು ನೋಡಿದ್ದೇನೆ. ಇಬ್ಬರು ಸಿನಿಮಾದ ಅಭಿರುಚಿಯುಳ್ಳವರು. ಈಗ “ಬೀರಬಲ್’ನಲ್ಲಿ ಒಂದಾಗಿದ್ದು, ಒಳ್ಳೆಯ ಸಿನಿಮಾ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
ಅಂದಹಾಗೆ, “ಬೀರ್ಬಲ್ ಚಿತ್ರ ಮೂರು ಹಂತಗಳಲ್ಲಿ ಬರಲಿದೆ. ಈಗ ಮೊದಲ ಹಂತವಾದ “ಫೈಂಡಿಂಗ್ ವಜ್ರಮುನಿ’ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್ನಲ್ಲಿ ತೆರೆಗೆ ಬರಲಿದೆ. “ಫೈಂಡಿಂಗ್ ವಜ್ರಮುನಿ’ ನಂತರ “ಅವರನ್ ಬಿಟ್ ಇವರನ್ ಬಿಟ್ ಅವರ್ಯಾರು’ ಮತ್ತು “ತುರೇ ಮಣೆ’ ಬಿಡುಗಡೆಯಾಗಲಿವೆ. ನಿರ್ದೇಶಕ ಶ್ರೀನಿ, ಈ ಮೂರು ಭಾಗಗಳಲ್ಲೂ ಬೀರಬಲ್ ಎಂಬ ಲಾಯರ್ನ ಕಥೆಯನ್ನು ಹೇಳಲು ಹೊರಟಿದ್ದಾರೆ. ಲಾಯರ್ವೊಬ್ಬನ ಸಾಹಸಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನಕ್ಕೆ ಶ್ರೀನಿ ಕೈ ಹಾಕಿದ್ದಾರೆ.
ಚಿತ್ರದ ಬೀರಬಲ್ ಪಾತ್ರವನ್ನು ಶ್ರೀನಿ ಮಾಡುತ್ತಿದ್ದು, ಇವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇನ್ನು ಚಿತ್ರತಂಡ ಈಗಾಗಲೇ, “ರಾಗಿಣಿ ಮೇಡಂ ….’ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಈ ಹಾಡು ಟ್ರೆಂಡಿಂಗ್ನಲ್ಲಿದೆ. ಜೊತೆಗೆ ಮೊದಲ ಬಾರಿಗೆ ಸ್ಕ್ರಿಬಲ್ ಎಫೆಕ್ಟ್ ಬಳಸಲಾಗಿದೆ. ಅಜಿತ್ ಬೊಪ್ಪನಹಳ್ಳಿ ಸಾಹಿತ್ಯರುವ ಈ ಹಾಡಿಗೆ ಕಲಾಚರಣ್ ಸಂಗೀತ ನೀಡಿದ್ದಾರೆ. ಅಂದಹಾಗೆ, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ನಡಿ ಚಂದ್ರಶೇಖರ್ ಈ ಸಿನಿಮಾ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ