ರವಿ ಚನ್ನಣ್ಣನವರ್ ಕೃತಿ ಲೋಕಾರ್ಪಣೆ
Team Udayavani, Oct 25, 2018, 12:36 PM IST
ಬೆಂಗಳೂರು: ಜೀವನದಲ್ಲಿ ಅವಮಾನ ಕ್ಕೊಳ ಗಾದ ವ್ಯಕ್ತಿ ಭವಿಷ್ಯದಲ್ಲಿ ದೊಡ್ಡ ಸಾಧಕ ನಾಗುತ್ತಾನೆ ಎಂದು ಗದಗ-ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಲೇಖಕ ಎರ್ರೆಪ್ಪಗೌಡ ಚಾನಾಳ್ ಬರೆದ “ನಮ್ಮೊಳಗೊಬ್ಬ ರವಿ ಡಿ ಚನ್ನಣ್ಣನವರ್’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅವ ಮಾನಕ್ಕಿಂತ ದೊಡ್ಡ ವರ ಬೇರೆ ಯಾವುದೂ ಇಲ್ಲ. ಇದನ್ನು ಅನುಭವಿಸಿದವರು ಸಾಧಕ
ರಾಗುತ್ತಾರೆ. ಅವಮಾನವೂ ನಮ್ಮೊಳಗೆ ಛಲ ಹುಟ್ಟಿಸುತ್ತದೆ. ಆಗ ಆ ವಕ್ತಿಗೆ ಸಾಧಿಸಬೇಕೆಂಬ ಹಠ ಹುಟ್ಟುತ್ತದೆ ಎಂದು ತಿಳಿಸಿದರು.
ಸಾಧಕರು ಓದಲೇ ಬೇಕೆಂಬ ನಿಯಮ ವಿಲ್ಲ. ಅನಕ್ಷರಸ್ಥರಾದ ಬಹಳಷ್ಟು ಮಂದಿ ಆರ್ಥಿಕವಾಗಿ ಸಬಲರಾಗಿರುವ ಉದಾ
ಹರಣೆಗಳಿವೆ. ಬಡತನ ಎಂಬುದನ್ನು ಬದಲಾಯಿಸಿ ಕೊಂಡು, ಪ್ರತಿದಿನ ಹೊಸ ಮನುಷ್ಯನಾಗಿ ಹುಟ್ಟಬೇಕು ಎಂದರು.
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ.ಡಿ.ಚನ್ನಣ್ಣನವರ್ ಮಾತ ನಾಡಿ, ಶಾಲಾ ದಿನಗಳಲ್ಲಿ ಅಸಡ್ಡೆಯಿಂದ ಬದುಕುತ್ತಿದ್ದೆ. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ತತ್ವಾದರ್ಶಗಳನ್ನು ಅಧ್ಯಯನ ಮಾಡಿದಾಗ ಏನಾದರೂ ಸಾಧಿಸಬೇಕೆಂಬ ಛಲ ಮೂಡಿತು. ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಪೊಲೀಸ್ ಮುಖ್ಯ ಪೇದೆ ಎನ್.ಚಂದ್ರು “ನಮ್ಮೊಳಗೊಬ್ಬ ರವಿ ಡಿ ಚನ್ನಣ್ಣನವರ್’ ಕೃತಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಲೇಖಕ ಎರ್ರೆಪ್ಪಗೌಡ ಚಾನಾಳ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್