ಕುದ್ಕನ ಮದ್ಮೆ ಆವೊಂದುಂಡು!
Team Udayavani, Oct 25, 2018, 12:49 PM IST
ಎ.ವಿ. ಜಯರಾಜ್ ನಿರ್ದೇಶನದ ಕುದ್ಕನ ಮದ್ಮೆ ಈಗಾಗಲೇ ಶೇ. 60ರಷ್ಟು ಚಿತ್ರೀಕರಣ ಪೂರ್ಣವಾಗಿದೆ. ಸುರತ್ಕಲ್ ಸುತ್ತಮುತ್ತ ಶೂಟಿಂಗ್ ನಡೆದಿದ್ದು, ಅ.20ರಂದು 2ನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಶೇ.100ರಷ್ಟು ಕಥೆಗೆ ಪೂರಕವಾಗಿರುವ ವಿಡಂಬನಾತ್ಮಕ ಕಾಮಿಡಿ ಹೊಂದಿದ್ದು, ಜನತೆಯನ್ನು ನಗಿಸುವ ಜತೆಗೆ ಸಮಾಜಕ್ಕೊಂದು ಒಳ್ಳೆಯ ಸಂದೇಶ ಚಿತ್ರದಲ್ಲಿರಲಿದೆ.
ಅರವಿಂದ್ ಬೋಳಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಥ್ವಿ ಅಂಬರ್ ನಾಯಕ, ಶೀತಲ್ ನಾಯಕ್ ಮತ್ತು ಶ್ರೀಶ ನಾಯಕಿಯರು. ಉಳಿದಂತೆ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಕಾರ್ತಿಕ್ ರಾವ್, ದೇವಿಪ್ರಕಾಶ್ ಉರ್ವಸ್ಟೋರ್, ಅರುಣ್ ಶೆಟ್ಟಿ, ಅಶೋಕ್ ಶೆಟ್ಟಿ ಅಂಬ್ಲಿಮೊಗರು, ನವೀನ್ ಶೆಟ್ಟಿ ಸಹಿತ ತುಳು ಚಿತ್ರರಂಗದ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ಮಹಾಬಲೇಶ್ವರ ಹೊಳ್ಳ ಕೆಮರಾ, ಚಿತ್ರಕತೆ ಸುಧನ್ ಶ್ರೀಧರ್. 3 ಹಾಡುಗಳಿರಲಿದ್ದು, ರಾಹುಲ್ ಸಂಗೀತ ಸ್ವರ ಸಂಯೋಜನೆ ಮಾಡಿದ್ದಾರೆ.