ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಹಾಬಲೇಶ್ವರ ದೇಗುಲ ಹಸ್ತಾಂತರ
Team Udayavani, Nov 4, 2018, 6:25 AM IST
ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರದ ಪ್ರಭಾರ ಆಡಳಿತಾಧಿಕಾರಿ ಹಾಲಪ್ಪ ಅವರು ರಾಮಚಂದ್ರಾಪುರ ಮಠದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಅವರಿಗೆ ಹಸ್ತಾಂತರಿಸಿದರು.
ಸೋಮವಾರದೊಳಗಾಗಿ ಮಠಕ್ಕೆ ಆಡಳಿತ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು. 45 ದಿನಗಳವರೆಗೆ ದೇವಾಲಯದ ಆಡಳಿತವನ್ನು ಸರ್ಕಾರದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಹಸ್ತಾಂತರಿಸುವ ಮೂಲಕ ಈ ಹಿಂದೆ ದೇವಾಲಯದಿಂದ ವಹಿಸಿಕೊಂಡ ಚಿನ್ನಾಭರಣ, ಬೆಳ್ಳಿ ಸೇರಿ ಸಮಸ್ತ ಚರ-ಸ್ಥಿರ ಆಸ್ತಿ, ಬ್ಯಾಂಕ್ ಠೇವಣಿ, ವ್ಯವಹಾರ ನಡೆಸುವ ಚೆಕ್ ಪುಸ್ತಕಗಳು ಸೇರಿ ಎಲ್ಲವನ್ನೂ ಹಸ್ತಾಂತರಿಸಿದ್ದೇನೆಂದು ಹೇಳಿದರು.
ರಾಮಚಂದ್ರಾಪುರ ಮಠದ ದೇವಾಲಯದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಮಾತನಾಡಿ, 45 ದಿನಗಳ ಹಿಂದೆ ದೇವಾಲಯದ ಆಡಳಿತವನ್ನು ಸರ್ಕಾರ ವಹಿಸಿಕೊಂಡಿತ್ತು. ಇದೀಗ ಸುಪ್ರೀಂ ಆದೇಶದಂತೆ ಸರ್ಕಾರದ ಪ್ರತಿನಿಧಿ ಆಡಳಿತಾಧಿಕಾರಿ ಹಾಲಪ್ಪ ಅವರು ಹಸ್ತಾಂತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಅನುಕೂಲ, ಅವಶ್ಯಕತೆ ಅರಿತು ಸ್ಪಂದಿಸಲಾಗುವುದು. ಈ ಹಿಂದಿನಂತೆ ಮಹಾಬಲೇಶ್ವರನ ಸೇವೆ ಮುಂದುವರಿಯುವುದು. ಉಪಾಧಿವಂತ ಮಂಡಳದ ಸಹಕಾರಗಳೊಂದಿಗೆ ಉತ್ತಮ ಆಡಳಿತ ನೀಡಲಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ