ವಾಹನ ಸವಾರರ ಪರಿಸ್ಥಿತಿ ಶೋಚನೀಯ
Team Udayavani, Nov 6, 2018, 9:38 AM IST
ಕುಂದಾಪುರ: ನಂಬರ್ ಪ್ಲೇಟ್ ಇಲ್ಲ, ಬ್ರೇಕ್ ಲೈಟ್ ಅಂತೂ ಮೊದಲೇ ಇಲ್ಲ. ಆದರೂ ಟಿಪ್ಪರ್ ಲಾರಿಗಳು ಘನ ಗಾತ್ರದ ಬಂಡೆ ಕಲ್ಲುಗಳನ್ನು ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿಗಳಲ್ಲಿ ನಿರಾತಂಕವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
ಕೇವಲ ನಂಬರ್ ಪ್ಲೇಟ್, ಬ್ರೇಕ್ಲೈಟ್ ಮಾತ್ರವಲ್ಲ, ಇಂತಹ ಸರಕು ಸಾಗಾಟ ವಾಹನಗಳನ್ನು ಶಿಲೆಕಲ್ಲು, ಇಟ್ಟಿಗೆ, ಜಲ್ಲಿ ಕಲ್ಲು, ಮರಳುವಿನಂತಹ ವಸ್ತುಗಳನ್ನು ಸಾಗಾಟ ಮಾಡಬೇಕಾದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಆದರೆ ಇದ್ಯಾವುದನ್ನು ಈ ವಾಹನಗಳ ಚಾಲಕರು ಪಾಲಿಸುತ್ತಿಲ್ಲ.ಇತ್ತೀಚಿನ ದಿನಗಳಲ್ಲಿ ಕುಂದಾಪುರ – ಬೈಂದೂರುವರೆಗಿನ ರಾಷ್ಟ್ರೀಯ ಹೆದ್ದಾರಿ, ಕುಂದಾಪುರ – ಸಿದ್ದಾಪುರ ಹಾಗೂ ಕೋಟೇಶ್ವರ – ಹಾಲಾಡಿ ರಾಜ್ಯ ಹೆದ್ದಾರಿಗಳಲ್ಲೂ ಈ ಟಿಪ್ಪರ್ ಲಾರಿಗಳು ನಿಯಮ ಬಾಹಿರವಾಗಿ ಶಿಲೆ ಕಲ್ಲುಗಳು, ಜಲ್ಲಿ ಕಲ್ಲು, ಮಾತ್ರವಲ್ಲದೆ ಇಟ್ಟಿಗೆಗಳನ್ನು ಸಾಗಾಟ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಇನ್ನು ಈ ಟಿಪ್ಪರ್ ಲಾರಿಗಳ ಹಿಂದೆ ಸಂಚರಿಸುವ ಬೈಕ್, ರಿಕ್ಷಾ, ಕಾರು ಸವಾರರು ಮಾತ್ರ ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾದ ಪರಿಸ್ಥಿತಿ.
ಕಡಿವಾಣ ಹಾಕಲಿ
ಕಲ್ಲುಗಳನ್ನು ಸಾಗಿಸುವ ಟಿಪ್ಪರ್ ವಾಹನದ ಹಿಂದೆ ಸಂಚರಿಸುವುದೇ ಒಂದು ಸವಾಲಿನ ಸಂಗತಿ. ಅವರು ಯಾವಾಗ ನಿಲ್ಲಿಸುತ್ತಾರೋ ಗೊತ್ತಾಗುವುದಿಲ್ಲ. ಇನ್ನು ಅದರ ಸಣ್ಣ-ಸಣ್ಣ ಕಣಗಳ ಹುಡಿಗಳು ಬೈಕ್ನಲ್ಲಿ ಸಂಚರಿಸುವಾಗ ನಮ್ಮ ಕಣ್ಣಿಗೆ ತೊಂದರೆ ಉಂಟು ಮಾಡುತ್ತದೆ. ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಾದ ಅನಿವಾರ್ಯತೆಯಿದೆ.
ಬೈಕ್ ಸವಾರ, ಬಿದ್ಕಲ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ