ಶಬರಿಮಲೆಯಲ್ಲಿ ಭಕ್ತೆಯ ಮೇಲೆ ಹಲ್ಲೆ : ಮುಖ್ಯ ಆರೋಪಿ ಅರೆಸ್ಟ್
Team Udayavani, Nov 7, 2018, 6:59 PM IST
ತಿರುವನಂತಪುರ : ಶಬರಿಮಲೆ ದೇವಸ್ಥಾನವನ್ನು ಸಂದರ್ಶಿಸಲಿದ್ದ ಮಹಿಳಾ ಭಕ್ತರೋರ್ವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆ ಘಟನೆಯ ಮುಖ್ಯ ಆರೋಪಿಯಾಗಿ 29ರ ಹರೆಯದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಸೂರಜ್ ಎಂಬಾತ ಪತ್ತನಂತಿಟ್ಟ ಜಿಲ್ಲೆಯ ಎಳಂತೂರು ನಿವಾಸಿ ಎಂದು ಗೊತ್ತಾಗಿದೆ. ಎರಡು ದಿನಗಳ ಕಾಲದ ಚಿತಿರಾ ಅತ್ತ ತಿರುನಾಳ್ ಕಾರ್ಯಕ್ರಮಕ್ಕಾಗಿ ತೆರೆದಿರುವ ಶಬರಿಮಲೆ ದೇವಳಕ್ಕೆ ಭೇಟಿ ನೀಡಲಿದ್ದ ಈ ಮಹಿಳಾ ಭಕ್ತೆಯು 52ರ ಹರೆಯದವಳಾಗಿದ್ದು ಆಕೆಯ ಮುಟ್ಟು ನಿಂತಿಲ್ಲವೆಂದು ಶಂಕಿಸಿ ಬಂಧಿತ ಆರೋಪಿಯು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಲಿತಾ ರವಿ ಎಂಬ ಹೆಸರಿನ ಮಹಿಳಾ ಭಕ್ತಳನ್ನು ದೇವಸ್ಥಾನ ಪ್ರವೇಶಿಸದಂತೆ ನೂರಕ್ಕೂ ಅಧಿಕ ಉದ್ರಿಕ್ತ ಭಕ್ತರು ತಡೆಯಲು ಮುಂದಾಗಿದ್ದರು. ಬಂಧಿತ ಆರೋಪಿಯು ಆಕೆಯ ಮೇಲೆ ಹಲ್ಲೆ ಗೈದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ಮೇಲೆ ಹಲ್ಲೆಗೈದಿರುವರೆನ್ನಲಾದ ಇತರ ಆರೋಪಿಗಳನ್ನು ಬಂಧಿಸುವ ದಿಶೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಪತ್ತನಂತಿಟ್ಟ ಎಸ್ಪಿ ನಾರಾಯಣನ್ ತಿಳಿಸಿದ್ದಾರೆ. ಪೊಲೀಸರು ಸುಮಾರು 100 ಶಂಕಿತ, ಆದರೆ ಗುರುತಿಸಬಹುದಾದ, ಹಲ್ಲೆಕೋರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಭಾರೀ ಮಳೆಗೆ ಮೇಲ್ಸೇತುವೆಯ ಸ್ಲ್ಯಾಬ್ ಕುಸಿತ; ಸ್ಥಳೀಯರಲ್ಲಿ ಆತಂಕ
Panaji: ಮೇಲ್ಸೇತುವೆಯ ಸ್ಲ್ಯಾಬ್ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ
5 ರೂಪಾಯಿ ಕುರ್ಕುರೆ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಡಿವೋರ್ಸ್ ಕೊಟ್ಟ ಪತ್ನಿ.!
Lok Sabha Election: ಗಂಗಾ ಪೂಜೆಯ ಬಳಿಕ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ
ಮುಂದುವರಿದ ಹುಚ್ಚಾಟ…ದೆಹಲಿಯ ಹೆಡ್ಗೆವಾರ್ ಸೇರಿ 4 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್