1 ಲಕ್ಷ ಕೋಟಿ ಪಡೆಯಲು ಕಾನೂನು; ಇದು ಅಪಾಯಕಾರಿ : ಚಿದು
Team Udayavani, Nov 9, 2018, 11:21 AM IST
ಕೋಲ್ಕತಾ: ಆರ್ಬಿಐನಿಂದ 1 ಲಕ್ಷ ಕೋಟಿ ರೂ. ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಲು ಕೇಂದ್ರ ಸರಕಾರ ಸಿದ್ಧವಾಗಿದೆ. ಇದು ಅಪಾಯಕಾರಿ ಪ್ರವೃತ್ತಿ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.
ಕೋಲ್ಕತಾದಲ್ಲಿ ಮಾತನಾಡಿದ ಅವರು, ಆದಾಯದ ಎಲ್ಲಾ ಸಾಧ್ಯತೆಗಳು ಮುಚ್ಚಿಹೋದ ನಂತರ, ಆರ್ಬಿಐ ಮೀಸಲು ನಿಧಿಯ ಮೇಲೆ ಕಣ್ಣು ಹಾಕಿದೆ ಎಂದು ಅವರು ದೂರಿದ್ದಾರೆ. ನ.19ರಂದು ಆರ್ಬಿಐ ಸಭೆ ನಡೆಯಲಿದೆ. ಸಂದರ್ಭದಲ್ಲಿ ಗವರ್ನರ್ ಊರ್ಜಿತ್ ಪಟೇಲ್ರನ್ನು ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿರುವುದು ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸರಕಾರ ತನಗೆ ಬೇಕಾದವರನ್ನು ಆರ್ಬಿಐ ಮಂಡಳಿಯಲ್ಲಿ ಸರಕಾರ ನೇಮಿಸಿಕೊಂಡಿದೆ ಎಂದು ದೂರಿದರು.