ಗುಂಡ್ಯದಲ್ಲಿ ಮತ್ತೆ ಲಾರಿಗಳ ಪರದಾಟ
Team Udayavani, Nov 13, 2018, 10:20 AM IST
ನೆಲ್ಯಾಡಿ: ಶಿರಾಡಿ ಘಾಟಿಯಲ್ಲಿ ನ. 12ರಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಜಿಲ್ಲಾಧಿಕಾರಿಗಳ ಹೇಳಿಕೆಗಳನ್ನು ನಂಬಿ ಬಂದ ಲಾರಿ, ಟ್ಯಾಂಕರ್ ಇತ್ಯಾದಿ ಘನ ವಾಹನಗಳು ಗುಂಡ್ಯದಲ್ಲಿ ಸೋಮವಾರ ಮತ್ತೆ ಸಂಕಷ್ಟಕ್ಕೆ ಸಿಲುಕಿದವು.
ಸೋಮವಾರ ಬೆಳಗ್ಗಿನಿಂದಲೇ ಹಾಸನ, ಸಕಲೇಶಪುರ ಕಡೆಯಿಂದ ಘನ ವಾಹನಗಳು ಘಾಟಿ ಇಳಿದು ಬಂದವು. ಅವುಗಳನ್ನು ಗುಂಡ್ಯದಲ್ಲಿ ತಡೆಯಲಾಯಿತು. ಅದೇ ರೀತಿ ಮಂಗಳೂರು ಕಡೆಯಿಂದ ಬಂದ ಲಾರಿಗಳನ್ನು ಮುಂದುವರಿಯಲು ಉಪ್ಪಿನಂಗಡಿ ಪೊಲೀಸರು ಬಿಡಲಿಲ್ಲ. ಸಂಜೆವರೆಗೂ ದ.ಕ. ಜಿಲ್ಲಾಧಿಕಾರಿ ಕಚೇರಿಯಿಂದ ಸ್ಪಷ್ಟ ಆದೇಶ ಬಾರದ ಕಾರಣ ಸ್ಥಳದಲ್ಲಿ ಗೊಂದಲ ಏರ್ಪಟ್ಟಿತು. ಟನ್ಗಟ್ಟಲೆ ಭಾರ ಹೇರಿಕೊಂಡು
ಘಾಟಿ ಇಳಿದು ಬಂದ ಕೆಲವು ಲಾರಿಗಳು ಅಪರಾಹ್ನ 3 ಗಂಟೆಯ ತನಕ ಕಾದು ಮರಳಿ ಘಾಟಿ ಮೂಲಕವೇ ಸಕಲೇಶಪುರದ ಕಡೆಗೆ ಸಾಗಿದ ಘಟನೆಯೂ ನಡೆಯಿತು.
ಜಿಲ್ಲಾಡಳಿತ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಇರುವುದರಿಂದ ಲಾರಿ ಚಾಲಕರು ದಿನಂಪ್ರತಿ ಸುತ್ತುಬಳಸಿ ಸಾಗುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಗುಂಡ್ಯದ ಗೇಟ್ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಲಾರಿಗಳನ್ನು ಮುಂದುವರಿಯಲು ಬಿಡಲಾರದೆ; ಚಾಲಕರ ಪ್ರಶ್ನೆಗಳಿಗೂ ಉತ್ತರಿಸಲಾಗದೆ ಹೈರಾಣಾಗಿದ್ದಾರೆ.
ಹಾಸನ ಜಿಲ್ಲಾಡಳಿತ ಶಿರಾಡಿ ಘಾಟಿ ರಸ್ತೆಯನ್ನು ಘನ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತವೂ ಆದೇಶ ಹೊರಡಿಸಿಲ್ಲ. ಘನ ವಾಹನ ಸಂಚಾರಕ್ಕೆ ಉಭಯ ಜಿಲ್ಲಾಡಳಿತಗಳು ಕೆಲವೇ ದಿನಗಳಲ್ಲಿ ಏಕಕಾಲಕ್ಕೆ ಆದೇಶ ಹೊರಡಿಸಲಿವೆ. ಹಾಗಿದ್ದೂ ಕೆಲವು ಲಾರಿಗಳು ಘಾಟಿ ಇಳಿದಿರುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಕುಮಾರ್, ಅಪರ ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್