ಶಿರಾಡಿ ರಸ್ತೆ: ಇಂದಿನಿಂದ ಎಲ್ಲ ವಾಹನಗಳಿಗೆ ಮುಕ್ತ
Team Udayavani, Nov 15, 2018, 8:22 AM IST
ಮಂಗಳೂರು: ಶಿರಾಡಿ ಘಾಟಿ ರಸ್ತೆಯನ್ನು ಗುರುವಾರ ಬೆಳಗ್ಗಿನಿಂದ ಘನ ವಾಹನ ಸಹಿತ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತ ಗೊಳಿಸ ಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದ್ದಾರೆ. ಅಧಿಕ ಮಳೆ, ಭೂ ಕುಸಿತ ಉಂಟಾದ ಕಾರಣದಿಂದಾಗಿ ಶಿರಾಡಿ ಘಾಟಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರೀ ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಡ ಳಿತ ನಿಷೇಧ ಹೇರಿತ್ತು. ಈಗ ಸುರಕ್ಷತಾ ಕ್ರಮಗಳಾದ ಬ್ಯಾರಿಯರ್ ಗೋಡೆ ನಿರ್ಮಾಣ, ಟ್ರಾಫಿಕ್ ಸೇಫ್ಟಿ ಟೇಪ್ ಅಳ ವಡಿಕೆ, ಸೂಚನಾ ಫಲಕ, ಕ್ಯಾಟ್ ಐ ಅಳ ವಡಿಸು ವಿಕೆ, ಅಗತ್ಯ ವಿರುವ ಕಡೆ ರಸ್ತೆ ಉಬ್ಬುಗಳು, ಡೆಲಿನೇಟರ್ ಅಳವಡಿ ಸುವ ಕಾರ್ಯ ಕೈಗೊಳ್ಳ ಲಾಗಿದ್ದು, ಘಾಟಿ ರಸ್ತೆಯಲ್ಲಿ ಸಂಪೂರ್ಣ ಚೈನೇಜ್ ದ್ವಿಮುಖ ರಸ್ತೆ ಅಗಲಕ್ಕೆ ವ್ಯವಸ್ಥೆಗೊಳಿಸಲಾಗಿದೆ.
ಕಾಮಗಾರಿ ಬಹುತೇಕ ಪೂರ್ಣ ಗೊಂಡಿರುವುದರಿಂದ ಎಲ್ಲ ರೀತಿಯ ವಾಹನಗಳಿಗೆ ಅನುವು ಮಾಡಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.