ಬಿಜೆಪಿ ಸೀಟು ಕೊಡುಗೆ ಗೌರವಾರ್ಹವಾಗಿಲ್ಲ: ಕುಶವಾಹ ಅತೃಪ್ತಿ
Team Udayavani, Nov 17, 2018, 4:10 PM IST
ಪಟ್ನಾ : ಎನ್ಡಿಎ ಮಿತ್ರಪಕ್ಷವಾಗಿರುವ ಲೋಕ ಸಮತಾ ಪಾರ್ಟಿ ಅಧ್ಯಕ್ಷ ಉಪೇಂದ್ರ ಕುಶವಾಹ ಅವರು 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಕೊಟ್ಟಿರುವ ಸೀಟುಗಳ ಕೊಡುಗೆ ಸ್ವೀಕಾರಾರ್ಹವೂ ಗೌರವಾರ್ಹವೂ ಆಗಿಲ್ಲ ಎಂದು ಇಂದು ಶನಿವಾರ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಹಾಗಿದ್ದರೂ ಬಿಜೆಪಿ ತನ್ನ ಮಿತ್ರ ಪಕ್ಷವಾಗಿರುವ ಆರ್ ಎಲ್ ಎಸ್ ಪಿ ಗೆ ಎಷ್ಟು ಸೀಟುಗಳನ್ನು ಕೊಟ್ಟಿದೆ ಎಂಬ ನಿಖರ ಸಂಖ್ಯೆಯನ್ನು ಕುಶವಾಹ ಬಹಿರಂಗಪಡಿಸಿಲ್ಲ.
ನವೆಂಬರ್ 30ಕ್ಕೆ ಮುನ್ನ ಬಿಹಾರದಲ್ಲಿನ ಎನ್ಡಿಎ ಮಿತ್ರ ಪಕ್ಷಗಳೊಳಗೆ ಸೀಟು ಹಂಚಿಕೆ ಒಪ್ಪಂದ ಅಂತಿಮವಾಗಿ ಏರ್ಪಡುವ ವರೆಗೆ ತಾನು ಏನನ್ನೂ ಹೇಳುವುದಿಲ್ಲ ಎಂದು ಕುಶವಾಹ ತಮ್ಮೊಳಗಿನ ಅಸಮಾಧಾನವನ್ನು ತಮ್ಮೊಳಗೇ ಒತ್ತಿಟ್ಟುಕೊಂಡರು.
ಅಂದ ಹಾಗೆ ಕುಶವಾಹ ಮತ್ತು ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರೊಳಗಿನ ಸಂಬಂಧಗಳು ಈಚೆಗೆ ಹದಗೆಟ್ಟಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!