ಮೊಬೈಲ್ ಕದ್ದ ಶಂಕೆ: 19ರ ಹರೆಯದ ಯುವಕನ ಹತ್ಯೆ
Team Udayavani, Nov 21, 2018, 11:51 AM IST
ಮುಂಬಯಿ: ವಿಕ್ರೋಲಿ ಪಶ್ಚಿಮದ ಸೂರ್ಯ ನಗರದಲ್ಲಿ ಯುವಕನೋರ್ವನನ್ನು ಮೊಬೈಲ್ ಕದ್ದಿದ್ದಾನೆಂಬ ಶಂಕೆಯಲ್ಲಿ ನಾಲ್ವರು ವ್ಯಕ್ತಿಗಳು ಥಳಿಸಿ ಕೊಂದ ಘಟನೆ ಸಂಭವಿಸಿದೆ.
ಮೃತ ಯುವಕನನ್ನು 19ರ ಹರೆಯದ ರಾಹುಲ್ ಪಂಚಾಲ್ ಎಂದು ಗುರುತಿಸಲಾಗಿದೆ. ಘಟನೆ ರವಿವಾರ ಸಂಜೆ ಸಂಭವಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಮೂವರು ಅಣ್ಣ-ತಮ್ಮಂದಿರಾಗಿದ್ದಾರೆ.
ಮೊಬೈಲ್ ಕದ್ದಿರಲಿಲ್ಲ ಕುಟುಂಬದವರ ಹೇಳಿಕೆ
ಪಂಚಾಲ್ ಮೊಬೈಲ್ ಫೋನ್ ಕದ್ದಿರಲಿಲ್ಲ. ಆರೋಪಿಗಳು ಸ್ಥಳೀಯ ಗೂಂಡಾಗಳಾಗಿದ್ದು ಪಂಚಾಲ್ನನ್ನು ಯಾವಾಗಲೂ ಸತಾಯಿಸುತ್ತಿದ್ದರೆಂದು ಆತನ ಕುಟುಂಬ ಸದಸ್ಯರು ಹೇಳಿದ್ದಾರೆ. ಆರೋಪಿಗಳನ್ನು ಸುರೇಶ್ ವರ್ಮ, ಸುರೇಂದ್ರ ವರ್ಮ, ಶಿವಕುಮಾರ್ ವರ್ಮ ಮತ್ತು ಮೋನು ಪಾಂಡೆ ಎಂದು ಗುರುತಿಸಲಾಗಿದೆ.
2 ವಾರಗಳ ಹಿಂದೆ ಕಳವು
ಸುರೇಶ್ನ ಮೊಬೈಲ್ ಫೋನನ್ನು ಎರಡು ವಾರಗಳ ಹಿಂದೆ ಆತನ ಮನೆಯಿಂದ ಕದಿಯಲಾಗಿತ್ತು. ಅದು ಪಂಚಾಲ್ನ ಕೃತ್ಯವೆಂದು ಆತ ಶಂಕಿಸಿದ್ದ. ರವಿವಾರ ಸಂಜೆ ಪಂಚಾಲ್ ತನ್ನ ಮನೆಯಂದ ಹೊರಬಂದ ವೇಳೆ ಆರೋಪಿಗಳು ಆತನಿಗೆ ಹೊಡೆದು ಹಾಗೂ ತುಳಿದು ಹಲ್ಲೆ ನಡೆಸಿದರು. ತೀವ್ರ ಹಲ್ಲೆಯಿಂದಾಗಿ ಆತ ಕುಸಿದುಬಿದ್ದ. ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ
PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
MUST WATCH
ಹೊಸ ಸೇರ್ಪಡೆ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!
Mumbai: 45 ದಿನದಲ್ಲಿ 300 ಐಸ್ಕ್ರೀಂ ಆರ್ಡರ್ ಮಾಡಿದ!
Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ