ನವಿಮುಂಬಯಿ, ವಡಾಲದಲ್ಲಿ ಜಾನಪದ ಜಾತ್ರೆ


Team Udayavani, Nov 21, 2018, 4:33 PM IST

2011mum05.jpg

ಮುಂಬಯಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಸರಕಾರದ ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ  ಕೇಂದ್ರ ನಾಗಪುರ ಇವರ ಸಹಕಾರದೊಂದಿಗೆ ಮೈಸೂರು ಅಸೋಸಿಯೇಷನ್‌, ನವಿ ಮುಂಬಯಿ ಕನ್ನಡ ಸಂಘ, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಗಳು ಜಂಟಿ ಆಯೋಜನೆಯಲ್ಲಿ ಜಾನಪದ ಜಾತ್ರೆಯು ನ. 24 ಮತ್ತು ನ. 25 ರಂದು  ನಡೆಯಲಿದೆ.

ನ.  24 ರಂದು  ನವಿ ಮುಂಬಯಿ ಕನ್ನಡ ಸಂಘದಲ್ಲಿ, ನ. 25ರಂದು ವಡಾಲದ  ರಾಷ್ಟ್ರೀಯ ಕನ್ನಡ ಶಾಲೆಯಲ್ಲಿ ಈ ಜಾನಪದಜಾತ್ರೆ ಜರಗಲಿದೆ. ಎರಡೂ ದಿನಗಳಲ್ಲಿ ಅಪರಾಹ್ನ  3 ರಿಂದ ಜಾನಪದ ಜಾತ್ರೆಯ ಮೆರವಣಿಗೆ ಹೊರಟು, ಸಂಜೆ 5 ರಿಂದ ರಾತ್ರಿ  8 ರವರೆಗೆ ವಿವಿಧ ಜಾನಪದ ಕುಣಿತಗಳು ಮತ್ತು ಹಾಡುಗಳ ಪ್ರದರ್ಶನ ನಡೆಯಲಿದೆ.  ಇದರಲ್ಲಿ ಜಾನಪದ ಗಾಯನ, ತತ್ವಪದ, ಸುಗಮ ಸಂಗೀತ, ತೊಗಲು ಬೊಂಬೆ, ಹುಲಿವೇಷ, ಪೂಜಾಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ಗೊರವರ ಕುಣಿತ, ನಗಾರಿ ವಾದನ ಇನ್ನಿತರ  ಹಲವಾರು ಕುಣಿತಗಳು ಜಾನಪದ ಜಾತ್ರೆಯಲ್ಲಿರಲಿವೆೆ.

ಏನಿದು ಜಾನಪದ ಜಾತ್ರೆ
ಕರ್ನಾಟಕ ಕಲೆಗಳ ಬೀಡಾಗಿದೆ. ಪ್ರಾಚೀನ ಕಾಲದಿಂದಲೂ ಕನ್ನಡಿಗರು, ಹಾಡು, ಕುಣಿತ, ನಾಟಕಗಳಿಗೆ ಹೆಸರಾದವರು. ತಮಿಳಿನ “ಚಿಲಪಡಿಕ್ಕಾರಂ’ ಐದನೆಯ ಶತಮಾನದಲ್ಲಿ ಕೂಡ, “ಕರುನಾಡರ್‌ ಆಡಿದರ್‌’ಎಂದು ಉಲ್ಲೇಖೀಸುತ್ತದೆ. ಜನರು, ತಮ್ಮ ಬೇಸಾಯದಲ್ಲಿ, ಅಕ್ಕಿ-ರಾಗಿ ಕುಟ್ಟುವುದರಲ್ಲಿ ಮಗುವನ್ನು ತೂಗುವುದರಲ್ಲಿಯೇ ಅಲ್ಲದೆ, ತಮ್ಮ ದೇವರ ಮೆರವಣಿಗೆಗಳಲ್ಲಿ, ಕುಣಿದು ಆ ದೇವರುಗಳನ್ನು ಕೊಂಡಾಡುತ್ತಿದ್ದುದು 2000ಕ್ಕೂ ಮಿಕ್ಕಿದ  ವರ್ಷಗಳಿಂದ ನಡೆದು ಬಂದಿದೆ. ವೀರಗಾಸೆ, ಕಳಸ ಕುಣಿತ, ಪೂಜಾ ನೃತ್ಯ, ಪಟಕುಣಿತ, ಹುಲಿ ವೇಷ, ಮುಂತಾದವುಗಳು ಇಂದೂ ಕನ್ನಡ ನಾಡಿನ ಹಳ್ಳಿಗಳಲ್ಲಿ ಮೆರೆಯುತ್ತಿವೆ. ಅಳಿದು ಹೋಗುತ್ತಿದ್ದ ಈ ಕಲೆಗಳನ್ನು ಅನೇಕರು  ಮತ್ತೆ ಎತ್ತಿ ಹಿಡಿದಿದ್ದಾರೆ. ಐ. ಎಂ ವಿಠuಲಮೂರ್ತಿ, ಶ್ರೀನಿವಾಸ ಜಿ. ಕಪ್ಪಣ್ಣ, ನಾಗರಾಜ ಮೂರ್ತಿ ಇವರು ಕರ್ನಾಟಕದುದ್ದಕ್ಕೂ ಜಾನಪದ ಜಾತ್ರೆಗಳನ್ನು ನಡೆಸುತ್ತಿದ್ದಾರೆ. ತಾಳವೇ ಜೀವವಾದ ಈ ಕುಣಿತಗಳ ಹಾಡುಗಳಿಗೆ, ಮತ್ತೆ ಹೊಸ ಮೆರುಗನ್ನು ಕೊಟ್ಟು ಜನಪ್ರಿಯವಾಗಿ ಮಾಡಿದ್ದಾರೆ.

ಹಿಂದೆಯೂ ಮುಂಬಯಿಯಲ್ಲಿ  ನಡೆದಿದೆ 
ಕರ್ನಾಟಕ ಸರ್ಕಾರ ಮತ್ತುಕನ್ನಡ-ಸಂಸ್ಕೃತಿ ಇಲಾಖೆಯ ಪಾತ್ರ, ಈ ಪುನರುಜ್ಜೀವನದಲ್ಲಿ ಅಪಾರವಾಗಿದೆ. 2006 ರಲ್ಲಿ, “ಸುವರ್ಣ ಕರ್ನಾಟಕ’ ಜಾತ್ರೆಯಲ್ಲಿ, ಮುಂಬಯಿಯ 30 ಕನ್ನಡ ಸಂಘಗಳು ಒಡಗೂಡಿ ರಾಷ್ಟ್ರೀಯ ಕನ್ನಡ ಶಾಲೆ ವಡಾಲದಲ್ಲಿ ಬರಮಾಡಿಕೊಂಡು ಅದ್ದೂರಿಯಾಗಿ ಮೆರವಣಿಗೆಯನ್ನು ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅಂತೆಯೇ 2017ರಲ್ಲಿ  ತರಳಬಾಳು ಮಠದ ಶ್ರೀ ಶಿವಾಚಾರ ಸ್ವಾಮಿಗಳು 200 ಕಲಾವಿದರನ್ನು ಮುಂಬಯಿಗೆ ಕರೆತಂದು ಜಾನಪದ ಜಾತ್ರೆಯನ್ನು ನಡೆಸಿದ್ದರು. ಜಾನಪದ ಜಾತ್ರೆಯಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರೂ ಕೂಡ ಕರ್ನಾಟಕದ ಹಳ್ಳಿ-ಹಳ್ಳಿಗಳಿಂದ ಬರುತ್ತಿದ್ದಾರೆ. ಇವರ ಕುಣಿತಗಳನ್ನು ನೋಡುವ, ಹಾಡುಗಳನ್ನು ಕೇಳುವ ಅವಕಾಶ ಮುಂಬಯಿಗರಿಗೆ ದೊರೆಯಲಿದ್ದು, ಕನ್ನಡಿಗರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ  ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.