ಸತ್ತರೂ ಲಾಬಿ ಮಾಡಲ್ಲ, ಮಂತ್ರಿ ಆಗು ಅಂದ್ರೆ ಆಗುತ್ತೇನೆ: ಹೊರಟ್ಟಿ
Team Udayavani, Nov 22, 2018, 6:00 AM IST
ಶಿರಸಿ: “ನಾನು ಸತ್ತರೂ ಲಾಬಿ ಮಾಡುವುದಿಲ್ಲ. ನನ್ನ ಸಾಮರ್ಥ್ಯ ಏನು ಅಂತ ಸರ್ಕಾರಕ್ಕೆ ಗೊತ್ತಿದೆ. ಲಾಬಿ ಮಾಡುವ ಅಗತ್ಯವೇ ಇಲ್ಲ. ಸಭಾಪತಿ ಆಗು ಅಂದರು ಆದೆ, ಮಂತ್ರಿ ಆಗು ಅಂದರೆ ವಹಿಸಿಕೊಳ್ಳುವೆ. ಯಾವುದೂ ಬೇಡ ಎಂದರೆ ಎಂಎಲ್ಸಿ ಆಗಿರುವೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಇಂತದ್ದೇ ಸ್ಥಾನ ಕೊಡಿ ಎಂದು ಯಾರಿಗೂ ಹೇಳುವುದಿಲ್ಲ. ಸರ್ಕಾರದಲ್ಲಿ ಜಂಟಿಯಾಗಿ ನಿರ್ವಹಿಸುವ ಜವಾಬ್ದಾರಿ ಇದೆ. ಅವರದ್ದೇ ಆದ ಸಮಸ್ಯೆಗಳೂ ಇವೆ. ಅವಕಾಶವಾದಿಯೂ ನಾನಲ್ಲ, ಅಂತಹ ಆಸೇನೂ ಇಲ್ಲ. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಬೇಕು. ಇಲ್ಲಿ 96 ಶಾಸಕರು ಇದ್ದಾರೆ ಎಂದರು.
“ಶಿಕ್ಷಣ ಇಲಾಖೆಯ ಸಮಸ್ಯೆ ಇತ್ಯರ್ಥ ಮಾಡುವುದು ದೊಡ್ಡ ಕೆಲಸ ಅಲ್ಲ. ಹೆಚ್ಚುವರಿ ಶಿಕ್ಷಕರು, ಸರ್ಕಾರಿ ಶಾಲೆ ದಾಖಲಾತಿ, ವರ್ಗಾವಣೆ ತಲೆ ಬೇನೆ, ಮಕ್ಕಳಿಗೆ ಪಠ್ಯ ಪೂರೈಕೆ, ಸೈಕಲ್ ವಿತರಣೆ ಆಗದೆ ಇರುವುದು ಸೇರಿದಂತೆ ಹಲವು ಸಮಸ್ಯೆಗಳಿವೆ. 2007ರ ನಂತರ ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆ ಬರುತ್ತಿದೆ. ಅಧಿಕಾರಿಗಳೂ ಸಚಿವರ ಬಳಿ ಮಾಹಿತಿ ಕೊಡದೆ ಇರುವುದು ಸಮಸ್ಯೆ ಆಗಬಹುದು. ಏಳನೇ ತರಗತಿಗಳಿರುವ ಶಾಲೆಗೆ ಕಡ್ಡಾಯವಾಗಿ ದೈಹಿಕ ಶಿಕ್ಷಕರು ಇರಬೇಕು. ಕೇರಳ ಮಾದರಿಯಂತೆ ತರಗತಿಗೊಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು. ಇದಕ್ಕೆ ಇಚ್ಛಾಶಕ್ತಿ ಇರಬೇಕು. ನಾನು ಸಚಿವನಾಗಿದ್ದಾಗ ಮೇ 15ರೊಳಗೆ ಎಲ್ಲವೂ ಲಭ್ಯ ಇರುತ್ತಿತ್ತು. ಶಿಕ್ಷಣಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ತನ್ವೀರ್ ಸೇಠ್ ಇದ್ದಾಗಲೂ ಸಮಸ್ಯೆ ಇತ್ತು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ
ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್ ಬಳಕೆ
ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?
Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು
MUST WATCH
ಹೊಸ ಸೇರ್ಪಡೆ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮಹಮದ್ ಜುಬೇರ್ ಉಚ್ಛಾಟನೆ
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ
Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ