ರೈತರ ಆತ್ಮಹತ್ಯೆ: ತಂದೆ ರಕ್ಷಿಸಲು ಮುಂದಾದ ಮಗನೂ ನೀರುಪಾಲು
Team Udayavani, Nov 23, 2018, 6:50 AM IST
ಎನ್.ಆರ್.ಪುರ/ಬಂಕಾಪುರ: ರಾಜ್ಯದ ವಿವಿಧೆಡೆ ಸಾಲಬಾಧೆಗೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ತಂದೆಯನ್ನು ರಕ್ಷಿಸಲು ಹೋದ ಯುವಕನೂ ನೀರು ಪಾಲಾದ ಘಟನೆ ನಡೆದಿದೆ.
ಎನ್.ಆರ್.ಪುರ ತಾಲೂಕಿನ ಹೊನ್ನೇಕುಡಿಗೆ ಗ್ರಾಮದ ತಿಮ್ಮಣ್ಣಗೌಡ (54) ಎಂಬುವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ, ತಂದೆ ರಕ್ಷಿಸಲು ಹೋದ ಪುತ್ರ ಅಭಿಷೇಕ್ (24) ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಿಮ್ಮಣ್ಣ ಗೌಡ ಸಾಲೂರು ಗ್ರಾಮದಲ್ಲಿ 2 ಎಕರೆ ಜಮೀನು ಹೊಂದಿದ್ದು, ಕೃಷಿ ಕಾರ್ಯಕ್ಕಾಗಿ ಎನ್.ಆರ್. ಪುರದ ರಾಷ್ಟ್ರೀಕೃತ ಬ್ಯಾಂಕ್ವೊಂದರ ಶಾಖೆಯಲ್ಲಿ 3 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಜಮೀನಿನಲ್ಲಿ ಬಾಳೆ, ಶುಂಠಿ, ಭತ್ತ ಬೆಳೆದಿದ್ದರು. ಆದರೆ ಬೆಳೆ ನಷ್ಟವಾಗಿತ್ತು. ಬುಧವಾರ ರಾತ್ರಿ ಕುಟುಂಬದವರೊಂದಿಗೆ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಸಾಲದ ಬಗ್ಗೆ ಪ್ರಸ್ತಾಪಿಸಿದ ತಿಮ್ಮಣ್ಣಗೌಡ ಸಾಲ ತೀರಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಏಕಾಏಕಿ ಎದ್ದು ಓಡಿ ಹೋಗಿದ್ದಾರೆ. ಇದರಿಂದ ಗಾಬರಿಗೊಂಡ
ಮಗ ಅಭಿಷೇಕ್ ಸಹ ತಂದೆಯನ್ನು ಹಿಂಬಾಲಿಸಿದ್ದಾರೆ.
ತಂದೆ ಕೆರೆಗೆ ಹಾರಿದ್ದನ್ನು ನೋಡಿದ ಅಭಿಷೇಕ್ ಅವರನ್ನು ರಕ್ಷಿಸಲು ತಾನೂ ಕೆರೆಗೆ ಹಾರಿದ್ದಾನೆ. ಹಾವೇರಿ ಜಿಲ್ಲೆ ಬಂಕಾಪುರ ಸಮೀಪದ ಹುಲಿಕಟ್ಟಿ ಗ್ರಾಮದ ರಮೇಶ ಬಸವಣ್ಣೆಪ್ಪ ಪೂಜಾರ (46) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ 3 ಎಕರೆ ಜಮೀನು ಹೊಂದಿದ್ದ. ಈ ಬಾರಿ ಹತ್ತಿ, ಗೋವಿನಜೋಳ ಬೆಳೆದಿದ್ದ. ಇಲ್ಲಿಯ ಕೆನರಾ ಬ್ಯಾಂಕಿನಲ್ಲಿ 75 ಸಾವಿರ ಸಾಲ, ಕೆವಿಜಿ
ಬ್ಯಾಂಕಿನಲ್ಲಿ 1ಲಕ್ಷ ಸೇರಿದಂತೆ ಕೈಗಡ ಎರಡು ಲಕ್ಷಕ್ಕಿಂತ ಅಧಿಕ ಸಾಲ ಮಾಡಿರುವುದಾಗಿ ತಿಳಿದು ಬಂದಿದೆ.ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ