ರಾಯರ ಪವಾಡ: ಸಾಲಿಗ್ರಾಮವಾಗಿ ಪರಿವರ್ತನೆಗೊಂಡ ಮಂತ್ರಾಕ್ಷತೆ!
Team Udayavani, Nov 30, 2018, 6:05 AM IST
ಬಾಗಲಕೋಟೆ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಯಿಂದ ತಂದಿದ್ದ ಮಂತ್ರಾಕ್ಷತೆ ಮತ್ತು ನಿರ್ಮಾಲ್ಯಗಳು ಸಾಲಿಗ್ರಾಮವಾಗಿ ಪರಿವರ್ತನೆಗೊಂಡ ಪವಾಡ ವಿದ್ಯಾಗಿರಿಯ ಪ್ರಹ್ಲಾದ ಸಿಮೀಕೇರಿ ಅವರ ನಿವಾಸದಲ್ಲಿ ನಡೆದಿದೆ.
ವಿದ್ಯಾಗಿರಿ 12ನೇ ಕ್ರಾಸ್ ನಿವಾಸಿ, ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಪರಮಭಕ್ತ ಪ್ರಹ್ಲಾದ ಸಿಮೀಕೇರಿ ಅವರು ಆರು ತಿಂಗಳ ಹಿಂದೆ ಮಂತ್ರಾಲಯಕ್ಕೆ ತೆರಳಿದ್ದರು. ಆಗ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು, ಆಶೀರ್ವಾದ ರೂಪದಲ್ಲಿ ಮಂತ್ರಾಕ್ಷತೆ ಮತ್ತು ನಿರ್ಮಾಲ್ಯ ನೀಡಿದ್ದರು. ಅವುಗಳನ್ನು ತಂದು ಮನೆಯ ಜಗುಲಿಯ ಮೇಲೆ ಇಟ್ಟಿದ್ದರು. ಈ ಮಂತ್ರಾಕ್ಷತೆ ಮತ್ತು ನಿರ್ಮಾಲ್ಯಗಳು 10 ಸಾಲಿಗ್ರಾಮಗಳಾಗಿ ಪರಿವರ್ತನೆಗೊಂಡಿದ್ದವು. ಆದರೆ, ಇದನ್ನು ಪ್ರಹ್ಲಾದ ಅವರು ಬಹಿರಂಗಪಡಿಸಿರಲಿಲ್ಲ. ಪುನಃ ಬುಧವಾರ ಮಂತ್ರಾಲಯಕ್ಕೆ ಹೋಗಿ ಅವುಗಳನ್ನು ಸುಬುಧೇಂದ್ರತೀರ್ಥ ಶ್ರೀಗಳಿಗೆ ತೋರಿಸಿದಾಗ ಅವು ಸಾಲಿಗ್ರಾಮಗಳಾಗಿ ಪರಿವರ್ತನೆಗೊಂಡಿರುವುದು ನಿಜ ಎಂದು ಖಚಿತಪಡಿಸಿದರು.
ಅದರಲ್ಲಿ ಐದು ಮಂತ್ರಾಲಯದ ಶ್ರೀ ಮಠದಲ್ಲಿಟ್ಟು, ಇನ್ನುಳಿದ ಐದನ್ನು ಮರಳಿ ತಮ್ಮ ನಿವಾಸಕ್ಕೆ ತಂದು, ಗುರುವಾರ ಈ ವಿಷಯ ಬಹಿರಂಗಪಡಿಸಿದ್ದಾರೆ. ಬ್ರಾಹ್ಮಣ ಸಂಪ್ರದಾಯದಲ್ಲಿ ಪವಿತ್ರವಾದ ಸ್ಥಾನವನ್ನು ಈ ಸಾಲಿಗ್ರಾಮಗಳು ಪಡೆದಿವೆ. ದೇವರ ಸ್ವರೂಪ ಎಂಬ ನಂಬಿಕೆಯೂ ಭಕ್ತರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ