ಡಾ| ಪಾಟೀಲಗೆ ಕುಂಚ ಕಲಾ ತಪಸ್ವಿ ಪ್ರಶಸ್ತಿ ಪ್ರದಾನ
Team Udayavani, Nov 30, 2018, 5:13 PM IST
ಧಾರವಾಡ: ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ನೀಡುವ ಒಂದು ಲಕ್ಷ ನಗದು, ಸ್ಮರಣಿಕೆ ಒಳಗೊಂಡಿರುವ ಜೀವಮಾನ ಸಾಧನೆಯ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯನ್ನು ಕಲಬುರಗಿಯ ಡಾ.ಎ.ಎಸ್. ಪಾಟೀಲ ಅವರಿಗೆ ನಗರದಲ್ಲಿ ಸೃಜನಾ ರಂಗಮಂದಿರದಲ್ಲಿ ಪ್ರದಾನ ಮಾಡಲಾಯಿತು. ಇದಲ್ಲದೇ 50 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿಗೆ ಸುರೇಖಾ ಹಾಗೂ ತಲಾ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಒಡಿಶಾದ ಸಂತೋಷಕುಮಾರ ರೌತರಾಯ್ ಮತ್ತು ಪರಾಗ ದಿನೇಶ ಬೋರ್ಸೆ ಅವರಿಗೆ ನೀಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಡಿ.ವಿ. ಹಾಲಭಾವಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದು, ಅದನ್ನು ಎಂದಿಗೂ ಮರೆಯಲಾಗದು. ಅವರ ಮಾರ್ಗದರ್ಶನದಲ್ಲಿ ಯುವ ಕಲಾವಿದರು ತಮ್ಮೊಳಗಿನ ಕಲೆಯನ್ನು ಹೊರ ಹಾಕುವ ಕೆಲಸ ಮಾಡಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ.ಎ.ಎಸ್. ಪಾಟೀಲ ಮಾತನಾಡಿ, ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಅಮೂಲ್ಯ ರತ್ನಗಳನ್ನೇ ನೀಡಿದ ಪುಣ್ಯಭೂಮಿ ಧಾರವಾಡ. ಈ ಮಣ್ಣಿನ ಗಂಧವೇ ಅಂತಹದ್ದು. ಈ ಭೂಮಿಯಲ್ಲಿ ಚಿತ್ರಕಲಾ ಶಿಲ್ಪಿ ಆಗಿ ಯುವ ಕಲಾವಿದರಿಗೆ ಮಾದರಿ ಆಗಿರುವ ಹಾಲಭಾವಿ ಅವರ ಸ್ಮರಣೆ ಅನುಕರಣೀಯ. ಕಲಾವಿದರು ಬೆಳೆಯಬೇಕಾದರೆ ಕಲಾ ಪೋಷಕರು ಬೇಕು. ಇಂತಹ ಕೆಲಸವನ್ನು ಹಾಲಭಾವಿ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹಾಲಭಾವಿ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಸಂತಸದೊಂದಿಗೆ ಜವಾಬ್ದಾರಿ ಹೆಚ್ಚುವಂತೆ ಮಾಡಿದೆ. ಹೀಗಾಗಿ ಮತ್ತಷ್ಟು ಕೆಲಸ ಮಾಡುವೆ. ಈಗಾಗಲೇ ನಾನೊಂದು ಟ್ರಸ್ಟ್ ರಚನೆ ಮಾಡಿಕೊಂಡು ಕಳೆದ 17 ವರ್ಷಗಳಿಂದ ಯುವ ಕಲಾವಿದರಿಗೆ ತಮ್ಮ ಕಲೆ ಪ್ರದರ್ಶಿಸಲು ವೇದಿಕೆ ಒದಗಿಸುವ ಕೆಲಸ ಮಾಡುತ್ತಿವೆ. ಸದ್ಯ ಈ ಪ್ರಶಸ್ತಿಯಲ್ಲಿ ದೊರೆತ ಒಂದು ಲಕ್ಷ ರೂ. ಹಣವನ್ನೂ ಕಲಾವಿದರ ಕಾರ್ಯ ಚಟುವಟಿಕೆಗೆ ಬಳಕೆ ಮಾಡುವುದಾಗಿ ತಿಳಿಸಿದರು. ಬೆಂಗಳೂರಿಗೆ ಸುರೇಖಾ ಮಾತನಾಡಿ, ಕಲಾವಿದರಿಗೆ ಸಾಕಷ್ಟು ಅಡೆತಡೆ, ಸಂಕಷ್ಟಗಳು ಇವೆ. ಇದೆಲ್ಲದರ ನಡುವೆ ಕಲಾವಿದರು ತಮ್ಮ ಕಲಾ ಆರಾಧನೆ ಮಾಡುತ್ತಿದ್ದಾರೆ. ಸರಕಾರಗಳು ಸಹ ಕಲಾವಿದರ ಸಂಕಷ್ಟ ಅರಿತು, ಅವುಗಳ ನಿವಾರಣೆ ಮಾಡಬೇಕು ಎಂದರು.
ಕಲಾವಿದರಾದ ಒಡಿಶಾದ ಸಂತೋಷಕುಮಾರ ರೌತರಾಯ್ ಮತ್ತು ಪರಾಗ ದಿನೇಶ ಬೋರ್ಸೆ ಅವರು ಅನಿಸಿಕೆ ಹಂಚಿಕೊಂಡರು. ಜಿಲ್ಲಾಧಿಕಾರಿ ದೀಪಾ ಚೋಳನ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಾಜಿ ಶಾಸಕ ಎ.ಬಿ. ದೇಸಾಯಿ, ನಾಡೋಜ ಡಾ| ಮಹೇಶ ಜೋಶಿ, ಜಿಪಂ ಸಿಇಒ ಡಾ| ಬಿ.ಸಿ.ಸತೀಶ್, ಟ್ರಸ್ಟ್ ಸದಸ್ಯರಾದ ಎನ್.ಆರ್. ಬಾಳಿಕಾಯಿ, ಪಾರ್ವತಿ ಹಾಲಭಾವಿ, ಬಿ. ಮಾರುತಿ, ಎಸ್.ಕೆ. ಪತ್ತಾರ, ಸಿ.ಜಿ. ಪಾಟೀಲ, ಸುರೇಶ ಹಾಲಭಾವಿ, ಎಸ್.ಕೆ. ರಂಗಣ್ಣವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್
Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!
Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು
Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ
Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್