ಸಿಎಂಗೆ ಧಮ್ ಇಲ್ವಾ ? ಜೆಡಿಎಸ್ ತವರಿನಲ್ಲೇ ಮಹಿಳೆಯ ಆಕ್ರೋಶ
Team Udayavani, Dec 2, 2018, 5:38 PM IST
ಸಕಲೇಶಪುರ: ಸಮಸ್ಯೆಗಳಿಂದ ನೊಂದವರು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ಹೊರ ಹಾಕುವುದು ಮುಂದುವರಿದ್ದು, ಆನೆ ದಾಳಿಯಿಂದ ನೊಂದಿರುವ ಮಹಿಳೆಯೊಬ್ಬರು ಸಿಎಂಗೆ ಧಮ್ ಇಲ್ವಾ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಾಡಾನೆ ಸಮಸ್ಯೆ ಶಾಶ್ವತ ವಾಗಿ ಬಗೆಹರಿಸುವಂತೆ ಆಗ್ರಹಿಸಿ ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು ಭಾನುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆಯಲ್ಲಿ ಅಧಿಕಾರಿಗಳ ಎದುರು ಆಕ್ರೋಶ ಹೊರ ಹಾಕಿದ ಮಹಿಳೆ, ಇಲ್ಲಿ ನಿತ್ಯವೂ ಆನೆ ದಾಳಿಯಿಂದ ರೈತರು ಸಾಯುತ್ತಿದ್ದಾರೆ,ಸಂಕಷ್ಟಕ್ಕೀಡಾಗುತ್ತಿದ್ದಾರೆ. ಮುಖ್ಯಮಂತ್ರಿಗಳು ನಾವು ರೈತಪರ, ಜನಪರ ಅಂತ ಹೇಳುತ್ತಾರೆ,ಇಲ್ಲಿಗೆ ಬಂದು ನಮ್ಮ ಸಮಸ್ಯೆಗಳನ್ನು ಆಲಿಸಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಆನೆ ದಾಳಿಯಿಂದ ಒಬ್ಬ ಗಂಡಸು ಸಾವನ್ನಪ್ಪಿದರೆ ಹೆಣ್ಣೊಬ್ಬಳು ವಿಧವೆಯಾಗುತ್ತಾಳೆ.ಅವಳನ್ನು ಸಮಾಜ ಹೇಗೆ ನೋಡುತ್ತದೆ ಗೊತ್ತಿದೆಯೇ? ನೀವು ಇಲ್ಲಿಗೆ ಬಂದು ನೋಡಿ, ಎಸಿ ಕಾರಿನಲ್ಲಿ ತಿರುಗಿದರೆ ಆಗುವುದಿಲ್ಲ. ನಮಗೆ 5 ಲಕ್ಷ ರೂಪಾಯಿ ಪರಿಹಾರ ನೀಡಿದರೆ ಸಾಕಾ ಎಂದು ಪ್ರಶ್ನಿಸಿದ್ದಾರೆ.
ಯಾರೇ ಆದರೂ ಏರು ಧ್ವನಿಯಲ್ಲಿ ಆಕ್ರೋಶ ಹೊರ ಹಾಕಿದರೆ ಸಿಎಂ ಎಚ್ಡಿಕೆಯವರು ಅದಕ್ಕೆ ಸಿಟ್ಟಿನಲ್ಲೇ ತಿರುಗೇಟು ನೀಡುವುದು ಸಾಮಾನ್ಯ. ಹಾಸನದ ಮಹಿಳೆಯ ಆಕ್ರೋಶಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ