ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ ಆಯ್ಕೆ
Team Udayavani, Dec 13, 2018, 6:15 AM IST
ವಿಧಾನಪರಿಷತ್ತು: ಮೇಲ್ಮನೆಯ 47ನೇ ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ ಅವರು ಬುಧವಾರ ಅವಿರೋಧವಾಗಿ ಆಯ್ಕೆ ಯಾದರು. ಆ ಮೂಲಕ ಎಂಟು ವರ್ಷಗಳ ಬಳಿಕ ಕಾಂಗ್ರೆಸ್ಗೆ ಸಭಾಪತಿ ಸ್ಥಾನ ಒಲಿದಂತಾಯಿತು.
ಬೆಳಗ್ಗೆ 10.50ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೊದಲಿಗೆ ಚುನಾವಣಾ ಪ್ರಸ್ತಾಪ ಆರಂಭಿಸಿದರು.
ಸಭಾಪತಿ ಸ್ಥಾನಕ್ಕೆ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಹೆಸರನ್ನು ಸೂಚಿಸಿ ಎಚ್.ಎಂ.ರೇವಣ್ಣ, ಅಲ್ಲಂ ವೀರಭದ್ರಪ್ಪ ಹಾಗೂ ಐವಾನ್ ಡಿಸೋಜಾ, ಆರ್. ಬಿ.ತಿಮ್ಮಾಪುರ ಹಾಗೂ ಕೆ.ಅಬ್ದುಲ್ ಜಬ್ಟಾರ್ ಅವರು ಅನುಮೋದಕರಾಗಿರುವ ಪ್ರಸ್ತಾವಗಳನ್ನು ಉಲ್ಲೇಖೀಸಲಾಯಿತು. ಬಳಿಕ, ಪ್ರಸ್ತಾವನೆ ಯನ್ನು ಸದನ ಧ್ವನಿಮತದ ಮೂಲಕ ಅಂಗೀಕರಿಸಿದ ಹಿನ್ನೆಲೆಯಲ್ಲಿ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸಭಾಪತಿ ಪ್ರಕಟಿಸಿದರು.
ನಾನು ಯಾವುದೇ ಕ್ಲೇಮ್ ಮಾಡಿರದಿದ್ದರೂ ಪಕ್ಷವೇ ಅವಕಾಶ ನೀಡಿದೆ. ಈ ಸ್ಥಾನಕ್ಕೆ ಆಯ್ಕೆ ಮಾಡಿದ ಕಾಂಗ್ರೆಸ್ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಸಹಕಾರವನ್ನೂ ಸ್ಮರಿಸುತ್ತೇನೆ. ಸದನದ ಗೌರವ ಎತ್ತಿ ಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ಪ್ರತಾಪಚಂದ್ರ ಶೆಟ್ಟಿ ಸಭಾಪತಿ
ಸಭಾಪತಿ ಸ್ಥಾನಕ್ಕೆ ನನ್ನ ಹಾಗೂ ಎಸ್. ಆರ್.ಪಾಟೀಲ್ ಅವರ ಹೆಸರು ಕೇಳಿ ಬರುತ್ತಿತ್ತು. ನಾನು ರಾಜಕಾರಣದಲ್ಲಿ ಸನ್ಯಾಸಿಯಲ್ಲ. ಪ್ರತಾಪಚಂದ್ರಶೆಟ್ಟಿ ಅವರ ಹೆಸರು ಎಲ್ಲಿಂದ ಬಂತೋ ಗೊತ್ತಿಲ್ಲ. ಅರ್ಹರಿಗೆ ಸ್ಥಾನ ಸಿಕ್ಕಿದೆ. ಹೊಸ ಸದಸ್ಯರು ಹೆಚ್ಚು ಮಾತನಾಡಲು ಅವಕಾಶ ನೀಡಬೇಕು.
– ಬಸವರಾಜ ಹೊರಟ್ಟಿ ಮಾಜಿ ಹಂಗಾಮಿ ಸಭಾಪತಿ
ವಿಭಿನ್ನ ವೈಚಾರಿಕ ವಿಚಾರಧಾರೆಯಡಿ ಸಂಘರ್ಷ ಮಾಡುತ್ತಲೇ ನಾನು, ಪ್ರತಾಪ ಚಂದ್ರಶೆಟ್ಟಿ ಅವರು ಬೆಳೆದು ಬಂದಿದ್ದೇವೆ. ಸುಮಾರು 35- 40 ವರ್ಷಗಳ ಕಾಲ ಶಾಸಕರಾಗಿರುವ ಅವರು ಹೊಸ ಸದಸ್ಯರ ಆಯಸ್ಸಿಗಿಂತ ಹೆಚ್ಚು ಅನುಭವ ಹೊಂದಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು$ಚುಕ್ಕೆ ಇಲ್ಲ. ಅವರ ಹಿರಿತನಕ್ಕೆ ಸಿಕ್ಕ ಗೌರವ ಇದು ಎಂದು ಭಾವಿಸುತ್ತೇನೆ.
– ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ