ಡಕೋಟಾ ಬಸ್‌ಗೆ ಕಡಿವಾಣ ಯಾವಾಗ?


Team Udayavani, Dec 13, 2018, 3:28 PM IST

blore-g-1.jpg

ದೊಡ್ಡಬಳ್ಳಾಪುರ: ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿ ನಡೆದ ಖಾಸಗಿ ಬಸ್‌ ದುರಂತ ಜನರು ಪ್ರಯಾಣಿ ಸುವ ವಾಹನಗಳ ಕಾರ್ಯಕ್ಷಮತೆ ಹಾಗೂ ಸುರಕ್ಷತೆಯ ಬಗ್ಗೆ ಚಿಂತಿಸುವಂತೆ ಮಾಡಿದೆ.  ಡ್ಡಬಳ್ಳಾಪುರ ತಾಲೂಕಿನಲ್ಲಿ ಸಂಚಾರ ಮಾಡುತ್ತಿರುವ ಬಹಳಷ್ಟು ಖಾಸಗಿ ಬಸ್‌ಗಳು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸುವ ವಾಹನಗಳ ಸ್ಥಿತಿಗತಿಗಳ ಬಗ್ಗೆ ಸಹಜವಾಗಿಯೇ ಪ್ರಯಾಣಿಕರಲ್ಲಿ ಅನುಮಾನ ಕಾಡತೊಡಗಿದೆ.

ದೇವನಹಳ್ಳಿ ಸಾರಿಗೆ ಇಲಾಖೆಯ ಕಚೇರಿ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಬಸ್‌ಗಳಿವೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 40ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮೊದಲಾಗಿ ಸಾಮಾನ್ಯ ಮಾರ್ಗ ಗಳಷ್ಟೇ ಅಲ್ಲದೇ, ತಾಲೂಕಿನ ಸಾಸಲು, ದೊಡ್ಡಬೆಳವಂಗಲ, ಮಧುರೆ ಹೋಬಳಿಗಳ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುತ್ತಿವೆ.

ಸರ್ಕಾರಿ ಬಸ್‌ಗಳಿಗೆ ತೀವ್ರ ಪೈಪೋಟಿ ನೀಡುವ ಮಟ್ಟಿಗೆ ತಮ್ಮ ಜಾಲ ವಿಸ್ತರಿಸಿಕೊಳ್ಳದಿದ್ದರೂ, ಪ್ರಯಾಣಿಕರಿಗೆ ಸರಕು ಸಾಗಾಣಿಕೆ ಹಾಗೂ ಕಡಿಮೆ ಪ್ರಯಾಣ ದರದಿಂದಾಗಿ ತಮ್ಮದೇ ಆದ ಪ್ರಯಾಣಿಕರನ್ನು ಹೊಂದಿವೆ. ಇದರಲ್ಲಿ 15 ವರ್ಷಕ್ಕಿಂತ ಹಳೆಯ ಬಸ್‌ಗಳೂ ಇವೆ. ಕೆಲವು ಬಸ್‌ಗಳು ಹೊರತು ಪಡಿಸಿದರೆ, ಹೆಚ್ಚಿನವು ಬಾಹ್ಯ ಸೌಂದರ್ಯ, ಡಿವಿಡಿ ಸೌಲಭ್ಯಗಳಿಂದ ಜನರನ್ನು ಆಕರ್ಷಣೆ ಮಾಡುತ್ತಿವೆ.

ವಾಹನಗಳ ಅಂಕಿ ಅಂಶ: ದೇವನಹಳ್ಳಿ ಸಾರಿಗೆ ಇಲಾಖೆಯ ಕಚೇರಿ ವ್ಯಾಪ್ತಿಯ ಮಾಹಿತಿ ಯಂತೆ, ಅಕ್ಟೋಬರ್‌ 2018ರ ಅಂತ್ಯಕ್ಕೆ ಞ 3094 ಭಾರೀ ವಾಹನಗಳಿವೆ. ಸುಮಾರು 3 ಸಾವಿರ ಸಾರಿಗೆ ವಾಹನಗಳಿವೆ. ವಿವಿಧ ರೀತಿಯಲ್ಲಿ ಪರವಾನಗಿ ಪಡೆದ 95 ಬಸ್‌ಗಳಿವೆ. 283 ಶಾಲಾ ವಾಹನಗಳಿವೆ. ಇದಲ್ಲದೇ ಇತರೆ ಸುಮಾರು 15 ಬಸ್‌ಗಳು ಸಂಚರಿಸುತ್ತಿವೆ. 650 ಕ್ಯಾಬ್‌ಗಳು ಸೇರಿ ದಂತೆ ದ್ವಿಚಕ್ರ ವಾಹನಗಳು, ಕಾರು ಹಾಗೂ ಇತರೆ ಸೇರಿ 1,35,530 ವಾಹನಗಳು ನೋಂದಣಿಯಾಗಿವೆ.

ಪರ್ಮಿಟ್‌ ಇಲ್ಲ: ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕುಗಳಲ್ಲಿ ಸಂಚರಿಸುವ ಹಲವಾರು ಖಾಸಗಿ ಬಸ್‌ಗಳಿಗೆ ಮಾರ್ಗದ ಪರ್ಮಿಟ್‌ಗಳು ಇಲ್ಲ. ಪರ್ಮಿಟ್‌ ಅವಧಿ ಮುಗಿದಿದ್ದರೂ ಅವುಗಳನ್ನು ನವೀಕರಿಸದಿರುವ ನಿದರ್ಶನಗಳಿವೆ. ನಗರ ಪ್ರದೇಶದಲ್ಲಿ ಸಂಚರಿಸುವ ವಾಹನಗಳು ಸಾರಿಗೆ ಇಲಾಖೆ ಕಣ್ಣಿಗೆ ಬೀಳುತ್ತವೆ. ಆದರೆ, ಗ್ರಾಮಾಂತರ ಪ್ರದೇಶದ ಹಲವಾರು ವಾಹನಗಳು ಪರ್ಮಿಟ್‌ ಇಲ್ಲದೇ ಸಂಚರಿಸುವುದು ಸಾಮಾನ್ಯವಾಗಿದೆ. ಇದರೊಂದಿಗೆ ಬಸ್‌ ಟಾಪ್‌ ಪ್ರಯಾಣವೂ ಸಾಮಾನ್ಯವಾಗಿದೆ.

ಕೈಗಾರಿಕಾ ಪ್ರದೇಶದಲ್ಲಿ ಕೇಳ್ಳೋರೇ ಇಲ್ಲ: ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗೆ ನಿತ್ಯ ಪಾಳಿಗಳಿಗೆ ಅನುಗುಣವಾಗಿ ಕಾರ್ಮಿಕರನ್ನು ಕರೆತರಲು ನೂರಾರು ವಾಹನಗಳು ಸಂಚರಿ ಸುತ್ತಿವೆ. ಹಲವಾರು ಕಾರ್ಖಾನೆಗಳು ಖಾಸಗಿ ವಾಹನಗಳಿಗೆ ಗುತ್ತಿಗೆ ನೀಡಿವೆ. ಇದರಲ್ಲಿ ಬಸ್‌, ಮಿನಿ ಬಸ್‌ ಹಾಗೂ ಇತರೆ ವಾಹನಗಳು ಸೇರಿವೆ. ಆದರೆ, ಈ ವಾಹನಗಳಲ್ಲಿ ಬಹಳಷ್ಟು ವಾಹನಗಳು, ಬೇರೆಡೆ ಬಳಸಿದ ಗುಜರಿ ವಾಹನಗಳಾಗಿದ್ದು, ಸುಸ್ಥಿ ಯಲ್ಲಿಲ್ಲದೇ ಸಂಚರಿಸುತ್ತಿವೆ. ವಾಹನಗಳಿಗೆ ಎಫ್‌ಸಿ, ವಿಮೆ ಮೊದಲಾದ ದಾಖಲಾತಿ ಗಳಿಲ್ಲ. ಅನನುಭವಿ ಚಾಲಕರು ವಾಹನ ಚಲಾವನರ ಮಾಡಿ ಹಲವಾರು ಅಪಘಾತ ಗಳಾಗಿರುವ ನಿದರ್ಶನಗಳಿವೆ. ಅಪಘಾತ ಗಳಾಗಿ ಮಾಧ್ಯಮಗಳಲ್ಲಿ ವರದಿಯಾದರೆ, ಆಗ ಸಾರಿಗೆ ಇಲಾಖೆಯವರು ಅಡ್ಡಾಡಿ ಕ್ರಮ ಕೈಗೊಳ್ಳುವುದು ಬಿಟ್ಟರೆ ಮತ್ತೆ ಇತ್ತ ತಿರುಗಿಯೂ ನೋಡುವುದಿಲ್ಲ.

15 ವರ್ಷ ದಾಟಿದ ವಾಹನ: 15 ವರ್ಷ ದಾಟಿದ ವಾಹನಗಳನ್ನು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡು ಕ್ರಮ ಕೈಗೊಳ್ಳುವ ಅಧಿಕಾರ ಸಾರಿಗೆ ಇಲಾಖೆಗೆ ಇದೆ.

ಆದರೆ, ಸಾರಿಗೆ ಇಲಾಖೆ ಈ ಬಗ್ಗೆ ಕ್ರಮ ಕೈಕೊಳ್ಳುತ್ತಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಸಂಚರಿ ಸುವ ನೂರಾರು ವಾಹನಗಳಲ್ಲಿ ಸುರಕ್ಷತೆಯೇ ಇಲ್ಲ. ಕೆಲಸಕ್ಕೆ ಹೋದ ಕಾರ್ಮಿಕರು ಮತ್ತೆ ಅದೇ ವಾಹನದಲ್ಲಿ ಸುರಕ್ಷಿತವಾಗಿ ಮನೆ ತಲುಪುವ ಖಾತ್ರಿ ಇಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು
ಕೆಲವೊಮ್ಮೆ ಬರುವುದನ್ನು ಬಿಟ್ಟು ಕಟ್ಟುನಿಟ್ಟಾಗಿ ಎಲ್ಲಾ ರೀತಿಯ ವಾಹನಗಳ ಮೇಲೆ ಕ್ರಮ ಕೈಗೊಂಡರೆ ಪ್ರಯಾಣಿಕರು ಸುರಕ್ಷಿತವಾಗಿ ಸಂಚರಿಸುವ ಧೈರ್ಯ ಮೂಡುತ್ತದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ಕೊತ್ತೂರಪ್ಪ 15 ವರ್ಷ ದಾಟಿದ ವಾಹನಗಳನ್ನು ಏಕಾಏಕಿ ಮುಟ್ಟು ಗೋಲು ಹಾಕಿಕೊಳ್ಳಲು ಆಗುವುದಿಲ್ಲ. ವಾಹನಗಳ ಕಾರ್ಯಕ್ಷಮತೆ ಪರಿಶೀಲಿಸಿ, ವಾಹನಗಳು ಸುಸ್ಥಿತಿಯಲ್ಲಿ ಇಲ್ಲದಿದ್ದಾಗ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಇದೇ ರೀತಿ ಮುಂದು ವರಿದರೆ ವಾಹನ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೈಗಾರಿಕಾ ಪ್ರದೇಶಗಳಲ್ಲಿ ಸೇರಿದಂತೆ ನಮ್ಮ ಸಾರಿಗೆ ಇಲಾಖೆ ಕಚೇರಿ ವ್ಯಾಪ್ತಿಯಲ್ಲಿ ವಿಮೆ, ಪರವಾನಗಿ, ವಾಹನ ಚಾಲನೆ ಪರವಾನಗಿ ಇಲ್ಲದ ವಾಹನಗಳ ನ್ನು ಪರಿಶೀಲಿಸಿ ದಂಡ ವಿಧಿಸಲಾಗುತ್ತಿದೆ. 
 ಮಂಜುನಾಥ್‌, ಸಹಾಯಕ ಸಾರಿಗೆ ಅಧಿಕಾರಿ, ದೊಡ್ಡಬಳ್ಳಾಪುರ

 ಡಿ.ಶ್ರೀಕಾಂತ್‌

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.