ಸಿದ್ದರಾಮಯ್ಯ ಹಿಂಬಾಲಕರಿಗೆ ಸಚಿವ ಸ್ಥಾನ: ಶಾಮನೂರು
Team Udayavani, Dec 25, 2018, 9:37 AM IST
ದಾವಣಗೆರೆ: ಸಿದ್ದರಾಮಯ್ಯನವರ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಲಾಗಿದೆ. ನಾನು ಇರುವ ಸತ್ಯವನ್ನೇ
ಹೇಳಿದ್ದೇನೆ. ಅದನ್ನು ಎಷ್ಟು ಸಲ ಬೇಕಾದರೂ ಹೇಳುತ್ತೇನೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಜಾರೇನೂ ಇಲ್ಲ. ಮಿನಿಸ್ಟ್ರೆ ಸ್ಥಾನದ ಅಪ್ಪನಗಿಂತಲೂ ಚೆನ್ನಾಗಿ ಕೆಲಸ ಮಾಡಿಸುತ್ತಿದ್ದೇನೆ ಎಂದರು. ಹಿರಿಯ ಸಚಿವರಾದ ದೇಶಪಾಂಡೆ ಮುಂತಾದವರನ್ನು ಮುಂದುವರಿಸಲಾಗಿದೆ ಯೆಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಹಿಂದಿದ್ದವರನ್ನೇ ಮುಂದುವರಿಸಿದ್ದಾರೆ. 2 ವರ್ಷ ನಂತರ ಬದಲಾವಣೆ ಮಾಡುತ್ತೇವೆ ಅಂದಿದ್ದರು. ಈಗಿನ್ನೂ 6-7 ತಿಂಗಳಾಗಿದೆ. ಮುಂದೆ ನೋಡೋಣ ಎಂದರು.
ಎಲ್ಲಿಯೋ ಒಂದು ಕಡೆ ವೀರಶೈವರನ್ನು ಕಡೆಗಣಿಸಲಾಗುತ್ತಿದೆಯೇ…ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೀರಶೈವರನ್ನು ಕಡೆಗಣಿಸಿದ್ದಕ್ಕೆ ಅನುಭವಿಸಿದರಲ್ಲ. 60 ಸಾವಿರ ವೋಟ್ನಲ್ಲಿ ಸೋತರಲ್ಲ. ಡಿಪಾಸಿಟ್
ಕಳೆದುಕೊಂಡು ಬಂದರಲ್ಲ ಅವರಿಗೆ ಗೊತ್ತಾಗಬೇಕು ಎಂದರು.
ವೀರಶೈವರನ್ನು ಕಡೆಗಣಿಸಿದರಿಂದ ಲೋಕಸಭಾ ಚುನಾವಣೆಗೆ ಏನಾದರೂ ಎಫೆಕ್ಟ್ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು (ಹೈಕಮಾಂಡ್) ಯೋಚನೆ ಮಾಡಬೇಕು. ಅದನ್ನ ನಾವಲ್ಲ ಯೋಚನೆ ಮಾಡೋದು ಎಂದು
ಹೇಳಿದರು.
ರಾಹುಲ್ಗೆ ದೂರು ನೀಡುವಿರಾ?: ನಾವು ಅಲ್ಲಿ ತನಕ ಯೋಚನೆ ಮಾಡಿಲ್ಲ. ಇಲ್ಲಿಯೇ ಯೋಚನೆ ಮಾಡುತ್ತೇವೆ. ಅವರೇ(ರಾಹುಲ್ ಗಾಂಧಿ) ನಮ್ಮ ಹತ್ತಿರ ಬರಬೇಕು. ನಾವ್ಯಾಕೆ ಹೋಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ