ಮಾರುವೇಷದಲ್ಲಿ ಕೆಜಿಎಫ್ ಕಣ್ತುಂಬಿಕೊಂಡ ಜಗ್ಗೇಶ್
Team Udayavani, Dec 27, 2018, 3:36 PM IST
ಚಿತ್ರತಾರೆಯರು ಚಿತ್ರಮಂದಿರಗಳಿಗೆ ಜನರ ಜೊತೆ ಕೂತು ಚಿತ್ರ ನೋಡಲು ಬರುತ್ತಾರೆ ಎಂದರೆ ಅಲ್ಲಿ ಜನ ಜಂಗುಳಿ ಬಗ್ಗೆ ಹೇಳಬೇಕೆ? ಇನ್ನು ತಮ್ಮ ನೆಚ್ಚಿನ ನಟ ಕಣ್ಣಳತೆ ದೂರದಲ್ಲಿದ್ದಾರೆ ಎಂದರೆ, ಅಭಿಮಾನಿಗಳು, ಪರಿಚಿತರು ಬಂದು ಮಾತನಾಡಿಸುವುದು, ಜೊತೆಗೊಂದು ಸೆಲ್ಫಿ
ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದು ಸರ್ವೇ ಸಾಮಾನ್ಯ. ಇವೆಲ್ಲ ಅಭಿಮಾನ ಪ್ರದರ್ಶಿಸುವ ರೀತಿಯಾದರೂ, ಇದರಿಂದ ನಿಜವಾಗಿಯೂ ಕಿರಿಕಿರಿ ಅನುಭವಿಸುವುದು ಸ್ವಾರ್ ಎನಿಸಿಕೊಂಡವರು.
ಈಗ ಯಾಕೆ ಈ ವಿಷಯ ಅಂತೀರಾ? ಅದಕ್ಕೊಂದು ಕಾರಣವಿದೆ. ಇತ್ತೀಚೆಗೆ ತೆರೆಕಂಡ “ಕೆಜಿಎಫ್’ ಚಿತ್ರವನ್ನು ಪ್ರೇಕ್ಷಕರ ಜೊತೆ ಕೂತು ಕಣ್ತುಂಬಿಕೊಳ್ಳಬೇಕೆಂಬ ಆಸೆಯಿಂದ ನಟ ಜಗ್ಗೇಶ್ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ವೀಕ್ಷಿಸಿಕೊಂಡು ಬಂದಿದ್ದಾರೆ. ತಮ್ಮನ್ನು ಯಾರಾದರೂ ಗುರುತು ಹಿಡಿದರೆ, ಜನ ಜಂಗುಳಿ ಆಗಬಹುದು. ಚಿತ್ರ ನೋಡಲು ಬಂದ ಸಹಪ್ರೇಕ್ಷಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಜಗ್ಗೇಶ್ ಈ ಹೊಸತಂತ್ರದ ಮೊರೆ ಹೋಗಿದ್ದರು.
“ಕೆಜಿಎಫ್’ ಚಿತ್ರವನ್ನು ಪ್ರೇಕ್ಷಕರ ಜೊತೆ ಕೂತು ನೋಡಿದ ಅನುಭವವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಲುಂಗಿ ಉಟ್ಟು, ಕಾಲಿಗೆ ಹವಾಯ್ ಚಪ್ಪಲಿ ಹಾಗೂ ತಲೆಗೆ ಮಂಕಿ ಟೋಪಿ ಧರಿಸಿ, ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ಗೆ ಹೋಗಿ ಕೆಜಿಎಫ್ ನೋಡಿದೆ. 38ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು! ಹಾಗೆ ಹೋದದ್ದು ಸಾಮಾನ್ಯ ಜೀವನ ಎಂಜಾಯ್ ಮಾಡಲು. ಖಾರಾಪುರಿ, ಟೀ ಇಂಟರ್ವಲ್ನಲ್ಲಿ ಮಜಾ ನೀಡಿತು. ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ. ಕಾರಣ ಏಕಾಂತ
ಎಂಜಾಯ್ಮೆಂಟ್ ಎಂದು ತಮ್ಮ ಅನುಭವ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’