ಆಗಸದಲ್ಲಿ ಅನ್ಯಗ್ರಹ ವಸ್ತು ಪತ್ತೆ ? ಪ್ರಧಾನಿ ಕಾರ್ಯಾಲಯಕ್ಕೆ ಇಮೇಲ್‌


Team Udayavani, Dec 28, 2018, 11:22 AM IST

alien-object-700.jpg

ಪುಣೆ : ತನ್ನ ಮನೆಯ ಕಿಟಕಿಯ ಹೊರಗೆ ಆಗಸದಲ್ಲಿ ತಾನು ಅನ್ಯಗ್ರಹದ ನಿಗೂಢ ಸಾಧನವೊಂದನ್ನು ಕಂಡೆ ಎಂದು ಪುಣೆಯ 47ರ ಹರೆಯದ ವ್ಯಕ್ತಿಯೋರ್ವ ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್‌ ಮಾಡಿದುದನ್ನು ಅನುಸರಿಸಿ ತತ್‌ಕ್ಷಣವೇ ಪುಣೆ ಪೊಲೀಸರು ಕ್ರಿಯಾಶೀಲರಾಗಿ ಅಂತಿಮವಾಗಿ ಬೇಸ್ತುಬಿದ್ದ  ವಿದ್ಯಮಾನವೊಂದು ವರದಿಯಾಗಿದೆ. 

ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್‌ ಮಾಡಿದ 47ರ ಹರೆಯದ ವ್ಯಕ್ತಿಯು ಕೊಥ್ರೂಡ್‌ ಪ್ರದೇಶದ ನಿವಾಸಿ ಎಂದು ಪತ್ತೆ ಹಚ್ಚಿದ ಪೊಲೀಸರಿಗೆ ಆತ ಮನೋರೋಗದಿಂದ ಬಳಲುತ್ತಿರುವುದಾಗಿ ಗೊತ್ತಾಯಿತು. ಆತನು ತನ್ನ ಮನೆಯ ಕಿಟಕಿಯ ಆಗಸದಲ್ಲಿ ಅನ್ಯಗ್ರಹ ವಸ್ತುವನ್ನು ಕಂಡದ್ದು ಕೇವಲ ಭ್ರಾಂತಿ ಎಂಬುದನ್ನು ಪೊಲೀಸರು ಅನಂತರ ಅರಿತುಕೊಂಡರು. 

ಪ್ರಧಾನಿ ಕಾರ್ಯಾಲಯದವರು ಅನ್ಯಗ್ರಹ ವಸ್ತು ಕಾಣಲಾಯಿತೆಂಬ ಬಗೆಗಿನ ಇ-ಮೇಲ್‌ ಪತ್ರವನ್ನು ಕೂಡಲೇ ಮಹಾರಾಷ್ಟ್ರ ಸರಕಾರಕ್ಕೆ ಕಳುಹಿಸಿದ್ದರು. ಪರಿಣಾಮವಾಗಿ ಸರಕಾರದಿಂದ ಪೊಲೀಸರಿಗೆ ಕೂಡಲೇ ಸಂದೇಶ ಹೋಗಿತ್ತು. ಅಂತೆಯೇ  ಸಿಂಘದ್‌ ರೋಡ್‌ ಠಾಣೆಯ ಪೊಲೀಸರು ಕರ್ತವ್ಯಕ್ಕೆ ಮುನ್ನುಗ್ಗಿದ್ದರು. 

ಅನ್ಯಗ್ರಹ ವಸ್ತುವನ್ನು ಆಗಸದಲ್ಲಿ ಕಂಡೆನೆಂದು ಹೇಳಿಕೊಂಡಿದ್ದ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆ ಮೆದುಳಾಘಾತವಾಗಿತ್ತು. ಪರಿಣಾಮವಾಗಿ ಮಾನಸಿಕ ಸಂತುಲನೆಯನ್ನು ಕಳೆದುಕೊಂಡಿದ್ದ. ಕೆಲ ತಿಂಗಳ ಹಿಂದೆ ತನ್ನ ಮನೆಯ ಹೊರಗಿನ ಮರಗಳೆಡೆಯಿಂದ ಬೆಳಕು ಹರಿದು ಬರುತ್ತಿದ್ದುದನ್ನು ಕಂಡ ಈ ವ್ಯಕ್ತಿ ಅದನ್ನೇ ಅನ್ಯಗ್ರಹ ವಸ್ತುವೆಂದು ಭ್ರಮಿಸಿದ್ದ. ಈ ಅನ್ಯ ಗ್ರಹ ವಸ್ತುವು ಭೂಗ್ರಹದ ಬಹುಮುಖ್ಯ ಮಾಹಿತಿಗಳನ್ನು ತನ್ನ ಗ್ರಹಕ್ಕೆ ರವಾನಿಸುತ್ತಿದೆ ಎಂಬ ಭೀತಿ ಆತನನ್ನು ಕಾಡತೊಡಗಿತ್ತು. 

ಈ ಭೀತಿಯಲ್ಲಿ ಆತ ಪ್ರಧಾನಿ ಕಾರ್ಯಾಲಯಕ್ಕೆ ಇಮೇಲ್‌ ಕಳಿಸಿದ್ದ ಸಂಗತಿ ಆತನ ಮನೆಯವರಿಗೂ ಗೊತ್ತಿರಲಿಲ್ಲ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.