ಹೊಸ ವರ್ಷದಲ್ಲಿ  ಮೆಸ್ಕಾಂ ಶಾಕ್‌?


Team Udayavani, Jan 4, 2019, 4:31 AM IST

mescm.jpg

ಮಂಗಳೂರು: ಹೊಸ ವರ್ಷದ ಸಡಗರದ ನಡುವೆ ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂ ದರ ಏರಿಕೆಯ ಶಾಕ್‌ ನೀಡಲು ಮುಂದಾಗಿದೆ. ವಿವಿಧ ಸ್ತರಗಳಲ್ಲಿ ಹಾಲಿ ಯೂನಿಟ್‌ ದರದ ಮೇಲೆ ಸರಾಸರಿ 1.38 ರೂ. ಏರಿಕೆ ಮಾಡಲು ಕರ್ನಾಟಕ ವಿದ್ಯು ತ್ಛಕ್ತಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮೆಸ್ಕಾಂ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಬಳಕೆದಾರರಿಗೆ 30 ದಿನಗಳ ಕಾಲಾವಕಾಶ ಇದೆ. ಬಳಿಕ ವಿದುತ್ಛಕ್ತಿ ಆಯೋಗದ ಮುಂದೆ ವಿಚಾರಣೆ ನಡೆದು ದರ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ವಾಗಲಿದೆ. ಪ್ರತಿವರ್ಷವೂ ಮೆಸ್ಕಾಂ ಸಹಿತ ರಾಜ್ಯದ ಐದು ಎಸ್ಕಾಂಗಳು ತಮ್ಮ ಖರ್ಚುವೆಚ್ಚಗಳನ್ನು ಗಮನದಲ್ಲಿಟ್ಟು ದರ ಪರಿಷ್ಕರಣೆ ಮಾಡುವುದು ವಾಡಿಕೆ. ಕಳೆದ ವರ್ಷ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ ಮೇಲೆ ಸರಾಸರಿ 1.23 ರೂ. ಹೆಚ್ಚಳವಾಗಿತ್ತು.

ಮೆಸ್ಕಾಂಗೆ ಆದಾಯ ಕೊರತೆ
ಮೆಸ್ಕಾಂ ಮುಂದಿನ ಮೂರು ವರ್ಷಗಳ ವರೆಗಿನ ಆದಾಯ ಅಗತ್ಯ ಲೆಕ್ಕಹಾಕಿ ಎದುರಾಗುವ ಕೊರತೆಯ ಪಟ್ಟಿಯನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ. ಅದರಂತೆ 2019- 20ರಲ್ಲಿ 4,153.51 ಕೋ.ರೂ. ವಾರ್ಷಿಕ ಆದಾಯ ಅಗತ್ಯ ಇದ್ದು, ಪ್ರಸ್ತುತ ಜಾರಿಯಲ್ಲಿರುವ ದರಗಳ ಪ್ರಕಾರ 3447.12 ಕೋ.ರೂ. ವಾರ್ಷಿಕ ಆದಾಯ ನಿರೀಕ್ಷಿಸಿದರೆ, 706.39 ಕೋ.ರೂ. ಕೊರತೆಯಾಗಲಿದೆ. 

2020-21ರಲ್ಲಿ 3753.02 ಕೋ. ರೂ. ಅಗತ್ಯ ಆದಾಯದ ಪೈಕಿ ಈಗಿನ ದರದ ಪ್ರಕಾರ 3,541.43 ಕೋ.ರೂ. ನಿರೀಕ್ಷಿಸಿದರೆ, 211 ಕೋ.ರೂ. ಕೊರತೆ ಎದುರಾಗಲಿದೆ. 2021-22ರಲ್ಲಿ 3973.74 ಕೋ.ರೂ. ವಾರ್ಷಿಕ ಅಗತ್ಯದಲ್ಲಿ 3639.49 ಕೋ.ರೂ. ನಿರೀಕ್ಷಿಸಿದರೆ 334.25 ಕೋ.ರೂ. ಆದಾಯ ಕೊರತೆ ಎದುರಾಗಲಿದೆ ಎಂಬುದು ಮೆಸ್ಕಾಂ ವಾದ.


ದರ ಏರಿಕೆಗೆ ಮೆಸ್ಕಾಂ ಕಾರಣಗಳು

2018ರ ಎ.1ರಿಂದ ಜಾರಿಯಲ್ಲಿರುವ ವಿದ್ಯುತ್‌ ದರದಿಂದ ಮೆಸ್ಕಾಂ ತನ್ನ ಆದಾಯ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಖರೀದಿಸಿದ ವಿದ್ಯುತ್‌ಗೆ ಸಂಬಂಧಿಸಿದ ವೆಚ್ಚಗಳನ್ನು ಪಾವತಿಸದ ಹೊರತು ಏರುತ್ತಿರುವ ಬೇಡಿಕೆ ಪೂರೈಸಲು ಅಸಾಧ್ಯ. 2019-20ನೇ ಸಾಲಿಗೆ ವಿದ್ಯುತ್‌ ಖರೀದಿ ದರವನ್ನು ಪ್ರತಿ ಯುನಿಟಿಗೆ 4.09 ರೂ. (ಕಳೆದ ವರ್ಷ ಈ ದರ 3.37 ರೂ.) ಎಂದು ಅಂದಾಜಿಸಲಾಗಿರುವುದರಿಂದ ಖರೀದಿ ದರ ಈ ಬಾರಿ ಏರಲಿದೆ. ವಿತರಣ ಜಾಲ ಬಲಪಡಿಸಲು ಹಾಗೂ ಅನಿಶ್ಚಿತ ಸಂಭವಗಳನ್ನು ನಿರ್ವಹಿಸುವುದಕ್ಕೆ ಹೆಚ್ಚಿನ ಆದಾಯದ ನಿರೀಕ್ಷೆಯಿದೆ. ವಿಶೇಷವಾಗಿ ಅಗತ್ಯ ಆದಾಯ ಹಾಗೂ ನಿರೀಕ್ಷಿತ ಆದಾಯದ ಮಧ್ಯೆ ಇರುವ ಕೊರತೆ ನೀಗಿಸಲು ದರ ಪರಿಷ್ಕರಣೆ ಅನಿವಾರ್ಯ ಎಂಬುದು ಮೆಸ್ಕಾಂ ವಾದ. 

ಮುಂದಿನ ತಿಂಗಳು ಸಭೆ
ಪ್ರತೀ ಯುನಿಟ್‌ಗೆ ಸರಾಸರಿ 1.38 ರೂ. ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ತಿಂಗಳು ಆಯೋಗವು ಮಂಗಳೂರಿನಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ನಡೆಸಲಿದೆ. ಬಳಿಕ ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರವಾಗಲಿದೆ.
 ಸ್ನೇಹಲ್‌ ಆರ್‌. ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ದಿನೇಶ್‌ ಇರಾ

ಟಾಪ್ ನ್ಯೂಸ್

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.