ಆರ್ಥಿಕ ಅಪರಾಧ: ಐದು ವರ್ಷಗಳಲ್ಲಿ 27 ಉದ್ಯಮಿಗಳು ದೇಶದಿಂದ ಪಲಾಯನ
Team Udayavani, Jan 4, 2019, 1:10 PM IST
ಹೊಸದಿಲ್ಲಿ : ಕಳೆದ ಐದು ವರ್ಷಗಳಲ್ಲಿ ದೇಶದಿಂದ 27 ಮಂದಿ ಸುಸ್ತಿ ಸಾಲ ಮತ್ತು ಆರ್ಥಿಕ ಅಪರಾಧ ಎಸಗಿದ ಉದ್ಯಮಿಗಳು ಪಲಾಯನ ಮಾಡಿದ್ದಾರೆ.
ಈ ವಿಷಯವನ್ನು ಇಂದು ಶುಕ್ರವಾರ ಲೋಕಸಭೆಗೆ ತಿಳಿಸಿದ ಕೇಂದ್ರ ಸಹಾಯಕ ಹಣಕಾಸು ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ವಿದೇಶಕ್ಕೆ ಪಲಾಯನ ಮಾಡಿರುವ ಈ 27 ಉದ್ಯಮಿಗಳ ಪೈಕಿ 20 ಮಂದಿಯ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡುವಂತೆ ಸರಕಾರ ಇಂಟರ್ ಪೋಲ್ ಸಂಪರ್ಕಿಸಿದೆ ಎಂದು ಹೇಳಿದರು.
ವಿದೇಶಕ್ಕೆ ಪಲಾಯನ ಮಾಡಿರುವ 27 ಮಂದಿ ಆರ್ಥಿಕ ಅಪರಾಧಿ ಉದ್ಯಮಿಗಳ ಪೈಕಿ ಏಳು ಮಂದಿಯ ವಿರುದ್ಧ 2018ರ ತಲೆಮರೆಸಿಕೊಂಡ ಅಪರಾಧಿಗಳ ಕಾಯಿದೆಯಡಿ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ ಎಂದು ಸಚಿವರು ಹೇಳಿದರು.