ಎಳ್ಳಮಾವಾಸ್ಯೆಗೆ ಖರೀದಿ ಭರಾಟೆ ಜೋರು..
Team Udayavani, Jan 5, 2019, 9:01 AM IST
ಭಾಲ್ಕಿ: ಕಲ್ಯಾಣ ಕರ್ನಾಟಕದ ರೈತರ ಲಕ್ಷ್ಮೀ ಹಬ್ಬವೆಂದೇ ಹೆಸರಾದ ಎಳ್ಳಮಾವಾಸ್ಯೆ ಹಬ್ಬಕ್ಕೆ ತಾಲೂಕಿನಾದ್ಯಂತ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
ಎಳ್ಳಮಾವಾಸ್ಯೆ ಹಬ್ಬದಾಚರಣೆಗೆ ರೈತರು ಹೊಲದಲ್ಲಿ ಕೊಂಪೆ ಮಾಡಿ ಲಕ್ಷ್ಮೀ ಮತ್ತು ಪಾಂಡವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಹಬ್ಬದೂಟ ಸವಿಯುವ ಪರಿಪಾಠವುಂಟು. ಎರಡು ದಿನ ಮುಂಚಿತವಾಗಿ ಹಬ್ಬದ ಸಿದ್ಧತೆ ನಡೆಯುತ್ತದೆ. ತರಕಾರಿ ಸೋಸುವ (ಕಾಯಿಪಲ್ಯ) ದಿನದಂದು ಎಲ್ಲ ತರಕಾರಿ ಸ್ವತ್ಛಗೊಳಿಸಿ ಸಿದ್ಧ ಮಾಡಲಾಗುತ್ತದೆ.
ಗೆಳೆಯರು, ಸಂಬಂಧಿಕರಿಗೆ ಆಮಂತ್ರಣ: ಹೊಲದಲ್ಲಿ ಬೆಳೆ, ತರಕಾರಿ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವರೆಕಾಯಿ, ಗಜ್ಜರಿ, ಹಸಿ ಮೆಣಸಿನಕಾಯಿ, ಮೆಂತೆ ಪಲ್ಯ, ಟೊಮ್ಯಾಟೊ, ಪಾಲಕ್, ಈರುಳ್ಳಿ ತಪ್ಪಲು, ಹಸಿ ಹುಣಸೆಕಾಯಿ ಸೇರಿದಂತೆ ವಿವಿಧ ಬಗೆಯ ಕಾಯಿ, ತರಕಾರಿ, ಕಾಳುಗಳನ್ನು ಸಂಗ್ರಹಿಸಿ ಎಲ್ಲವೂ ಸೇರಿಸಿ ಭಜ್ಜಿ- ಪಲೆ ಮಾಡಿ, ಸ್ನೇಹಿತರು ಹಾಗೂ ಸಂಬಂಧಿಕರನ್ನು ಊಟಕ್ಕೆ ಆಮಂತ್ರಿಸಿ ಎಲ್ಲರೊಂದಿಗೆ ಬೆರೆಯುವುದು ಹಬ್ಬದ ವಿಶೇಷ.
ಚರಗ ಚೆಲ್ಲಿ ಪ್ರಾರ್ಥನೆ: ಪಾಂಡವರು, ಲಕ್ಷ್ಮೀಗೆ ನೈವೇದ್ಯ ಅರ್ಪಿಸಿ, ಹಿಂಗಾರು ಬೆಳೆಗಳಿಗೆ ಯಾವುದೇ ರೋಗಬಾಧೆ ಬಾರದಿರಲಿ ಹಾಗೂ ಉತ್ತಮ ಫಸಲು ಬರಲೆಂದು ರೈತರು “ವಲಗೈ ವಲಗೈ ಚಾಲೋನ ಪಲಗೈ’ (ಯಾವ ತಾಯಿ ಕೊಟ್ಟಳು.. ಭೂಮಿ ತಾಯಿ ಕೊಟ್ಟಳು..) ಎನ್ನುವ ಘೋಷದೊಂದಿಗೆ ಹೊಲದ ತುಂಬ ಚರಗ ಚೆಲ್ಲಿ ಉತ್ತಮ ಫಸಲಿಗಾಗಿ ಭೂತಾಯಿಯನ್ನು ಪ್ರಾರ್ಥಿಸುತ್ತಾರೆ.
ಹೆಚ್ಚಾದ ಬೆಲೆ: ಪ್ರಸಕ್ತ ವರ್ಷ ಮುಂಗಾರು-ಹಿಂಗಾರು ಮಳೆ ಅಭಾವದಿಂದಾಗಿ ಈ ಬಾರಿ ತಾಲೂಕನ್ನು ಬರ ಪ್ರದೇಶ ಎಂದು ಘೋಷಿಸಲಾಗಿದೆ. ಮುಂಗಾರು-ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಸಲು ಕಾಣದಿರುವುದರಿಂದ ತರಕಾರಿ, ಕಾಯಿಪಲ್ಯೆಗಳ ಬೆಲೆ ಗಗನಕ್ಕೇರಿದೆ. ಗಜ್ಜರಿ ಕೆ.ಜಿ- 40 ರೂ., ಮೆಂತೆಸೊಪ್ಪು -30 ರೂ. ಅವರೆಕಾಯಿ ಬೀಜ-80 ರೂ., ಹಸಿ ಮೆಣಸಿನಕಾಯಿ-40 ರೂ., ಹಸಿ ಹುಣಸೆಕಾಯಿ-40 ರೂ. ಮಾರಾಟವಾಗುತ್ತಿದ್ದರೂ ಹಬ್ಬದ ಉತ್ಸುಕತೆ, ಸಂಭ್ರಮಕ್ಕೆ ಕೊರತೆಯಾಗಿಲ್ಲ. ಒಟ್ಟಿನಲ್ಲಿ ತರಕಾರಿ ಬೆಲೆ ಎಷ್ಟೇ ಗಗನಕ್ಕೇರುತ್ತಿದ್ದರೂ ರೈತರು ಮಾತ್ರ ಎಲ್ಲ ರೀತಿಯ ತರಕಾರಿ ಖರೀದಿಸಿ ಹಬ್ಬದಾಚರಣೆಗೆ ಸಿದ್ಧರಾಗಿದ್ದಾರೆ.
ಜಯರಾಜ ದಾಬಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ
Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ
ʼಸಲಾರ್ʼನ ʼಶಿವ್ ಮನ್ನಾರ್ʼಗೂ ʼಕೆಜಿಎಫ್ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್