ನಾಯಿಗೆ ಕಲ್ಲಿಂದ ಹೊಡೆದ ಯುವಕನನ್ನು ಗುಂಡಿಟ್ಟು ಕೊಂದ ಮಾಲೀಕ!
Team Udayavani, Jan 7, 2019, 4:52 AM IST
ನವದೆಹಲಿ:ತನ್ನ ಪ್ರೀತಿಯ ನಾಯಿಗೆ ಕಲ್ಲಿನಿಂದ ಹೊಡೆದ ಎಂಬ ಆಕ್ರೋಶಕ್ಕೆ 30 ವರ್ಷದ ಯುವಕನನ್ನು ಗುಂಡು ಹೊಡೆದು ಸಾಯಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಪೊಲೀಸ್ ಅಧಿಕಾರಿ ಅತುಲ್ ಠಾಕೂರ್ ಹೇಳಿಕೆ ಪ್ರಕಾರ,ಅಶ್ಪಾಕ್(30ವರ್ಷ) ಎಂಬ ಯುವಕ ದೆಹಲಿಯ ಈಶಾನ್ಯ ಪ್ರದೇಶದ ವೆಲ್ ಕಂ ಕಾಲೋನಿಯ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ನಾಯಿ ಬೊಗಳಲು ಆರಂಭಿಸಿತ್ತು. ಅಷ್ಟೇ ಅಲ್ಲ ಅಶ್ಫಾಕ್ ನಿಗೆ ಕಚ್ಚಲು ಯತ್ನಿಸಿತ್ತು, ಈ ವೇಳೆ ಆತ ಕಲ್ಲಿನಿಂದ ಹೊಡೆದು ನಾಯಿಯನ್ನು ಓಡಿಸಿದ್ದ.
ತನ್ನ ಪ್ರೀತಿಯ ನಾಯಿಗೆ ಕಲ್ಲಿನಿಂದ ಹೊಡೆದಿರುವುದನ್ನು ಗಮನಿಸಿದ ಮಾಲೀಕ ಮೆಹತಾಬ್, ಮನೆಯೊಳಗೆ ಹೋಗಿ ಪಿಸ್ತೂಲ್ ಅನ್ನು ತೆಗೆದುಕೊಂಡು ಬಂದು, ಅಶ್ಫಾಕ್ ಬಳಿ ನಾಯಿಗೆ ಕಲ್ಲು ಹೊಡೆದಿದ್ದೇಕೆ ಎಂದು ಕ್ಯಾತೆ ತೆಗೆದು ಜಗಳಕ್ಕಿಳಿದುಬಿಟ್ಟಿದ್ದ. ಈ ವೇಳೆ ಆತನಿಗೆ ಗುಂಡು ಹೊಡೆದು ಬಿಟ್ಟಿದ್ದ ಎಂದು ಠಾಕೂರ್ ವಿವರಿಸಿದ್ದಾರೆ.
ಕೂಡಲೇ ಕುಸಿದುಬಿದ್ದ ಅಶ್ಫಾಕ್ ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಅಶ್ಫಾಕ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು