ರಾಮದಾಸ ಉಪಾಧ್ಯಾಯರಿಗೆ ಗೌರವ ಡಾಕ್ಟರೇಟ್
Team Udayavani, Jan 9, 2019, 11:42 AM IST
ಮುಂಬಯಿ: ಫ್ಲೋರಿಡಾದ ಇಂಡಿಯನ್ ಫೂರಂ ಆಫ್ ಯೋಗ ಸಂಸ್ಕೃತಂ ಯೂನಿವರ್ಸಿಟಿಯಿಂದ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.
ಬೆಂಗಳೂರು ಸುಬ್ರಹ್ಮಣ್ಯಪುರದ ಬನಶಂಕರಿಯ ಶ್ರೀ ಶಿವರಾತ್ರೀಶ್ವರ ಕೇಂದ್ರದ ಎಎಸ್ಎಸ್ ಕಾಲೇಜ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಹತ್ತನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಇಂಡಿಯನ್ ಫೂರಂ ಆಫ್ ಯೋಗ ಸಂಸ್ಕೃತಂ ಯೂನಿವರ್ಸಿಟಿ ಕುಲಪತಿ ಡಾ| ಬಿ.ವಿ. ಕೆ. ಶಾಸ್ತ್ರಿ ಮತ್ತು ಡಾ| ಎಸ್. ಕೃಷ್ಯಪ್ಪ, ಡಾ| ಸಿ.ಎನ್. ಮಂಜುನಾಥ್, ಪತ್ರಕರ್ತ ಹಮೀದ್ ಪಾಳ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದು ವೇದಾಂಗ, ಜ್ಯೋತಿಷ ಅಧ್ಯಯನಕ್ಕಾಗಿ ರಾಮದಾಸ ಉಪಾಧ್ಯಾಯರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ರೆಂಜಾಳ ಗುರುರಾಜ ಉಪಾಧ್ಯಾಯ ಮತ್ತು ವಸಂತಿ ಗುರುರಾಜ್ ದಂಪತಿ ಪುತ್ರರಾದ ರಾಮದಾಸ್ ಉಪಾಧ್ಯಾಯ ಅವರು ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿಯಾಗಿ ಸೇವಾ ನಿರತರಾಗಿದ್ದಾರೆ. ಯೋಗ ಸಂಸ್ಕೃತಂ ವಿಶ್ವವಿದ್ಯಾಲಯ ಫ್ಲೋರಿಡಾ ಜಾಗತಿಕವಾಗಿ ಭಗದ್ಗೀತಾ ಪ್ರೇರಣೆ, ಧರ್ಮ ಪರಂಪರೆ, ಆಧ್ಯಾತ್ಮಿಕ, ಯೋಗ, ಭಾಷೆ, ಉನ್ನತ ಶಿಕ್ಷಣ, ಭಾರತೀಯ ಪರಂಪರೆ, ಸತ್ಸಂಗ ಜ್ಯೋತಿಷ ಸಂಶೋಧನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ