ಗಿಜಿಗುಡಬೇಕಿದ್ದ  ಮಲೆಯಲ್ಲಿ  ಭಕ್ತರೇ ಇಲ್ಲ


Team Udayavani, Jan 11, 2019, 3:59 AM IST

aluda-betta.jpg

ಶಬರಿಮಲೆ: ಮಕರ ಸಂಕ್ರಮಣ ಹತ್ತಿರ ಬರುತ್ತಿದ್ದಂತೆ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಆಗುತ್ತಿದ್ದ ಶಬರಿ ಮಲೆಯಲ್ಲಿ ಈ ವರ್ಷ ಭಕ್ತರ ಸಂಖ್ಯೆ ವಿಪರೀತ ಕುಸಿತ ಕಂಡಿದೆ. ವಾವರ ಮಸೀದಿ ಸುತ್ತಮುತ್ತ ನಡೆಯುತ್ತಿದ್ದ ಬೇಟೆ ತುಲ್ಲಾವನ್ನೇ ಗಮನಿಸುವುದಾದರೆ, ಈ ಹಿಂದಿನ ವರ್ಷಗಳಲ್ಲಿ ವಿಪರೀತ ದಟ್ಟಣೆ ಕಂಡುಬರುತ್ತಿತ್ತು. ಆದರೆ ಈ ಬಾರಿ ಬೆರಳೆಣಿಕೆಯ ಭಕ್ತರಿದ್ದಾರೆ.

“ಈ ಬಾರಿ ತುಂಬಾ ಆರಾಮವಾಗಿ ಬೇಟೆ ತುಲ್ಲಾ ನಡೆಸಿದ್ದೇವೆ’ ಎಂದು ಹಲವು ಭಕ್ತರು ತಿಳಿಸಿದ್ದಾರೆ. ಮುಂದೆ “ಮಲೆ ಚೌಟು’ವ (ಅಯ್ಯಪ್ಪ ಸ್ವಾಮಿ ನಡೆದುಕೊಂಡು ಹೋದ ದಾರಿ) ಕಾಡು ಹಾದಿಯ ಇಕ್ಕೆಲಗಳಲ್ಲಿ ನೂರಾರು ತಾತ್ಕಾಲಿಕ ಬೀರಿಗಳು ಎದುರಾಗುತ್ತವೆ. ಇಲ್ಲಿ ಆಹಾರ ಸೇವನೆ ಜತೆಗೆ ವಿಶ್ರಾಂತಿಗೂ ಅವಕಾಶವಿದೆ. ಕೇವಲ 14 ದಿನಗಳಲ್ಲಿ ಬೀರಿ (ಅಂಗಡಿ) ನಡೆಸುವ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಆದರೆ ಈ ವರ್ಷ ಬೀರಿಗಳೆಲ್ಲ ಬಿಕೋ ಎನ್ನುತ್ತಿವೆ. ವ್ಯಾಪಾರದ ಕೊರತೆ ಎದುರಿಸುತ್ತಿರುವ ವ್ಯಾಪಾರಿಗಳು, ಇರುವ ಭಕ್ತರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. “ಮಲೆ ಚೌಟು’ವನ್ನುತುಂಬಾ ಆರಾಮವಾಗಿ ನಡೆಸಲು ಸಾಧ್ಯವಾಗುತ್ತಿದೆ. ಒಂದಷ್ಟು ಭಕ್ತರು “ಮಲೆ ಚೌಟ’ದೆ ನೇರವಾಗಿ ಪಂಬಾಗೆ ಆಗಮಿಸಿ, ಇಲ್ಲಿಂದ ಮುಂದಿನ 8 ಕಿಲೋ ಮೀಟರ್‌ ಹಾದಿಯನ್ನು ಕ್ರಮಿಸುತ್ತಾರೆ. ಇಲ್ಲಿನ ನೀಲಿಮಲೆ, ಗಣೇಶ ಬೆಟ್ಟಗಳಲ್ಲೂ ಈಗ ಆರಾಮವಾಗಿ ನಡೆದುಕೊಂಡು ಹೋಗಬಹುದು. ಪ್ರತಿದಿನ ಶಬರಿಮಲೆಯಲ್ಲಿ ಅನ್ನದಾನ ನಡೆಯುತ್ತದೆ. ಅನ್ನ ಪ್ರಸಾದ ಸೇವಿಸಿದವರ ಸಂಖ್ಯೆಯನ್ನೇ ಗಮನಿಸುವುದಾದರೆ, ಇದರ ಸಂಖ್ಯೆ 1.5 ಲಕ್ಷ ಮೀರುವುದಿಲ್ಲ.

ಸರತಿ ಸಾಲಿಲ್ಲ
ಮಕರ ಸಂಕ್ರಮಣದ ಸಂದರ್ಭ ಭಾರೀ ಸರತಿ ಸಾಲು ಸಾಮಾನ್ಯ. ಕೆಲವು ವರ್ಷಗಳಲ್ಲಿ ನೀಲಿಮಲೆ ಬೆಟ್ಟದಿಂದಲೇ ಕ್ಯೂ ಇದ್ದ ಉದಾಹರಣೆಗಳೂ ಇವೆ. ಭಾರೀ ಸಂಖ್ಯೆಯ ಜನರನ್ನು ನಿಯಂತ್ರಿಸಲು ಒಂದೊಂದು ಕೊಠಡಿಗಳಾಗಿ ಮಾಡಿ, ಭಕ್ತರನ್ನು ಮುಂದೆ ಬಿಡಲಾಗುತ್ತದೆ. ಆದರೆ ಈ ವರ್ಷ ಕೊಠಡಿ ವಿಷಯ ಬಿಡಿ, 18 ಪಡಿ (ಮೆಟ್ಟಿಲು) ಗಳನ್ನು ಕೂಡ ಸುಲಲಿತ ವಾಗಿ ಏರಬಹುದು. ಒತ್ತಡಕ್ಕೆ ಒಳಗಾಗದ ಪೊಲೀಸರು ಮುಂದೆ ತಳ್ಳುವ ಕಾಯಕ ಮಾಡುವುದೇ ಇಲ್ಲ, ವಿನಯದಿಂದ ಪಡಿ ಹತ್ತಲು ಸಹಕರಿಸುತ್ತಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 60ರಷ್ಟು ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಮೊದಲೆಲ್ಲ ರಾತ್ರಿ ಪೂರ್ತಿ ಬೀರಿಗಳು ತೆರೆದಿರುತ್ತಿದ್ದವು. ಅಂದರೆ ರಾತ್ರಿಯಿಡೀ ದೊಡ್ಡ ಸಂಖ್ಯೆಯ ಭಕ್ತರು ನಡೆದು ಹೋಗುತ್ತಿದ್ದರು. ಆದರೆ ಈ ವರ್ಷ ಸರಿರಾತ್ರಿಯಲ್ಲಿ ಹಲವು ಅಂಗಡಿಗಳವರು ಬಾಗಿಲು ಮುಚ್ಚುವ ಪ್ರಸಂಗ ಎದುರಾಗಿದೆ.
ಧರ್ಮೇಶ್‌ ಅಲುದಾ, ವ್ಯಾಪಾರಿ

 ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.