ರಣಜಿ ಕ್ವಾ.ಫೈನಲ್: ಮಾಯಾಂಕ್ ಗೈರು, ಗೌತಮ್ ವಾಪಸ್
Team Udayavani, Jan 13, 2019, 12:50 AM IST
ಬೆಂಗಳೂರು: ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜ.15ರಿಂದ ರಾಜಸ್ಥಾನ ತಂಡದ ವಿರುದ್ಧ ಆರಂಭವಾಗಲಿರುವ ರಣಜಿ ಕ್ರಿಕೆಟ್ ಕ್ವಾರ್ಟರ್ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.
ಟೆಸ್ಟ್ ಸರಣಿ ಮುಗಿಸಿ ತವರಿಗೆ ವಾಪಸ್ ಆಗಿರುವ ಮಾಯಾಂಕ್ ಅಗರ್ವಾಲ್ ಗಾಯದ ಕಾರಣದಿಂದಾಗಿ ರಾಜ್ಯ ತಂಡಕ್ಕೆ ಲಭ್ಯವಿರುವುದಿಲ್ಲ. ಇನ್ನು ತಂಡಕ್ಕೆ ಅನುಭವಿ ಕೆ.ಗೌತಮ್ ವಾಪಸ್ ಆಗಿದ್ದಾರೆ. ಶುಭಾಂಗ್ ಹೆಗ್ಡೆ ತಂಡದಿಂದ ಹೊರಬಿದ್ದಿದ್ದಾರೆ. ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕ ತಂಡ: ಮನೀಶ್ ಪಾಂಡೆ (ನಾಯಕ), ಶ್ರೇಯಸ್ ಗೋಪಾಲ್ (ಉಪ ನಾಯಕ), ಆರ್.ವಿನಯ್ ಕುಮಾರ್, ಡಿ.ನಿಶ್ಚಲ್, ಕರುಣ್ ನಾಯರ್, ಆರ್.ಸಮರ್ಥ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಕೆ.ಗೌತಮ್, ಪ್ರಸಿದ್ಧ್ ಎಂ.ಕೃಷ್ಣ, ಕೆ.ವಿ.ಸಿದ್ಧಾರ್ಥ್, ಜೆ.ಸುಚಿತ್, ಬಿ.ಆರ್.ಶರತ್, ಶರತ್ ಶ್ರೀನಿವಾಸ್, ಪವನ್ ದೇಶಪಾಂಡೆ.