ತಿಂಗಳ ಬಳಿಕ ಅಸ್ಥಿ ದರ್ಶನ
Team Udayavani, Jan 18, 2019, 12:30 AM IST
ಶಿಲ್ಲಾಂಗ್: ತಿಂಗಳ ಹಿಂದೆ ನಡೆದಿದ್ದ ಇಲ್ಲಿನ ರ್ಯಾಟ್ ಹೋಲ್ ಗಣಿ ದುರಂತದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ತೊಡಗಿರುವ ನೌಕಾ ಪಡೆಯ ಸಿಬಂದಿ, ಗುರುವಾರ ಗಣಿಯೊಳಗಿನ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬನ ಅಸ್ಥಿಪಂಜರವೊಂದು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಡಿ. 13ರಂದು ನಡೆದಿದ್ದ ಈ ಗಣಿ ದುರಂತದಲ್ಲಿ ಸುಮಾರು 20 ಕಾರ್ಮಿಕರು 370 ಅಡಿ ಆಳದಲ್ಲಿ ಸಿಲುಕಿದ್ದರು. ಲಿಟೇನ್ ನದಿ ಹಾದು ಹೋಗುವ ಬೆಟ್ಟ ಗುಡ್ಡಗಳಲ್ಲಿ ಈ ಗಣಿಗಾರಿಕೆ ನಡೆಸುತ್ತಿದ್ದರಿಂದ ಡಿ. 13ರ ಮುಂಜಾನೆ, ಗಣಿಯೊಳಗೆ ನದಿ ನೀರು ನುಗ್ಗಿತ್ತು. ಈ ದುರ್ಘಟನೆಯಲ್ಲಿ ಐವರು ಈಜಿ ಮೇಲೆ ಬಂದಿದ್ದರೂ, ಉಳಿದವರು ಒಳಗಡೆಯೇ ಸಿಲುಕಿದ್ದರು.
ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ವಾಯು ಪಡೆಯ ತಜ್ಞರು ಈ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆರ್ಒವಿ (ರಿಮೋಟ್ಲೀ ಆಪರೇಟೆಡ್ ವೆಹಿಕಲ್ಸ್) ಮೂಲಕ ನೀರು ತುಂಬಿರುವ ಗಣಿಯೊಳಗೆ ಸರ್ವೇಕ್ಷಣೆ ನಡೆಸುತ್ತಿರುವ ನೌಕಾಪಡೆಯ ತಂಡಕ್ಕೆ 160ರಿಂದ 210 ಅಡಿ ಆಳದ ಅಂತರದಲ್ಲಿ ಭಾಗಶಃ ಅಸ್ಥಿಪಂಜರವಾಗಿರುವ ಕಳೇಬರವೊಂದು ಪತ್ತೆಯಾಗಿದೆ. ಇದರ ಜತೆಗೆ ಇನ್ನೂ ಕೆಲವು ಅಸ್ಥಿಪಂಜರಗಳು ಕಾಣಿಸಿವೆ ಎಂದು ಹೇಳಲಾಗಿದೆ. ಕಾರ್ಯಾಚರಣೆ ತಿಂಗಳು ದಾಟಿದ್ದರಿಂದ ಕಾರ್ಮಿಕರು ಬದುಕಿರಲಾರರು ಎಂಬ ಅನುಮಾನಗಳಿಗೆ ಇದು ಪುಷ್ಟಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ