ಧರ್ಮಸ್ಥಳ ಮೇಳದ ಚೌಕಿಗೆ ಡಾ| ಹೆಗ್ಗಡೆ ಭೇಟಿ
Team Udayavani, Jan 21, 2019, 12:50 AM IST
ಕೋಟ: ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಜ.19ರಂದು ಕುಂದಾಪುರಕ್ಕೆ ಭೇಟಿ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರಾತ್ರಿ ಹಿಂದಿರುಗುವ ಸಂದರ್ಭ ಯಾವುದೇ ಅನಿರೀಕ್ಷಿತವಾಗಿ ಕೋಟ ಹಾಡಿಕೆರೆ ಶನೀಶ್ವರ ದೇಸ್ಥಾನದ ಸಮೀಪ ನಡೆಯುತ್ತಿದ್ದ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದರು.ನೇರವಾಗಿ ಯಕ್ಷಗಾನ ಮೇಳದ ಚೌಕಿಗೆ ತೆರಳಿದ ಹೆಗ್ಗಡೆಯವರು ಗಣಪತಿಗೆ ವಂದಿಸಿ, ಮೇಳದ ಕಲಾವಿದರಾದ ಕುಂಬ್ಳೆ ಶ್ರೀಧರ ರಾವ್, ಗೋವಿಂದ ಭಟ್ ಸೇರಿದಂತೆ ಎಲ್ಲ ಕಲಾವಿದರನ್ನು ಮಾತನಾಡಿಸಿ. ಯೋಗಕ್ಷೇಮ ಹಾಗೂ ಪ್ರದರ್ಶನದ ಕುರಿತು ವಿಚಾರಿಸಿದರು. ಅನಂತರ ಭಕ್ತರನ್ನು ಆಶೀರ್ವದಿಸಿದರು. ಸೇವಾಕರ್ತರ ಮನವಿಯ ಮೇರೆಗೆ ಅಲ್ಲೇ ಪಕ್ಕದಲ್ಲಿದ್ದ ಶನೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೇವಾಕರ್ತರಾದ ರಾಮಸ್ವಾಮಿ ಹಾಗೂ ಕುಟುಂಬದವರು ಮತ್ತು ಮೇಳದ ಪ್ರಬಂಧಕರಾದ ಪುಷ್ಪರಾಜ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !