ಅನುಕ್ತ: ಯಶೋಧೆಯ ಸಖ ಹೀರೋ ಆದ ಕಥೆ!
Team Udayavani, Jan 27, 2019, 9:49 AM IST
ಯಶೋಧೆ ಧಾರಾವಾಹಿಯ ನಾಯಕನಾಗಿ ಮನೆ ಮಾತಾಗಿದ್ದವರು ಕಾರ್ತಿಕ್ ಅತ್ತಾವರ. ಇವರು ಅಪ್ಪಟ ತುಳುನಾಡ ಹುಡುಗ. ಈ ಹಿಂದೆ ರಿಕ್ಷಾ ಡ್ರೈವರ್ ಎಂಬ ತುಳು ಚಿತ್ರದ ಮೂಲಕವೇ ಕಾರ್ತಿಕ್ ನಟನಾಗಿ ಹೊರ ಹೊಮ್ಮಿದ್ದರು. ಆದರೆ ಅವರ ಆಸೆಗಳೇ ಬೇರೆಯದ್ದಿದ್ದವು.
ಅನುಕ್ತ ಚಿತ್ರಕ್ಕೆ ಥ್ರಿಲ್ಲರ್ ಶೈಲಿಯ ಕಥೆ ಬರೆದಿದ್ದು ಇದೇ ಕಾರ್ತಿಕ್ ಅತ್ತಾವರ ಎಂಬುದು ನಿಜವಾದ ವಿಶೇಷ ಮತ್ತು ಅಚ್ಚರಿ. ಬಹುಶಃ ಅವರೂ ತುಳು ನಾಡಿನವರೇ ಆದ್ದರಿಂದ ಆ ಮಣ್ಣಿನ ಘಮಲಿನ ಕಥೆಯನ್ನೇ ಹೆಣೆದಿದ್ದಾರೆ. ಆದರೆ ಈ ಕಥೆ ಬರೆಯುವಾಗ ಅವರಲ್ಲಿ ಇದೊಂದು ಒಳ್ಳೆ ಚಿತ್ರವಾಗಬೇಕೆಂಬ ಬಯಕೆ ಇತ್ತೇ ಹೊರತು ತಾನು ನಾಯಕನಾಗ ಬೇಕೆಂಬ ಯಾವ ಇರಾದೆಯೂ ಇರಲಿಲ್ಲವಂತೆ.
ಕಡೆಗೆ ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಲು ತಯಾರಾಗಿ, ಹರೀರ್ಶ ಬಂಗೇರ ನಿರ್ಮಾಣ ಮಾಡಲು ಮುಂದಾಗಿದ್ದರು. ಇದಕ್ಕೆ ಅನುಕ್ತ ಎಂಬ ಹೆಸರು ಫಿಕ್ಸಾಗಿ ಸಂಗೀತ ಭಟ್ ನಾಯಕಿಯಾಗಿಯೂ ಆಯ್ಕೆಯಾಗಿದ್ದರು. ಆದರೆ ನಾಯಕ ಯಾರೆಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಕಡೆಗೆ ತಾವೇ ಆ ಪಾತ್ರಕ್ಕೆ ಸೂಕ್ತ ಎಂಬ ಅಭಿಪ್ರಾಯ ಚಿತ್ರ ತಂಡದಿಂದ ಬಂದಾಗ ಕಾರ್ತಿಕ್ ಅನಿರೀಕ್ಷಿತವಾಗಿ ನಾಯಕನಾಗಿ ನಟಿಸಿದ್ದರಂತೆ.
ಆದರೆ, ಅನುಕ್ತ ಚಿತ್ರದ ಮೂಲಕ ಕಾರ್ತಿಕ್ ನಾಯಕನಾಗಿ ನೆಲೆಗೊಳ್ಳೋದು ಖಚಿತ ಎಂಬಂತಿದೆ. ಯಶೋಧೆ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದ ಕಾತರ್ಿಕ್ ಇದೀಗ ಹಿರಿತೆರೆಗೂ ಲಗ್ಗೆಯಿಡಲು ತಯಾರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್