ಡಾನ್ ಆಗಲು ಮಿತ್ರನ ರುಂಡ ಕತ್ತರಿಸಿದರು!
Team Udayavani, Jan 29, 2019, 12:30 AM IST
ಬೆಳಗಾವಿ: ಗ್ರಾಮದಲ್ಲಿ ಡಾನ್ಗಳೆನಿಸಿ ಕೊಳ್ಳಬೇಕೆಂಬ ಭ್ರಮೆಯಲ್ಲಿ ಮೂವರು ಯುವಕರು ತಮ್ಮ ಆಪ್ತ ಗೆಳೆಯನ ರುಂಡ ಕಡಿದು ಕೊಲೆ ಮಾಡಿದ ಘಟನೆ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ತಾಪಂ ಮಾಜಿ ಸದಸ್ಯನ ಪುತ್ರ ವಿಶ್ವನಾಥ ಯಲ್ಲಪ್ಪ ಬೀರಮುತ್ತಿ(23) ಕೊಲೆ ಯಾದ ಯುವಕ. ಭಾನುವಾರ ರಾತ್ರಿ ನಾಲ್ವರು ಸ್ನೇಹಿತರು ಸೇರಿ ಪಾರ್ಟಿ ಮಾಡಿ ವಾಪಸಾಗುತ್ತಿದ್ದಾಗ ಹತ್ಯೆ ನಡೆದಿದ್ದು, ಗ್ರಾಮದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಿಂಭಾಗದಲ್ಲಿ ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ನಡೆದದ್ದೇನು?: ಗೆಳೆಯರೆಲ್ಲ ಸೇರಿ ಶಾಲೆಯ ಹಿಂಭಾಗದ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿದ್ದಾಗ ಪರಸ್ಪರ ಜಗಳವಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಮೂವರು ಸ್ನೇಹಿತರು ವಿಶ್ವನಾಥನನ್ನು ಹತ್ಯೆ ಮಾಡಿದ್ದಾರೆ. ಕೊಲೆ ಪೂರ್ವ ನಿಯೋಜಿತವಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿಂದೆಯೂ 2-3 ಸಲ ಇವರ ಮಧ್ಯೆ ಜಗಳ ವಾಗಿತ್ತು. ನಂತರ ರಾಜಿಯಾಗಿದ್ದರು. ಭಾನುವಾರ ಮತ್ತೆ ಜಗಳ ನಡೆದಿದ್ದು, ಕೊಲೆ ಯಲ್ಲಿ ಅಂತ್ಯವಾಗಿದೆ. ಸ್ನೇಹಿತರ ಗುಂಪಿನಲ್ಲಿ ತಾವು ಮೇಲುಗೈ ಸಾಧಿಸಬೇಕೆನ್ನುವ ಉದ್ದೇಶದಿಂದ ಯುವಕನ ಹತ್ಯೆ ನಡೆದಿರು ವುದು ಪ್ರಾಥ ಮಿಕ ಹಂತದ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಡಾ. ಡಿ.ಸಿ. ರಾಜಪ್ಪ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್