ತಾಕ್ಕತ್ತಿದ್ದರೆ ಬಿಜೆಪಿಯವರು ಅವಿಶ್ವಾಸ ಮಂಡಿಸಲಿ: ದೇವೇಗೌಡ ಸವಾಲು
Team Udayavani, Feb 7, 2019, 5:32 AM IST
ಹೊಸದಿಲ್ಲಿ : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಮುಖ್ಯಸ್ಥರಾಗಿರುವ ಎಚ್ ಡಿ ದೇವೇಗೌಡ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದು ‘ತಾಕತ್ತಿದ್ದರೆ ರಾಜ್ಯದಲ್ಲಿನ ಕಾಂಗ್ರೆಸ್ -ಜೆಡಿಎಸ್ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿ’ ಎಂದು ತೊಡೆ ತಟ್ಟಿದ್ದಾರೆ.
‘ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು; ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎಂದು ಈ ವರೆಗೆ ಸಾವಿರ ಬಾರಿಯಾದರೂ ಹೇಳಿದ್ದಾರೆ; ಆದರೆ ಅಂಥದ್ದೇನೂ ಆಗಿಲ್ಲ. ಸಮ್ಮಿಶ್ರ ಸರಕಾರದ ಭವಿಷ್ಯ ಸದನದಲ್ಲೇ ತೀರ್ಮಾನವಾಗಬೇಕು’ ಎಂದು ದೇವೇಗೌಡ ಗುಡುಗಿದರು.
‘ಬಿಜೆಪಿ ನಾಯಕರ ಲಂಗುಲಗಾಮಿಲ್ಲದ ಹೇಳಿಕೆಗಳ ಬಗ್ಗೆ ನಾನೇನೂ ಹೇಳುವುದಿಲ್ಲ; ಅವರೇನು ಮಾಡ್ತಾರೋ ಅದನ್ನು ಮಾಡಲಿ; ಸಮ್ಮಿಶ್ರ ಸರಕಾರಕ್ಕೆ ಬಹುಮತದ ಕೊರತೆ ಉಂಟಾಗಿ ಅದು ಅಲ್ಪ ಮತಕ್ಕೆ ಕುಸಿದಿದೆ ಎಂದು ಅವರಿಗೆ ಅನ್ನಿಸಿದರೆ ಅದನ್ನು ಅವರು ಸಾಬೀತು ಪಡಿಸಲಿ’ ಎಂದು ದೇವೇಗೌಡ ಖಡಕ್ ಮಾತನ್ನಾಡಿದರು.
‘ಪ್ರತಿಯೋರ್ವ ಶಾಸಕರಿಗೂ ಅವರದ್ದೇ ಆದ ಕೆಲಸಗಳು, ಜರೂರುಗಳು ಇರುತ್ತವೆ. ಹಾಗಾಗಿ ಕೆಲವರು ಸದನದಲ್ಲಿ ಕೆಲವೊಮ್ಮೆ ಹಾಜರಿರುವುದಿಲ್ಲ. ಕೆಲವರು ಸರಕಾರದ ಮೇಲಿನ ಸಿಟ್ಟಿನಿಂದ ಸದನಕ್ಕೆ ಬಾರದಿರುವ ಸಾಧ್ಯತೆಯೂ ಇದೆ; ಹಾಗಿದ್ದರೂ ಸರಕಾರಕ್ಕೆ ಗೈರು ಶಾಸಕರ ಬೆಂಬಲ ಇಲ್ಲ ಎಂದು ಅನುಮಾನಿಸುವುದು ಸರಿಯಲ್ಲ; ಅಂತಹ ನಂಬಿಕೆ ಅವರಿಗಿದ್ದರೆ ಅವರು ಅವಿಶ್ವಾಸ ಗೊತ್ತುವಳಿ ಮಂಡಿಸಲಿ’ ಎಂದು ದೇವೇಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು