ಸೆನಗಲ್ನಿಂದ ಐವರಿ ಕೋಸ್ಟ್ಗೆ ಪರಾರಿಯಾಗಲಿದ್ದ ರವಿ ಪೂಜಾರಿ !
Team Udayavani, Feb 8, 2019, 12:30 AM IST
ಮಂಗಳೂರು: ಆಫ್ರಿಕದ ಸೆನಗಲ್ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ನಾಲ್ಕು ತಿಂಗಳ ಹಿಂದೆಯಷ್ಟೇ ಆ ದೇಶಕ್ಕೆ ಬಂದು ತಾತ್ಕಾಲಿಕವಾಗಿ ನೆಲೆ ನಿಂತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಒಂದುವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳು ಹೆಣೆದಿದ್ದ ಬಲೆಗೆ ಜ. 21ರಂದು ಬೀಳದೆ ಹೋಗುತ್ತಿದ್ದರೆ ಆತ 15 ದಿನದೊಳಗೆ ಅಲ್ಲಿಂದ ಸಮೀಪದ ಐವರಿ ಕೋಸ್ಟ್ಗೆ ಹೋಗಿ ಶಾಶ್ವತವಾಗಿ ಭೂಗತ ನಾಗುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಸದ್ಯದಲ್ಲೇ ಆತ ಐವರಿ ಕೋಸ್ಟ್ಗೆ ಸ್ಥಳಾಂತರ ಆಗಲಿದ್ದಾನೆ ಎಂಬ ಸುಳಿವು ಪಡೆದೇ ಎರಡು ತಿಂಗಳ ಹಿಂದೆ ಮಂಗಳೂರು ಮೂಲದ ಮತ್ತೂಬ್ಬ ಭೂಗತ ಪಾತಕಿ ವಿಕ್ಕಿ ಶೆಟ್ಟಿ, ರವಿ ಪೂಜಾರಿಯನ್ನು ಮುಗಿಸುವುದಕ್ಕೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.
ಹೊಟೇಲ್ಗಳಲ್ಲಿ ಹೂಡಿಕೆ
ರವಿ ಪೂಜಾರಿ ಭಾರತದ ಹಲವು ಕಡೆಗಳಲ್ಲಿ ಕೊಲೆ ಬೆದರಿಕೆ ಕರೆಗಳನ್ನು ಮಾಡಿ ವಸೂಲಾದ ಕೋಟಿಗಟ್ಟಲೆ ರೂ. ಹಫ್ತಾ ಹಣವನ್ನು ಬರ್ಕಿನೊ ಫಾಸೊ, ಸೆನಗಲ್ನ ಡಕಾರ್, ಐವರಿ ಕೋಸ್ಟ್, ಗಹನಾ ಮೊದಲಾದ ಸಣ್ಣ ಸಣ್ಣ ದೇಶಗಳಲ್ಲಿ ಹೊಟೇಲ್ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದ. ಹೆಚ್ಚಿನ ಉದ್ಯಮಗಳಲ್ಲಿ ಭಾರತೀಯ ಮೂಲದ ಅನಿಲ್ ಅಗರ್ವಾಲ್ ಪಾಲುದಾರರು. ರವಿ ಪೂಜಾರಿ ಪತ್ನಿ ಪದ್ಮಾ ಕೂಡ ಆತನ ಉದ್ಯಮದಲ್ಲಿ ಕೈಜೋಡಿಸಿದ್ದಳು. ಆಕೆ ಕೂಡ ನಕಲಿ ಪಾಸ್ಪೋರ್ಟ್ ಹೊಂದಿದ್ದು, ಪಶ್ಚಿಮ ಆಫ್ರಿಕಾದ ದೇಶವೊಂದರಲ್ಲಿ ತಲೆಮರೆಸಿಕೊಂಡಿದ್ದಾಳೆ.
ಮುಳುವಾಯಿತು ಕ್ರಿಕೆಟ್ ಪ್ರಾಯೋಜಕತ್ವ
ಸೆನಗಲ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ಕೆಲವರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದೇ ರವಿ ಪೂಜಾರಿಗೆ ಮುಳುವಾಗಿದೆ. ಹಲವು ವರ್ಷಗಳಿಂದ ಬರ್ಕಿನೊ ಫಾಸೊ ಹಾಗೂ ಐವರಿ ಕೋಸ್ಟ್ಗಳಲ್ಲಿಯೇ ಹೆಚ್ಚಾಗಿ ನೆಲೆಸುತ್ತಿದ್ದ ಈತ ಬರ್ಕಿನೊ ಫಾಸೊದಲ್ಲಿ “ನಮಸ್ತೆ ಇಂಡಿಯಾ’ ಹಾಗೂ ಸೆನಗಲ್ನಲ್ಲಿ “ಮಹಾರಾಜ’ ಎಂಬ ಎರಡು ಹೊಟೇಲ್ಗಳನ್ನು ಭಾರತೀಯ ಮೂಲದ ಅನಿಲ್ ಅಗರ್ವಾಲ್ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ. ಆತ ಸೆನಗಲ್ನಲ್ಲಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ 3 ತಿಂಗಳ ಹಿಂದೆಯಷ್ಟೇ ಗುಪ್ತಚರ ಅಧಿಕಾರಿಗಳಿಗೆ ಲಭಿಸಿತ್ತು. ಸೂಕ್ತ ಸುಳಿವು ಕೊಟ್ಟದ್ದು, ಆತನ ಜತೆಗೆ ಓಡಾಡುತ್ತಿದ್ದವರು ಐದಾರು ತಿಂಗಳ ಹಿಂದೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯ.
ಪಂದ್ಯಾಟದ ಪ್ರಾಯೋಜಕತ್ವವನ್ನು ರವಿ ಪೂಜಾರಿ ಮತ್ತು ಬೆಂಬಲಿಗರು ವಹಿಸಿದ್ದರು. ಪ್ರತ್ಯೇಕ ಟೀ-ಶರ್ಟ್ಗಳನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ “ಇಂಡಿಯನ್ ಸೆನಗಲ್ ಕ್ರಿಕೆಟ್ ಕ್ಲಬ್’ ಎಂದು ಬರೆಯಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸುವುದಕ್ಕೆ ಖುದ್ದು ರವಿ ಪೂಜಾರಿಯೇ ಬಂದಿದ್ದು, ಆ ಸಂದರ್ಭ ಭಾವಚಿತ್ರಗಳು ಗುಪ್ತಚರ ಅಧಿಕಾರಿಗಳಿಗೆ ಲಭಿಸಿದ್ದವು. ಆತ ಅಲ್ಲೇ ಇರುವುದು ದೃಢವಾದ್ದರಿಂದ ಅಧಿಕಾರಿಗಳು 3 ತಿಂಗಳಿನಿಂದ ಆತನ ಬೆನ್ನು ಬಿದ್ದಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!