ವಾಹನ ಚಾಲಕರಿಗೆ ಶಾಲಾ ಮಕ್ಕಳಿಂದ ಸುರಕ್ಷಾ ಜಾಗೃತಿ
Team Udayavani, Feb 9, 2019, 12:50 AM IST
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಸಾರಿಗೆ ಇಲಾಖೆ ಮತ್ತು ಮೋಟಾರು ಇಲಾಖೆ, ರೋಟರಿ ಕ್ಲಬ್ ಉಡುಪಿ, ರಾಯಲ್ಸ್ ಮತ್ತು ಜೇಸಿಐ ಮಣಿಪಾಲ ಹಿಲ್ ಸಿಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ – 2019ರ ಅಂಗವಾಗಿ ರಸ್ತೆ ಸುರಕ್ಷತೆ – ಜೀವದ ರಕ್ಷೆ ಎನ್ನುವ ಚಿಂತನೆಯಡಿ ಫೆ. 8 ರಂದು ಉಡುಪಿ ಸಿಟಿ , ಸರ್ವಿಸ್ ನಿಲ್ದಾಣ, ರಿಕ್ಷಾ ನಿಲ್ದಾಣಗಳಲ್ಲಿ ಶಾಲಾ ಮಕ್ಕಳಿಂದ ಚಾಲಕರಿಗೆ ಗುಲಾಬಿ ಹೂವನ್ನು ನೀಡಿ ರಸ್ತೆ ಸುರಕ್ಷತೆಯ ಬಗ್ಗೆ ವಿನೂತನ ಜಾಗೃತಿ , ಮಾಹಿತಿ ನೀಡಲಾಯಿತು.
ಮಣಿಪಾಲ ಮಾಧವ ಕೃಪಾ ಶಾಲೆಯ 30 ವಿದ್ಯಾರ್ಥಿಗಳು ಭಾಗವಹಿಸಿ ಈ ಅಭಿಯಾನದಲ್ಲಿ ಕೈಜೋಡಿಸಿದರು. ಉಪ ಸಾರಿಗೆ ಆಯುಕ್ತ ರಮೇಶ್ ಎಂ. ವರ್ಣೇಕರ್ ಸಮಾಜದಲ್ಲಿ ಚಾಲಕರ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣ ಎಂದರು.
ಮೋಟಾರು ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ, ಮಾರುತಿ ನಾಯಕ್, ಅಧೀಕ್ಷಕ ಕುಮಾರ್, ಸಾರಿಗೆ ಇಲಾಖೆಯ ಶಾಂತರಾಜು ಮತ್ತು ಸಿಬಂದಿ ವರ್ಗ, ರೋಟರಿ ಕ್ಲಬ್ ಉಡುಪಿ ರಾಯಲ್ಸ್ನ ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ಸದಸ್ಯರಾದ ತೇಜೇಶ್ವರ ರಾವ್, ಚಂದ್ರಶೇಖರ್, ಯಶವಂತ್, ವಿಜಯ್ ಜ್ಯೋತಿ ಕೃಷ್ಣಮೂರ್ತಿ, ಕೀರ್ತಿರಾಜ್, ದಿವ್ಯಾ ಶೆಟ್ಟಿ, ವೇಣುಗೋಪಾಲ್ ಕೆಂಜೂರು, ಗುರುಪ್ರಸಾದ್ ಪಾಲನ್, ವಲಯ ಸೇನಾನಿ ಚಂದ್ರ ನಾಯ್ಕ… , ಜೇಸಿಐ ಮಣಿಪಾಲ ಹಿಲ್ ಸಿಟಿಯ ಅಧ್ಯಕ್ಷ ರತ್ನಾಕರ್ ಜಿ.ಎಸ್., ಸದಸ್ಯರಾದ ಮನೋಹರ್ ಕಾಂಚನ್, ಶಿವಪ್ರಸಾದ್, ಮಾಧವಕೃಪಾ ಶಾಲೆಯ ಆಡಳಿತ ವಿಭಾಗದ ರಾಜೇಶ್ ಡಿ. ಶೆಣೈ , ಶಿಕ್ಷಕ ಪ್ರಶಾಂತ್ ಕುಮಾರ್, ನಗರಸಭಾ ಸದಸ್ಯರಾದ ಟಿ. ಜಿ. ಹೆಗ್ಡೆ , ಮಂಜುನಾಥ್ ಮಣಿಪಾಲ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್