ರಾಜಸ್ಥಾನ: ಕೋಟಾ ಆಗ್ರಹಿಸಿ ಮುಂದುವರಿದ ಗುಜ್ಜರ್ ಧರಣಿ,ರೈಲು ತಡೆ
Team Udayavani, Feb 9, 2019, 11:33 AM IST
ಜೈಪುರ : ಗುಜ್ಜರ್ ಮತ್ತು ಇತರ ಸಮುದಾಯದವರು ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ತಮಗೆ ಶೇ.5ರ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಇಂದು ನಿರಂತರ ಎರಡನೇ ದಿನವೂ ತಮ್ಮ ರೈಲ್ ರೋಕೋ ಚಳವಳಿಯನ್ನು ನಡೆಸಿದ್ದಾರೆ.
ರಾಜಸ್ಥಾನದ ಸವಾಯ್ ಮಾಧೋಪುರ ಜಿಲ್ಲೆಯಲ್ಲಿ ಗುಜ್ಜರ್ ನಾಯಕ ಕಿರೋರಿ ಸಿಂಗ್ ಬೈನ್ಸ್ಲಾ ಮತ್ತು ಆತನ ಬೆಂಬಲಿಗರು ರೈಲು ಹಳಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಕಾರಣ ಮೂರು ರೈಲುಗಳನ್ನು ರದ್ದುಪಡಿಸಬೇಕಾಯಿತು ಮತ್ತು ಒಂದು ರೈಲಿನ ಮಾರ್ಗ ಬದಲಿಸಬೇಕಾಯಿತು. ಕೋಟಾ ವಿಭಾಗದ ಸವಾಯ್ ಮಾಧೋಪುರ – ಬಯಾನಾ ರೈಲ್ವೆ ಸೆಕ್ಷನ್ ನಲ್ಲಿ ರೈಲುಗಳ ಓಡಾಟ ತೀವ್ರವಾಗಿ ಬಾಧಿತವಾಯಿತು.
ಗುಜ್ಜರ್, ರೈಕಾ ರೇಬಾರಿ, ಗಾದಿಯಾ ಲೂಹಾರ್, ಬಂಜಾರಾ ಮತ್ತು ಗದಾರಿಯಾ ಸಮುದಾಯದವರು ತಮಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣಾಲಯಗಳಲ್ಲಿ ಶೇ.5ರ ಮೀಸಲಾತಿಯನ್ನು ಕಲ್ಪಿಸಬೇಕೆಂದು ಆಗ್ರಹಿಸುತ್ತಿದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ
Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್
Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ