ಸದನದಲ್ಲಿ ರಾಮಾಯಣ ಗದ್ದಲ
Team Udayavani, Feb 12, 2019, 6:37 AM IST
ಬೆಂಗಳೂರು: ಆಪರೇಷನ್ ಆಡಿಯೋ ಗದ್ದಲ ಸದನದಲ್ಲಿ ರಾಮಾಯಣ ನೆನಪಿಸಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಸದನದಲ್ಲಿ ರಾಮಾಯಣ ಉಲ್ಲೇಖೀಸಿ, “ಹಾದಿಯಲ್ಲಿ ಹೋಗುವ ವ್ಯಕ್ತಿ, ಸೀತೆಯ ಬಗ್ಗೆ ಮಾತನಾಡಿದಾಗ ರಾಮ ಅದನ್ನು ಗಂಭೀರವಾಗಿ ಪರಿಗಣಿಸಿ ಸೀತೆಗೆ ಶಿಕ್ಷೆ ಕೊಡುತ್ತಾನೆ’ ಎಂದರು.
ಆಗ ಬಿಜೆಪಿ ಸದಸ್ಯರೊಬ್ಬರು, “ರಾಮಾಯಣ ಕಾಲ್ಪನಿಕ ಕಥೆ’ ಎಂದಾಗ ಇದಕ್ಕೆ ಕೃಷ್ಣ ಬೈರೆಗೌಡ ಅಲ್ಲಗಳೆದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು, “ರಾಮಾಯಣ ಕಾಲ್ಪನಿಕ ಕಥೆ ಎಂದು ಕಾಂಗ್ರೆಸ್ ಪಕ್ಷವೇ ಸುಪ್ರೀ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದೆ’ ಎಂದಾಗ ಕೃಷ್ಣ ಬೈರೇಗೌಡ ತಮ್ಮ ಹೇಳಿಕೆ ಹಿಂಪಡೆದರು.
ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಮಾತನಾಡಿ, “ಸೀತೆ ಮೇಲೆ ಆರೋಪ ಬಂದಾಗ ಅವಳು ಅಗ್ನಿ ಸ್ಪರ್ಶ ಮಾಡಿದ್ದಳು. ಈಗ ನಿಮ್ಮ ಮೇಲೆ ಆರೋಪ ಬಂದ ಕೂಡಲೇ ನೀವೇಕೆ ಶಿಕ್ಷೆಗೊಳಗಾಗುತ್ತೀರಿ? ನೀವು ಸೀತೆ ಆಗಬೇಡಿ ರಾಮನಾಗಿ’ ಎಂದು ಸ್ಪೀಕರ್ ರಮೇಶ್ ಕುಮಾರ್ಗೆ ಹೇಳಿದರು.
ಕೃಷ್ಣಬೈರೇಗೌಡ ಮತ್ತೆ ರಾಮಾಯಣ ಪ್ರಸ್ತಾಪಿಸಲು ಮುಂದಾದಾಗ ತಡೆದ ಸ್ಪೀಕರ್ ರಮೇಶ್ ಕುಮಾರ್, “ಈಗ ರಮೇಶ್ ಕುಮಾರ್ ರಾಮಾಯಣ ಮುಗಿಸಿ, ನಂತರ ಆ ರಾಮಾಯಣ ನೋಡೋಣ’ ಎಂದು ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು